Monday, June 23, 2025
26.3 C
Bengaluru
Google search engine
LIVE
ಮನೆರಾಜಕೀಯವಿನಯ್​​ ಆತ್ಮಹತ್ಯೆ ಕೇಸ್​​; ಸಾಕ್ಷ್ಯ ನಾಶ ಮೊದಲೇ ಸಿಬಿಐಗೆ ವಹಿಸಿ

ವಿನಯ್​​ ಆತ್ಮಹತ್ಯೆ ಕೇಸ್​​; ಸಾಕ್ಷ್ಯ ನಾಶ ಮೊದಲೇ ಸಿಬಿಐಗೆ ವಹಿಸಿ

ಬೆಂಗಳೂರು: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದುಷ್ಟ ಶಕ್ತಿಗಳು ಈ ಪ್ರಕರಣದಲ್ಲಿರುವ ಸಾಕ್ಷ್ಯಾಧಾರಗಳನ್ನ ನಾಶ ಮಾಡುವ ಮೊದಲು ಪ್ರಕರಣದ ತನಿಖೆಯನ್ನು ಕೂಡಲೇ ಕೇಂದ್ರ ತನಿಖಾ ದಳ (ಸಿ.ಬಿ.ಐ) ವರ್ಗಾಯಿಸಬೇಕೆಂದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗ್ರಹಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಶಾಸಕರಾದ ಮಂಥರ್ ಗೌಡ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಬಲಾಢ್ಯರು ಹಾಗೂ ಆಡಳಿತಾರೂಢಿ ಕಾಂಗ್ರೆಸ್ ಸರ್ಕಾರದಲ್ಲಿರುವುದರಿಂದ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಎಫ್.ಐ.ಆರ್ ನಲ್ಲಿ ಶಾಸಕದ್ವಯರ ಹೆಸರನ್ನು ಉಲ್ಲೇಖ ಮಾಡದೆ ಪೊಲೀಸರು ಪರೋಕ್ಷವಾಗಿ ತನಿಖೆ ಆರಂಭ ಆಗುವ ಮುನ್ನವೇ prime suspect ಗಳಿಗೆ ದೋಷ ಮುಕ್ತಗೊಳಿಸಿದ್ದಾರೆ.

ದಿವಂಗತ ಕಾರ್ಯಕರ್ತ ವಿನಯ್ ಅವರ ಕುಟುಂಬಷ್ಟರು ನೀಡಿರುವ ದೂರರ್ಜಿಯ ವಿಷಯದಲ್ಲೇ ಶಾಸಕರ ಪಾತ್ರ ಉಲ್ಲೇಖಿತವಾಗಿದೆ. ಬಡವರಿಗೆ ಒಂದು ನ್ಯಾಯ, ಅಧಿಕಾರಸ್ಥರಿಗೆ ಒಂದು ನ್ಯಾಯ ಆಗಬಾರದು. ಕಾರ್ಯಕರ್ತರು ಪಕ್ಷದ ಸೇನಾನಿಗಳು ಅವರನ್ನು ರಕ್ಷಿಸಬೇಕಾದದ್ದು ಪಕ್ಷದ ಕರ್ತವ್ಯ.

ಸಮಯವನ್ನು ವ್ಯರ್ಥ ಮಾಡದೆ ಕೂಡಲೇ ಪ್ರಕರಣವನ್ನು ಸಿ.ಬಿ.ಐ ಗೆ ನೀಡಿದರೆ ಪ್ರಕರಣ ತಾರ್ಕಿಕ ಅಂತ್ಯ ಕಾಣಬಹುದು ಇಲ್ಲದಿದ್ದರೆ ತನಿಖೆಯಲ್ಲಿ ಕೆಲ ‘ಪ್ರಭಾವಿ’ ಗಳು ಹಸ್ತಕ್ಷೇಪ ಮಾಡುವ ಮೂಲಕ, ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಮೂಲಕ ಮುಚ್ಚಿಹಾಕುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments