ಬೆಂಗಳೂರು/ಕೆಂಗೇರಿ : ಇಂದು ಮತ್ತು ನಾಳೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಇರುವುದರಿಂದ ನಗರದ ಕೆಲ ಏರಿಯಾಗಳಲ್ಲಿ ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.

ಡಿ.16 ರಂದು ಎಲ್ಲೇಲ್ಲಿ ಕರೆಂಟ್ ಕಟ್..
ಮೈಸೂರು ಮುಖ್ಯರಸ್ತೆ, ಕೆಂಗೇರಿ, ಹರ್ಷ ಲೇಔಟ್, ಮೈಲಸಂದ್ರ, ಕೆಂಗೇರಿ ಉಪನಗರ, ಗಂಗೊಂಡನಹಳ್ಳಿ, ದೀಪಾಂಜಲಿನಗರ, ಪಂತರಪಾಳ್ಯ, ಕೇಂಚೆನಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ ಲೇಔಟ್,ಬಂಡೇಮಠ, ವಿಶ್ವೇಶ್ವರಯ್ಯ ಲೇಔಟ್, ಆರ್ ಆರ್ ಲೇಔಟ್,ಕೆಂಗುಂಟೆ,ಕೋಡಿಗೆಹಳ್ಳಿ, ಮರಿಯಪ್ಪನಪಾಳ್ಯ, ಮುದ್ದಿನಪಾಳ್ಯ, ಸುಭಾಷ್ನಗರ, ಗಿರಿನಗರ, ಬ್ಯಾಂಕ್ ಕಾಲೋನಿ, ಶ್ರೀನಗರ,ಹನುಮಂತನಗರ, ವಿದ್ಯಾಪೀಠ, ತ್ಯಾಗರಾಜನಗರ, ಹೊಸಕೆರೆಹಳ್ಳಿ, ನಾಗೇಂದ್ರ ಬ್ಲಾಕ್, ಆವಲಹಳ್ಳಿ, ವೊಲ್ಗೆರೇಹಳ್ಳಿ, ಸುತ್ತಮತ್ತಲಿನ ಪ್ರದೇಶ, ಉಲ್ಲಾಳ ಮುಖ್ಯರಸ್ತೆ, ಅಪಾರ್ಟ್ಮೆಂಟ್, ಜ್ಞಾನಜ್ಯೋತಿನಗರ,ಮುನೇಶ್ವರನಗರ, ಎಪಿಎಂಸಿ ಲೇಔಟ್, ಮಲ್ಲತಹಳ್ಳಿ ‘ಡಿ’ ಗ್ರೂಪ್ ಲೇಔಟ್, ದೊಡ್ಡ ಬಸ್ತಿ, ಚಿಕ್ಕಬಸ್ತಿ, ರಾಮಚಂದ್ರ, ಸೋನ್ನೇನಹಳ್ಳಿ, ಅಂಜಾನನಗರ, ಕನ್ನಲ್ಲಿ, ದೊಡ್ಡಗೊಲ್ಲರಹಟ್ಟಿ ಸರ್ಎಂವಿ ಲೇಔಟ್ 1 ರಿಂದ 9ನೇ ಬ್ಲಾಕ್, ಹೇರೋಹಳ್ಳಿ, ಬಿಇಎ ಲೇಔಟ್ ಸೇರಿ ಆರ್ ವಿ ಇಂಜಿನಿಯರ್ ಕಾಲೇಜಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ..
ನಾಳೆ ಎಲ್ಲೆಲ್ಲಿ ಕರೆಂಟ್ ಕಟ್..!
ಡಿಸೆಂಬರ್ 17 ರಂದು ಅಬ್ಬಿಗೆರೆ ವಿದ್ಯುತ್ ನಿರ್ವಹಣಾ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ಕೈಗೊಂಡಿರಿವುದರಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಕಮ್ಮಗೊಂಡನಹಳ್ಳಿ, ಧನಪಾಲ್ ಲೇಔಟ್, ಶೆಟ್ಟಿಹಳ್ಳಿ, ಶ್ರೀರಾಮ ಸಮೀಕ್ಷ ಅಪಾರ್ಟ್ ಮೆಂಟ್, ಏರ್ಪೋರ್ಸ್, ಸಿಂಗಾಪುರ, ಭದ್ರಸ್ವಾಮಿ ಲೇಔಟ್, ನಿಸರ್ಗ ಲೇಔಟ್, ಲಕ್ಷ್ಮೀ ದೇವಸ್ಥಾನ ರಸ್ತೆ, ಕೇಂಪೆಗೌಡ ಗಾರ್ಡನ್, ಕೆ.ಜಿ. ಹಳ್ಳಿ, ಕಲಾನಗರ, ಕುವೆಂಪುನಗರ, ಎಚ್ವಿವಿ ಲೇಔಟ್, ಕಾಶ್ನಿರಾಮ್ನಗರ, ನೇಜಾಜಿ ಲೇಔಟ್, ಸೆವೆನ್ ಹಿಲ್ಸ್ ಕೌಂಟಿ, ಬ್ರೀಗೆಡ್ ಅಪಾರ್ಟ್ಮೆಂಟ್, ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.