ಮಂಡ್ಯ : ರೈತರಿಗೆ ಕಳಪೆ ಪಶು ಆಹಾರ ವಿತರಿಸಿದ ಹಿನ್ನೆಲೆ ಆಹಾರ ತಿಂದ ಹಸುಗಳಿಂದ ಕಡಿಮೆ ಹಾಲು ಪೂರೈಕೆ ಆಗುತ್ತಿದೆ ಎಂದು ಆರೋಪಿಸಿ ಸರ್ಕಾರ ಹಾಗೂ ಮನ್ಮುಲ್ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಚನ್ನಸಂದ್ರದ ಹಾಲಿನ ಡೈರಿ ಬಳಿ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ರೈತ ಮುಖಂಡ ಲಕ್ಷ್ಮಣ್ ಚನ್ನಸಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಳಪೆ ಪಶು ಆಹಾರ ಕೊಟ್ಟು ಹಸುಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಹೆಚ್ಚು ಲೀಟರ್ ಹಾಲು ಕೊಡುತ್ತಿದ್ದ ಹಸುಗಳು ಕಡಿಮೆ ಹಾಲು ಪೂರೈಕೆ ಮಾಡ್ತಿದ್ದವೆ. ಗುಣಮಟ್ಟದ ಆಹಾರ ಕೊಡದೆ ರೈತರಿಗೆ ಅನ್ಯಾಯ ಮಾಡ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಸರ್ಕಾರ ಹಾಲಿನ ದರ 1.50 ರೂ ಕಡಿತ ಮಾಡಿ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಸರ್ಕಾರ ರೈತರ ನೆರವಿಗೆ ಮುಂದಾಗುವಂತೆ ಎಂದು ರೈತರು ಆಗ್ರಹಿಸಿದರು.