Wednesday, August 20, 2025
18.9 C
Bengaluru
Google search engine
LIVE
ಮನೆ#Exclusive NewsTop Newsಟಿಪ್ಪುವನ್ನು KRSಗೆ ಅಡಿಪಾಯ ಎಂದು ಹೇಳಬಹುದು - ನಟ ಚೇತನ್​ ಅಹಿಂಸಾ

ಟಿಪ್ಪುವನ್ನು KRSಗೆ ಅಡಿಪಾಯ ಎಂದು ಹೇಳಬಹುದು – ನಟ ಚೇತನ್​ ಅಹಿಂಸಾ

 ಬೆಂಗಳೂರು: ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್​.ಸಿ ಮಹದೇವಪ್ಪ ಹೇಳಿಕೆಗೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ಪರ-ವಿರೋಧಗಳು ವ್ಯಕ್ತವಾಗುತ್ತಿದೆ.

ಈ ಮಧ್ಯೆ ಟಿಪ್ಪುವನ್ನು KRSಗೆ ಅಡಿಪಾಯ ಎಂದು ಹೇಳಬಹುದು ಎಂದು ನಟ ಚೇತನ್​ ಅಹಿಂಸಾ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹತಿ ಹಂಚಿಕೊಂಡಿರುವ ಅವರು ಮೈಸೂರು ಮೂಲದ ಟಿಪ್ಪು ವಿದ್ವಾಂಸ ಪ್ರೊ. ಗುರುಸಿದ್ದಯ್ಯ ಅವರ ಪ್ರಕಾರ, ಶಾಸನಗಳ ಆಧಾರದಲ್ಲಿ ಟಿಪ್ಪು ಸುಲ್ತಾನ್​ ಇವತ್ತಿನ KRS ಅಣೆಕಟ್ಟು ಇರುವ ಸ್ಥಳದ ಬಳಿ ಅಣೆಕಟ್ಟೆ ಕಟ್ಟುವ ಉದ್ದೇಶ ಹೊಂದಿದ್ದರು ಎಂಬು ಗೊತ್ತಾಗುತ್ತದೆ.

ಟಿಪ್ಪು ಯಾವುದೇ ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸದಿದ್ದರೂ, ಇವತ್ತಿನ ಅಣೆಕಟ್ಟು ಅದೇ ಸುತ್ತಮುತ್ತಲ ಸ್ಥಳದಲ್ಲಿ  ನಿರ್ಮಾಣವಾಗಿರುವುದರಿಂದ  ಅವರನ್ನೂ ಕೆಆರ್​ಎಸ್​​ಗೆ​ ಆಧಾರ ಶಿಲೆ ಎನ್ನಬಹುದು ಎಂದು ಬರೆದುಕೊಂಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments