ಜಾರುವಾರು ಸಾಗಿಸುತ್ತಿದ್ದ ವ್ಯಕ್ತಿ ಬಂಧನ
ಮೈಸೂರು:- ಕರ್ನಾಟಕ ಮಾರ್ಗವಾಗಿ ತಮಿಳುನಾಡಿನ ಅಂದಿಯೂರಿಗೆ ಜಾನುವಾರು ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಹನೂರು ತಾಲೂಕಿನ ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ಎನ್ ಆರ್ ಮೋಹಲ್ಲಾದ ಫಾರೂಕ್ ಪಾಷ ಬಂಧಿತ ವ್ಯಕ್ತಿ 25 ಜಾನುವಾರುಗಳನ್ನು ತಮಿಳುನಾಡಿನ ಅಂದಿಯೂರಿಗೆ ಸಾಗಿಸುವ ವೇಳೆ ರಾಮಾಪುರದ ಬಳಿ ರಸ್ತೆ ಬದಿಯಲ್ಲಿ ವಾಹನ ಮಗಚಿ ಬಿದ್ದಿದೆ. ಈ ವಿಷಯ ತಿಳಿಸು ಸ್ಥಳಾಕ್ಕಾಗಮಿಸಿದ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಮಂಡ್ಯ ಜಿಲ್ಲೆಯ ಸುತ್ತಮುತ್ತಲಿನ ಹಳ್ಳಿಯಲ್ಲಿ ಜಾನುವಾರು ಖರೀದಿಸಿ ತಮಿಳುನಾಡಿನ ಅಂದಿಯೂರಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ತಿಳಿದು ಬಂದಿದೆ.