ಅದೊಂದು ವಿಶೇಷ ಕಾಣಿಕೆ..ಭಕ್ತನೊಬ್ಬ ನೀಡಿದ ಆ ಕಾಣಿಕೆ ಇವತ್ತು ಇಡೀ ದೇಶದ ತುಂಬಾ ಸುದ್ದಿಯಾಗಿದೆ. ಇಷ್ಟಕ್ಕೂ ಆ ಭಕ್ತ ಕಾಣಿಕೆ ಕೊಟ್ಟಿರೋದು ಯಾರಿಗೆ ಗೊತ್ತಾ..ಆಯೋಧ್ಯೆಯಲ್ಲಿ ಜನವರಿ ೨೨ರಂದು ಪ್ರತಿಷ್ಟಾಪನೆಯಾಗುತ್ತಿರುವ ಶ್ರೀರಾಮನಿಗೆ..ಹೌದು.. ಆತನೊಬ್ಬ ರಾಮ ಭಕ್ತ..ತನ್ನ ನೆಚ್ಚಿನ ದೇವರಿಗೆ ಸುಮಾರು ಐದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಅಗರಬತ್ತಿಯೊಂದನ್ನ ತಯಾರಿಸಿ ಕಾಣಿಕೆಯಾಗಿ ನೀಡಿದ್ದಾನೆ..ಆ ಭಕ್ತನ ಹಿನ್ನೆಲೆಯೇನು..? ಸುಮಾರು ೪೫ ದಿನಗಳ ಕಾಲ ಉರಿದು ಪರಿಮಳ ಸೂಸೂವ ಅಗರಬತ್ತಿ ತಯಾರಾಗಿದ್ದಾದ್ರೂ ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ

ಅಯೋಧ್ಯೆಯ ರಾಮ ಮಂದಿರ…ಸುಮಾರು ೫೦೦ ವರ್ಷಗಳ ಹೋರಾಟದ ಫಲವಾಗಿ ಉದ್ಘಾಟನೆಯಾಗುತ್ತಿದೆ.. ಅದೆಷ್ಟು ಕರ ಸೇವಕರು, ಹಿಂದೂ ಪರ ಸಂಘಟಕರ ರಾಮ ಮಂದಿರ ನಿರ್ಮಾಣಕ್ಕಾಗಿ ನಿದ್ದೆ ಬಿಟ್ಟರೋ ಗೊತ್ತಿಲ್ಲ..ಅಂತೂ ಇಂತೂ ಗಳಿಗೆ ಕೂಡಿ ಬಂತು..ವಿಶಾಲವಾದ ಜಾಗದಲ್ಲಿ, ಭವ್ಯವಾದ ದೇಗುಲ ತಲೆ ಎತ್ತಿದೆ.. ರಾಮ ದೇಗುಲದ ನಿರ್ಮಾಣಕ್ಕಾಗಿ ಭಕ್ತರೇ ಹಣ ಸಂಗ್ರಹಿಸಿಕೊಟ್ಟಿದ್ದೂ ಆಗಿದೆ.. ಶಂಕುಸ್ಥಾಪನೆಯಿAದ ಹಿಡಿದು ಇವತ್ತಿನ ಉದ್ಘಾಟನೆ ತನಕ ಭಕ್ತರ ಕಾಣಿಕೆ ಅಪಾರ.. ಒಬ್ಬೊಬ್ಬರದ್ದು ಒಂದೊಂದು ರೀತಿಯ ಸೇವೆ.. ಅದೇ ರೀತಿ ವಡೋದರದ ಭಕ್ತರೊಬ್ಬರು ಅಗರಬತ್ತಿಯನ್ನ ಕಾಣಿಕೆಯಾಗಿ ನೀಡಿದ್ದಾರೆ..

ಹೌದು ಆ ಭಕ್ತನ ಹೆಸರು ವಿಹಾಭಾಯಿ ಭರ್ವಾಡ್, ವೃತ್ತಿಯಲ್ಲಿ ಕೃಷಿಕ ಮತ್ತು ಜಾನವಾರು ಸಾಕಾಣಿಕೆದಾರ.. ವಡೋದರದ ತರ್ಸಾಲಿ ಮೂಲದವನು..ಭಗವಾನ್ ಶ್ರೀ ರಾಮ ಎಂದರೆ ಸಾಕು ಭಕ್ತಿ ಪರಾವಶನಾಗಿಬಿಡ್ತಿದ್ದ.. ಹೀಗಾಗಿ ಅಯೋಧ್ಯೆಯ ಶ್ರೀರಾಮನಿಗಾಗಿ ಏನಾದ್ರೂ ವಿಶೇಷ ಕಾಣಿಕೆ ಕೊಡ್ಬೇಕು ಅಂತ ತೀರ್ಮಾನಿಸಿದ್ದ..ತನ್ನ ನೆಚ್ಚಿನ ಭಗವಂತನಿಗೆ ಏನು ಕೊಟ್ಟರು ಕಡಿಮೆಯೇ ಅನ್ನೋದು ಪ್ರತಿಯೊಬ್ಬ ಭಕ್ತರಿಗೂ ಗೊತ್ತು.. ಆದ್ರೂ ಏನಾದ್ರೂ ಕೊಡ್ಬೇಕು ಅಂತ ಮನ ಮಾಡಿದವನಿಗೆ ಹೊಳೆದಿದ್ದು, ವಿಭಿನ್ನ ಅಗರಬತ್ತಿ ಐಡಿಯಾ..

ಹೌದು.. ಇನ್ನೇನು ಕೆಲ ದಿನಗಳಷ್ಟೆ ಬಾಕಿ ಇದೆ.. ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿದೆ..ಕೊನೆ ಕ್ಷಣದ ಕುಸುರಿ ಕೆಲಸಗಳು ನಡೆಯುತ್ತಿವೆ.. ಶ್ರೀ ರಾಮ ವಿಗ್ರಹದ ಪ್ರಾಣ ಪ್ರತಿಷ್ಟಾಪನೆಗಾಗಿ ಜನವರಿ ೨೧ರಿಂದ ೨೪ರವರೆಗೆ ಸುಮೂರ್ತ ನಿಗದಿ ಮಾಡಲಾಗಿದೆ..ಈ ಶುಭ ಸಂದರ್ಭದಲ್ಲಿ ಧೂಪ ದ್ರವ್ಯಗಳನ್ನ ಬಳಸಲಾಗುತ್ತದೆ.. ಇದೇ ವೇಳೆ ರಾಮ ಭಕ್ತ ನೀಡಿರುವ ವಿಶೇಷ ಅಗರಬತ್ತಿಯನ್ನು ಕೂಡ ಉರಿಸಲಾಗುತ್ತದೆ.. ಅಂದಾಗೆ ಅದು ಒಂದೆರೆಡು ದಿನ ಉರಿಯುವ ಅಗರಬತ್ತಿಯಲ್ಲ..ಬರೋಬ್ಬರಿ ೪೫ ದಿನಗಳ ಕಾಲ ಉರಿದು ಸುಗಂಧ ಧ್ರವ್ಯವನ್ನ ಸೂಸುತ್ತದೆಯಂತೆ..

ಅಂದಾಗೆ ಸುಮಾರು ೧೦೮ ಅಡಿ ಉದ್ದ ಮತ್ತು ಮೂರುವರೆ ಅಡಿ ಅಗಲದ ಬೃಹತ್ ಅಗರಬತ್ತಿ ಇದಾಗಿದ್ದು, ಡಿಸೆಂಬರ್ ಅಂತ್ಯದಲ್ಲಿ ವಡೋದರಾದಿಂದ ಅಯೋಧ್ಯೆಗೆ ಬೃಹತ್ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುವುದು. ೧೦೮ ಅಡಿ ಉದ್ದದ ಈ ಧೂಪದ್ರವ್ಯವನ್ನು ಅಯೋಧ್ಯೆಗೆ ಸಾಗಿಸಲು ಸುಮಾರು ನಾಲ್ಕೂವರೆ ಲಕ್ಷ ರೂಪಾಯಿ ವೆಚ್ಚವಾಗಲಿದೆಯಂತೆ. ವಡೋದರದ ತಾರ್ಸಾಲಿಯಲ್ಲಿರುವ ವಿಹಾಭಾಯಿ ಅವರ ಮನೆಯ ಸಮೀಪ ತೆರೆದ ಮೈದಾನದಲ್ಲಿ ನಿರ್ಮಿಸುತ್ತಿರುವ ಬೃಹತ್ ಧೂಪದ್ರವ್ಯವನ್ನು ಸಿದ್ಧಪಡಿಸಿದ ನಂತರ ನವಲಖಿ ಮೈದಾನಕ್ಕೆ ಕೊಂಡೊಯ್ಯಲಾಗುತ್ತದೆ. ಅಂದಾಗೆ ವಡೋದರಾದಿಂದ ಅಯೋಧ್ಯೆಗೆ ಸುಮಾರು ೧,೮೦೦ ಕಿ.ಮೀ ದೂರವಿದೆ. ಅಗರಬತ್ತಿಗಳ ಸಾಗಣೆಗೆ ವಿಶೇಷ ಟ್ರೇಲರ್ ವ್ಯವಸ್ಥೆ ಮಾಡಲಾಗಿದೆ. ಇದನ್ನು ಒಮ್ಮೆ ಬೆಳಗಿಸಿದರೆ ೪೫ ದಿನಗಳ ಕಾಲ ನಿರಂತರವಾಗಿ ಸುಗಂಧ ಸೂಸುತ್ತದೆ.

ಇನ್ನು ಈ ಅಗರಬತ್ತಿಯನ್ನ ತಯಾರಿಸಲು ಬಳಸಿರೋ ವಸ್ತುಗಳು ಮತ್ತು ಪ್ರಮಾಣವೆಷ್ಟು ಅಂದ್ರೆ ನೀವು ಶಾಕ್ ಆಗ್ತೀರಾ..ವಿಶೇಷವಾಗಿ ೯೧ ಕೆಜಿ ಹಸುವಿನ ತುಪ್ಪ, ೩೭೬ ಕೆಜಿ ಗುಗ್ಗಿಲ್, ೨೮೦ ಕೆಜಿ ಬಾರ್ಲಿ, ೨೮೦ ಕೆಜಿ ಎಳ್ಳು, ೩೭೬ ಕೆಜಿ ಒಣ ಕೊಬ್ಬರಿ ಪುಡಿ, ೪೨೫ ಕೆಜಿ ಯಜ್ಞ ಸಾಮಗ್ರಿ ಬಳಸಲಾಗಿದೆ. ಈ ಅಗರಬತ್ತಿ ಒಟ್ಟು ೩೪೦೦ ಕೆ.ಜಿ ತೂಕವಿದೆ… ತಯಾರಿಕೆಗೆ ಏನಿಲ್ಲವೆಂದರು ೩೪೨೮ ಕೆಜಿ ಕಚ್ಚಾ ವಸ್ತುಗಳನ್ನ ಬಳಕೆ ಮಾಡಲಾಗಿದೆ..

ಅಗರಬತ್ತಿಯನ್ನು ಬಿಸಿಲು ಮತ್ತು ಬಿಸಿ ವಾತಾವರಣವಿರಲೆಂದು ಹೊರಾಂಗಣದಲ್ಲಿ ತಯಾರಿಸಲಾಗುತ್ತದೆ. ಆದರೆ, ಇಲ್ಲಿ ಮಳೆಯಾಗುತ್ತಿರುವುದರಿಂದ ಮುಂದಿನ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ… ಇದಲ್ಲದೆ, ಇದುವರೆಗೆ ಮಾಡಿದ ಅಗರಬತ್ತಿಗಳನ್ನು ಪ್ಲಾಸ್ಟಿಕ್ ಕವರ್ನಿಂದ ಸುತ್ತುವ ಮೂಲಕ ಮಳೆಯಿಂದ ರಕ್ಷಿಸಲಾಗಿದೆ. ಮಳೆ ಕಡಿಮೆಯಾದ ತಕ್ಷಣ ಉಳಿದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ೧೦೮ ಅಡಿ ಉದ್ದ ಮತ್ತು ಮೂರೂವರೆ ಅಡಿ ಅಗಲದ ಸಂಪೂರ್ಣ ಧೂಪದವು ಡಿಸೆಂಬರ್ ಅಂತ್ಯದ ವೇಳೆಗೆ ಸಿದ್ಧವಾಗಲಿದೆ. ಇದು ರಾಮ ಭಕ್ತನ ಅಗರಬತ್ತಿ ಕಾಣಿಕೆ ಹಿಂದಿರೋ ಮಾಹಿತಿ.