Monday, June 23, 2025
26.3 C
Bengaluru
Google search engine
LIVE
ಮನೆ#Exclusive News‘ಸಿಎಂ ಸಿದ್ದರಾಮಯ್ಯಗೆ ಕೊಲೆ ಬೆದರಿಕೆ - ಫ್ರೀಡಂ ಟಿವಿಗೆ ಇ-ಮೇಲ್

‘ಸಿಎಂ ಸಿದ್ದರಾಮಯ್ಯಗೆ ಕೊಲೆ ಬೆದರಿಕೆ – ಫ್ರೀಡಂ ಟಿವಿಗೆ ಇ-ಮೇಲ್

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.ಸಿದ್ದರಾಮಯ್ಯರನ್ನು ಕೊಲೆ ಮಾಡ್ತೀವಿ  ಎಂದು ಇಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ.. ಬೆದರಿಕೆ ಸಂದೇಶವನ್ನು​ ಫ್ರೀಡಂ ಟಿವಿ ಇಮೇಲ್ ಗೆ ಟ್ಯಾಗ್ ಮಾಡಿದ್ದಾರೆ

ರಜಪೂತ್​ ಸಿಂಧಾರ್​​​  ಹೆಸರಿನ ವ್ಯಕ್ತಿ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭಯಾನಕವಾಗಿ ಕೊಲ್ಲುವುದಾಗಿ ಧಮ್ಕಿ ಹಾಕಿದ್ದಾನೆ. sindaarrajput@gmail.com ಖಾತೆಯಿಂದ ಮೆಸೇಜ್​ ಫ್ರೀಡಂ ಟಿವಿ ಇ-ಮೇಲ್​​​ಗೆ ಟ್ಯಾಗ್​ ಮಾಡಿ ಬೆದರಿಕೆ ಹಾಕಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೊಲೆ ಬೆದರಿಕೆ ಹಾಕಿರುವ ಪ್ರಕರಣದ ಹಿಂದೆ 1 ಕೋಟಿ ರೂಪಾಯಿ ಸಾಲದ ವಿಷಯ ಅಡಕವಾಗಿದೆ. ಬೆಂಗಳೂರಿನ ರಾಮಪುರದ ಪ್ರಭಾಕರ್​ ಎಂಬಾತನಿಗೆ 1 ಕೋಟಿ ರೂ. ಸಾಲವನ್ನು ತಾನು ಕೊಟ್ಟಿದ್ದೆ.. ಆದ್ರೆ, 1 ಕೋಟಿ ರೂ. ಸಾಲ ವಾಪಸ್ ಮಾಡಿಲ್ಲ ಎಂದು ರಜಪೂರ್ ಸಿಂದಾರ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಆ ಪ್ರಭಾಕರನಿಗೆ ಆದಷ್ಟು ಬೇಗ ಸಾಲ ವಾಪಸ್​ ಕೊಡಲು ಹೇಳಿ.. ಪ್ರಭಾಕರ ತನ್ನ ನಾದಿನಿಯ ಪೋಷಕರ ಮನೆಯಲ್ಲಿ ದುಡ್ಡು ಅಡಗಿಸಿಟ್ಟಿದ್ದಾನೆ. ಪ್ರಭಾಕರನ ಬಳಿ 3 ಸೆಲ್ಯೂಲರ್​ ಫೋನ್​​ಗಳಿವೆ.. ಪ್ರಭಾಕರನಿಗೆ ಇಬ್ಬರು ಮಕ್ಕಳಿವೆ. ಪ್ರಭಾಕರನ ಮಗನಿಗೆ ಈಗಷ್ಟೇ ಮದುವೆ ಆಗಿದೆ. 1 ಕೋಟಿ ವಾಪಸ್​ ಕೊಡಲು ಈಗ ಅವನ ಬಳಿ ಆದಾಯ ಇಲ್ಲ.. ಅವನು ದುಡ್ಡು ಕೊಡದಿದ್ರೆ ಹೀಗಾಗಿ ಪ್ರಭಾಕರನನ್ನೂ ಕೊಲೆ ಮಾಡ್ತೀನಿ.. ಸಿಎಂ ಸಿದ್ದರಾಮಯ್ಯನನ್ನೂ ಕೊಲೆ ಮಾಡ್ತೀವಿ.. ಉಪಮುಖ್ಯಮಂತ್ರಿಗಳನ್ನು ಕೊಲ್ತೀವಿ ಎಂದು ರಜಪೂತ್ ಸಿಂಧಾರ್ ಬೆದರಿಕೆ ಸಂದೇಶ ಕಳುಹಿಸಿದ್ದಾನೆ..

ಈ ವಿಚಾರ ಫ್ರೀಡಂ ಟಿವಿ ಗಮನಕ್ಕೆ ಬರುತ್ತಲೇ ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿ ಶೇಖರ್ ತ್ಯಾಗಣ್ಣನವರ್  ಗಮನಕ್ಕೆ ಮತ್ತು ವೈಯ್ಯಾಲಿಕಾವಲ್ ಠಾಣೆಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

 

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments