ಗದಗ: ಬಿಜೆಪಿಯು ಒಂದು ಹಿಂದೂಗಳ ಭರವಸೆಯ ಪಕ್ಷ ಆದರಿಂದ ಬಿಜೆಪಿಯು ಒಬ್ಬರೊಬ್ಬನ್ನು ಕಡೆಗಣಿಸಬಾರದು ಯತ್ನಾಳರನ್ನು ಪಕ್ಷಕ್ಕೆ ವಾಪಾಸ್ ತರಬೇಕು ಅನ್ನೋದೇ ನನ್ನ ಅಭಿಪ್ರಾಯ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಅವರು ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಮ್ಮಿಕೊಂಡಿದ ಶ್ರೀರಾಮ ಸೇನಾ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯತ್ನಾಳ್ ಅವರನ್ನು ಬಿಜೆಪಿಗೆ ವಾಪಾಸ್ ಕರೆತರಬೇಕು ಅನ್ನೋದು ನನ್ನ ಅಭಿಪ್ರಾಯ ಆಗಿದೆ. ಆದ್ರೆ, ಕೇಂದ್ರದಿಂದ ಉಚ್ಚಾಟನೆ ಆಗಿರೋದ್ರಿಂದ ಏನು ಮಾಡಲಾಗಲ್ಲ, ನಮ್ಮ ವಿಚಾರ ಕೇಂದ್ರಕ್ಕೆ ತಲುಪಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ರು.