ಚಿತ್ರದುರ್ಗ : ಸರ್ಕಾರ ಎಲ್ಲಾ ಅಧಿಕಾರಿಗಳಿಗೂ ವೇತನ ನೀಡುತ್ತದೆ. ಅದಕ್ಕೆ ತಕ್ಕಂತೆ ನಿಷ್ಠೆ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಚಿತ್ರದುರ್ಗದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಕೆಡಿಪಿ ಸಭೆಯಲ್ಲಿ ಖಡಕ್ ಆಗಿ ಸೂಚಿಸಿದರು.

ಬಡವರಿಗೆ ತಲುಪಬೇಕಾದ ಸೌಲಭ್ಯಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ನನ್ನಷ್ಟು ಕೆಟ್ಟ ಮನುಷ್ಯ ಬೇರ್ಯಾರಿಲ್ಲ. ನಿಮ್ಮ ವರದಿ ಓದಿಕೊಂಡು ಬಂದಿದ್ದೇನೆ ಎಂದರು. ಕೆಲ ಇಲಾಖೆಗಳ ಪ್ರಗತಿಯಾಗಿಲ್ಲ ಯಾಕೆ ? ಎಂದು ಅಧಿಕಾರಿಗಳಿಗೆ ಅಮ್ಲಾನ್ ಆದಿತ್ಯ ಬಿಸ್ವಾಸ್ ಪ್ರಶ್ನಿಸಿದರು. ಜಿಲ್ಲೆಯ ಎಲ್ಲಡೆ ಓಡಾಡಿದ್ದು ಸಮಸ್ಯೆ ಗೊತ್ತಿದೆ ಅದಕ್ಕೆ ತಕ್ಕಂತೆ ಕೆಲಸ ಮಾಡಿ ಎಂದು ಹೇಳಿದರು.