Tuesday, June 24, 2025
26.6 C
Bengaluru
Google search engine
LIVE
ಮನೆ#Exclusive Newsಈಶಾ ಫೌಂಡೇಷನ್ ಮೇಲೆ 150 ಪೊಲೀಸರ ದಾಳಿ!

ಈಶಾ ಫೌಂಡೇಷನ್ ಮೇಲೆ 150 ಪೊಲೀಸರ ದಾಳಿ!

ಈಶಾ ಫೌಂಡೇಷನ್ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳ ವಿವರಗಳನ್ನು ಸಂಗ್ರಹಿಸಿ ತನ್ನ ಮುಂದೆ ಹಾಜರುಪಡಿಸುವಂತೆ ಕೊಯಮತ್ತೂರು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ನೀಡಿದ ಬೆನ್ನಲ್ಲೇ, ತೊಂಡಮತ್ತೂರ್‌ನಲ್ಲಿರುವ ಪ್ರತಿಷ್ಠಾನದ ಆಶ್ರಮದ ಮೇಲೆ ಮಂಗಳವಾರ ಸುಮಾರು 150 ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ.ಸಹಾಯ ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿ ಮತ್ತು ಮೂವರು ಡಿಎಸ್‌ಪಿಗಳ ನೇತೃತ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ ಎಂದು ವರದಿ ತಿಳಿಸಿವೆ.ಸಹಾಯ ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ಜೆಯ ಅಧಿಕಾರಿ ಮತ್ತು  ಮೂರು ಜನ  ಡಿಎಸ್‌ಪಿಗಳ ನೇತೃತ್ವದಲ್ಲಿ ಈ ಶೋಧ ಕಾರ್ಯ ನಡೆದಿದೆ ಎಂದು ವರದಿ ತಿಳಿಸಿವೆ.”ಕೋರ್ಟ್ ಆದೇಶಕ್ಕೆ ಅನುಸಾರವಾಗಿ, ಎಸ್‌ಪಿ ಸೇರಿದಂತೆ ಪೊಲೀಸರು ಸಾಮಾನ್ಯ ವಿಚಾರಣೆಗಾಗಿ ಈಶಾ ಯೋಗ ಕೇಂದ್ರಕ್ಕೆ ಆಗಮಿಸಿದ್ದರು. ಇಲ್ಲಿನ ನಿವಾಸಿಗಳು ಮತ್ತು ಸ್ವಯಂ ಕಾರ್ಯಕರ್ತರ ಜೀವನಶೈಲಿಯನ್ನು ಅರಿತುಕೊಳ್ಳಲು ಹಾಗೂ ಅವರು ಇಲ್ಲಿಗೆ ಹೇಗೆ ಬಂದರು ಮತ್ತು ಉಳಿದುಕೊಂಡರು ಇತ್ಯಾದಿಗಳನ್ನು ತಿಳಿಯಲು ಅವರನ್ನು ವಿಚಾರಿಸಿದರು” ಎಂದು ಈಶಾ ಯೋಗ ಕೇಂದ್ರ ಹೇಳಿದೆ.

ಸನ್ಯಾಸಿನಿಯರಂತೆ ಬದುಕಲು ಯುವತಿಯರನ್ನು ಪ್ರಚೋದಿಸುತ್ತಿರುವುದು ಏಕೆ ಎಂದು ಈಶಾ ಫೌಂಡೇಷನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೆ ಪೊಲೀಸ್ ದಾಳಿ ನಡೆದಿದೆ.

ಏನಿದು ಆರೋಪ?

ನಿವೃತ್ತ ಪ್ರೊಫೆಸರ್ ಡಾ. ಎಸ್. ಕಾಮರಾಜ್ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ಸದ್ಗುರು ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ತಮ್ಮ ಇಬ್ಬರು ಹೆಣ್ಣುಮಕ್ಕಳಾದ ಗೀತಾ (42) ಮತ್ತು ಲತಾ (39) ಅವರನ್ನು ಅವರು ಬೇಡವೇಂಧರು  ಅವರಿಗೆ ವಿರುದ್ಧವಾಗಿ ಈಶಾ ಫೌಂಡೇಷನ್‌ನಲ್ಲಿ ಬಂಧಿಸಿಡಲಾಗಿದೆ ಎಂದು ಅವರು ಆರೋಪಿಸಿದ್ದರು. ತಮ್ಮ ಸಹಜ ಜೀವನವನ್ನು ತ್ಯಜಿಸುವಂತೆ ಬ್ರೈನ್‌ವಾಶ ಮಾಡಿರುವುದಲ್ಲದೆ, ಸನ್ಯಾಸಿಗಳಂತೆ ಜೀವನಶೈಲಿ ಅಳವಡಿಸಿಕೊಳ್ಳಲು ಮತ್ತು ಕುಟುಂಬದಿಂದ ಸಂಪರ್ಕ ಕಡಿದುಕೊಳ್ಳಲು ಅವರ ಮೇಲೆ ಬಲವಂತ ಮಾಡಲಾಗಿದೆ ಎಂದು ದೂರಿದ್ದರು.ಪ್ರತಿಷ್ಠಾನದ ಚಟುವಟಿಕೆಯಲ್ಲಿ ಭಾಗಿಯಾಗುವುದಕ್ಕೂ ಮುನ್ನ ತಮ್ಮ ಹೆಣ್ಣುಮಕ್ಕಳಿಬ್ಬರೂ ಯಶಸ್ವಿ ವೃತ್ತಿ ಬದುಕು ಹೊಂದಿದ್ದರು. ಬ್ರಿಟನ್‌ನ ಪ್ರತಿಷ್ಠಿತ ವಿವಿಯೊಂದರಲ್ಲಿ ಮೆಕಟ್ರಾನಿಕ್ಸ್‌ನಲ್ಲಿ ಪದವಿ ಪಡೆದಿರುವ ಗೀತಾ, 2008ರಲ್ಲಿ ವಿಚ್ಛೇದನ ಪಡೆಯುವವರೆಗೂ ಒಳ್ಳೆ ಸಂಬಳದ ಉದ್ಯೋಗದಲ್ಲಿದ್ದರು. ವಿಚ್ಛೇದನ ಬಳಿಕ ಆಕೆ ಈಶಾದಲ್ಲಿ ಯೋಗ ತರಗತಿಗಳಿಗೆ ಹಾಜರಾಗತೊಡಗಿದಳು. ಆಕೆಯ ತಂಗಿ ಲತಾ ಸಾಫ್ಟ್‌ವೇರ್ ಎಂಜಿನಿಯರ್. ಆಕೆ ಕೂಡ ಅಕ್ಕನ ಜತೆ ಸೇರಿಕೊಂಡು ಆಶ್ರಮದಲ್ಲಿಯೇ ಶಾಶ್ವತವಾಗಿ ನೆಲೆಸಲು ನಿರ್ಧರಿಸಿದಳು ಎಂದು ಕಾಮರಾಜ್ ವಿವರಿಸಿದ್ದಾರೆ.

ಈಶಾ ಪ್ರತಿಷ್ಠಾನವು, ತಮ್ಮ ಹೆಣ್ಣುಮಕ್ಕಳ ಆಲೋಚನಾ ಶಕ್ತಿಯನ್ನು ದುರ್ಬಲಗೊಳಿಸುವಂತಹ ಆಹಾರ ಮತ್ತು ಔಷಧಗಳನ್ನು ನೀಡಿದೆ. ಇದರಿಂದಾಗಿ ಅವರು ಕುಟುಂಬದೊಂದಿಗಿನ ನಂಟು ಕಡಿದುಕೊಳ್ಳುವಂತೆ ಮಾಡಿದೆ. ಸರ್ಕಾರಿ ಶಾಲೆಯಲ್ಲಿ 12 ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿರುವ ಪ್ರತಿಷ್ಠಾನದ ವೈದ್ಯರೊಬ್ಬರ ಇತ್ತೀಚಿನ ಪ್ರಕರಣವು ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಸಾಕ್ಷಿ ಎಂದು ಕಾಮರಾಜ್ ಹೇಳಿದ್ದಾರೆ.

ಮಕ್ಕಳ ಹೇಳಿಕೆ ಬಗ್ಗೆ ಕೋರ್ಟ್ ಸಂದೇಹ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಬ್ಬರೂ ಹೆಣ್ಣುಮಕ್ಕಳು, ತಂದೆಯ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತಮ್ಮ ಇಚ್ಛೆಗೆ ಅನುಗುಣವಾಗಿ ಆಶ್ರಮದಲ್ಲಿ ನೆಲೆಸಿರುವುದಾಗಿ ಅವರು ತಿಳಿಸಿದ್ದಾರೆ. ಆದರೂ ನ್ಯಾಯಮೂರ್ತಿಗಳಾದ ಎಸ್‌ಎಂ ಸುಬ್ರಮಣಿಯಂ ಮತ್ತು ವಿ ಶಿವಜ್ಞಾನಂ ಅವರ ಪೀಠವು ಸಂದೇಹ ವ್ಯಕ್ತಪಡಿಸಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಜೀವನಶೈಲಿಯು ಅವರ ಉಪದೇಶಗಳಿಗೆ ವಿರುದ್ಧವಾಗಿದೆ. ತಮ್ಮ ಮಗಳಿಗೆ ಮದುವೆ ಮಾಡಿಸಿ, ಸಾಂಸಾರಿಕ ಜೀವನ ಕಟ್ಟಿಕೊಳ್ಳಲು ಅವಕಾಶ ನೀಡಿದ್ದಾರೆ. ಆದರೆ ಸನ್ಯಾಸತ್ವದ ಜೀವನ ಒಪ್ಪಿಕೊಳ್ಳಲು ಯುವತಿಯರಿಗೆ ಉತ್ತೇಜನ ನೀಡುತ್ತಿದ್ದಾರೆ ಎಂದು ಹೇಳಿದೆ.

ಈಶಾ ಫೌಂಡೇಷನ್ ವಾದವೇನು?

ಈ ಸಹೋದರಿಯರು ತಮ್ಮದೇ ಸ್ವಂತ ನಿರ್ಧಾರದೊಂದಿಗೆ ಇಲ್ಲಿಗೆ ಬಂದಿದ್ದು, ಅವರು ತಮ್ಮ ದಾರಿಯನ್ನು ಆಯ್ಕೆ ಮಾಡುವ ಹಕ್ಕು ಹೊಂದಿದ್ದಾರೆ ಎಂದು ಕೋರ್ಟ್‌ನಲ್ಲಿ ಈಶಾ ಫೌಂಡೇಷನ್ ವಾದಿಸಿದೆ. ಯಾರನ್ನೂ ಮದುವೆಯಾಗುವಂತೆ ಅಥವಾ ಸನ್ಯಾಸತ್ವ ಸ್ವೀಕರಿಸುವಂತೆ ಬಲವಂತ ಮಾಡುವುದಿಲ್ಲ. ಈ ಹಿಂದೆ ತಮ್ಮ ವಿರುದ್ಧ ನಡೆದಿದ್ದ ತನಿಖೆಗಳು ಕೂಡ ಈ ಆರೋಪಗಳು ಆಧಾರರಹಿತ ಎನ್ನುವುದು ಸಾಬೀತಾಗಿದೆ. ಜತೆಗೆ ಇನ್ನೊಂದು ಕ್ರಿಮಿನಲ್ ಪ್ರಕರಣಕ್ಕೆ ಕೋರ್ಟ್ ತಡೆ ನೀಡಿದೆ ಎಂದು ಹೇಳಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments