Monday, June 23, 2025
26.3 C
Bengaluru
Google search engine
LIVE
ಮನೆರಾಜಕೀಯಯತ್ನಾಳ್ ಪಕ್ಷ ಕಟ್ಟಲ್ಲ, ಕಟ್ಟಿದ್ರೂ ನಾವು ಹೋಗಲ್ಲ; ಬಿ.ಪಿ.ಹರೀಶ್

ಯತ್ನಾಳ್ ಪಕ್ಷ ಕಟ್ಟಲ್ಲ, ಕಟ್ಟಿದ್ರೂ ನಾವು ಹೋಗಲ್ಲ; ಬಿ.ಪಿ.ಹರೀಶ್

ದಾವಣಗೆರೆ: ಉಚ್ಚಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟಲು ಬಿಡಲ್ಲ, ಈಗಲೂ ಅವರು ನಮ್ಮ‌ ನಾಯಕರು. ಪಕ್ಷ ಕಟ್ಟಿದರೆ ನಾವು ಹೋಗಲ್ಲ ಎಂದು ಹರಿಹರ ಶಾಸಕ ಬಿ ಪಿ ಹರೀಶ್​ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಹರೀಶ್​, ನಾವು ಬಿಜೆಪಿಯಲ್ಲೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಯತ್ನಾಳ್ ನಮ್ಮ ನಾಯಕರು ಹಿಂದೂ ಹುಲಿ ಎಂದು ಪ್ರಸಿದ್ದಿಯಾಗಿದ್ದಾರೆ ಅವರನ್ನು ಪಕ್ಷ ಉಚ್ಚಾಟನೆ ಮಾಡಿದೆ. ನಮ್ಮ ತಂಡ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದು ಹೋರಾಟ ನಡೆಸುತ್ತಿದೆ ಎಂದರು.

ಹೊಸ‌ ಪಕ್ಷದ ವಿಚಾರ ಮಾಧ್ಯಮಗಳಲ್ಲಿ ನೋಡಿದ್ದೇವೆ. 2028 ರ ಚುನಾವಣೆಯಲ್ಲಿ ಗೆಲ್ಲಲು ಯತ್ನಾಳ್ ಬೇಕೆಂದು ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡುತ್ತೇವೆ. ಹೊಸ‌ಪಕ್ಷ ಮಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಅವರು ಪಕ್ಷ ಕಟ್ಟಿದರೆ ನಾವು ಹೋಗಲ್ಲ ನಾವು ಬಿಜೆಪಿಯಲ್ಲೇ ಇರ್ತೀವಿ. ನಾಯಕರು ಯಾವತ್ತಿದ್ದರೂ‌ ನಾಯಕರೆ ನಮ್ಮ ನಾಯಕರು ಯತ್ನಾಳ್ ಎಂದು ಇದೇ ವೇಳೆ ಶಾಸಕ ಹರೀಶ್​ ಹೇಳಿದರು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments