
ಬೆಂಗಳೂರು: ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಶೇ. 46 ರಷ್ಟು ಪಾಲು ಹೊಂದಿರುವ ಕರ್ನಾಟಕವನ್ನು ‘ರೇಷ್ಮೆ ರಾಜಧಾನಿ’ಯಾಗಿ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ. ರೇಷ್ಮೆ ಬೆಳೆಗಾರರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯದ ಪ್ರಮುಖ 5 ಕೇಂದ್ರಗಳಲ್ಲಿ ಬೃಹತ್ ಸಿಲ್ಕ್ ಪಾರ್ಕ್ಗಳನ್ನು (Silk Parks) ಸ್ಥಾಪಿಸಲು ಬಜೆಟ್ನಲ್ಲಿ ನಿರ್ಧರಿಸಲಾಗಿದೆ. ರೇಷ್ಮೆ ಮಾರುಕಟ್ಟೆಗಳಲ್ಲಿ ಸಂಪೂರ್ಣ ನಗದುರಹಿತ ಮತ್ತು ಡಿಜಿಟಲ್ ವಹಿವಾಟು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಬಜೆಟ್ನ ಪ್ರಮುಖ ಮುಖ್ಯಾಂಶಗಳು:
- ಸಿಲ್ಕ್ ಪಾರ್ಕ್ ಸ್ಥಾಪನೆ: ರೇಷ್ಮೆ ಉದ್ಯಮಕ್ಕೆ ವೇಗ ನೀಡಲು ರಾಮನಗರ, ಶಿಡ್ಲಘಟ್ಟ, ಹಾವೇರಿ, ಮೈಸೂರಿನ ತಾಂಡವಪುರ ಹಾಗೂ ಕಲಬುರಗಿಯಲ್ಲಿ ಅತ್ಯಾಧುನಿಕ ಸಿಲ್ಕ್ ಪಾರ್ಕ್ಗಳ ನಿರ್ಮಾಣ!
- ಸಾಗಾಣಿಕಾ ವೆಚ್ಚ ಹೆಚ್ಚಳ: ಉತ್ತರ ಕರ್ನಾಟಕದ ಬೆಳೆಗಾರರಿಗೆ ಸಿಹಿ ಸುದ್ದಿ; ರೇಷ್ಮೆಗೂಡು ಸಾಗಾಣಿಕಾ ವೆಚ್ಚ ಪ್ರತಿ ಕೆ.ಜಿ.ಗೆ 10 ರೂ. ನಿಂದ 20 ರೂ. ಗೆ ಏರಿಕೆ.
- ಚಾಕಿ ಸಾಕಾಣಿಕೆ ಕೇಂದ್ರ: ರೈತ ಉದ್ಯಮಿಗಳು ಮತ್ತು FPOಗಳ ಸಹಯೋಗದೊಂದಿಗೆ ಇಲಾಖಾ ಜಮೀನಿನಲ್ಲಿ ಹೊಸ ಚಾಕಿ ಸಾಕಾಣಿಕೆ ಕೇಂದ್ರಗಳ ಸ್ಥಾಪನೆ.
- ಡಿಜಿಟಲ್ ವಹಿವಾಟು: ರಾಜ್ಯದ 15 ಪ್ರಮುಖ ಮಾರುಕಟ್ಟೆಗಳಲ್ಲಿ ಇ-ಹರಾಜು ಮತ್ತು ಇ-ಪಾವತಿ ವ್ಯವಸ್ಥೆ ಸಂಪೂರ್ಣ ಜಾರಿ.
- ಭಾರಿ ಸಹಾಯಧನ: ರೀಲಿಂಗ್ ಶೆಡ್ ಮತ್ತು ಹನಿ ನೀರಾವರಿಗಾಗಿ ಕಳೆದ ಮೂರು ವರ್ಷಗಳಲ್ಲಿ 531 ಕೋಟಿ ರೂ. ಸಹಾಯಧನ ವಿತರಣೆ.



