Friday, June 6, 2025
28 C
Bengaluru
Google search engine
LIVE
ಮನೆರಾಜಕೀಯಸಂಪುಟ ಸರ್ಜರಿಯಲ್ಲಿ ಸತೀಶ್ ಜಾರಕಿಹೊಳಿ ಮೇಲುಗೈ

ಸಂಪುಟ ಸರ್ಜರಿಯಲ್ಲಿ ಸತೀಶ್ ಜಾರಕಿಹೊಳಿ ಮೇಲುಗೈ

ಸಚಿವ ಸಂಪುಟ ಸರ್ಜರಿಯಲ್ಲಿ ಈ ಬಾರಿ ಎಸ್​​ಟಿ ಸಮುದಾಯಕ್ಕೆ ಬಂಪರ್ ಗಿಫ್ಟ್ ಸಿಗುವ ಸಾಧ್ಯತೆ ಇದೆ. ಎಸ್​ಟಿ ಸಮುದಾಯದ ಮತ್ತಿಬ್ಬರಿಗೆ ಸಿದ್ದು ಸರ್ಕಾರದಲ್ಲಿ ಮಣೆ ಹಾಕುವ ಸಾಧ್ಯತೆ ಇದೆ..

ಈ ಹಿಂದೆ ವಾಲ್ಮೀಕಿ ಹಗರಣದಿಂದ ಮಂತ್ರಿಗಿರಿ ಕಳೆದುಕೊಂಡಿದ್ದ ನಾಗೇಂದ್ರಗೆ ಮತ್ತೆ ಲಕ್ ಕೂಡಿಬಂದಿದೆ. ನಾಗೇಂದ್ರಗೆ ಮಂತ್ರಿಗಿರಿ ನೀಡಿ ಸಹಕಾರ ಖಾತೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಎಸ್​​ಟಿ ಸಮುದಾಯದವರೇ ಆದ ಕೆ.ಎನ್.ರಾಜಣ್ಣ ಅವರನ್ನ ಕೈಬಿಟ್ಟು ನಾಗೇಂದ್ರರನ್ನ ಮತ್ತೆ ಕುರ್ಚಿಗೆ ಕೂರಿಸುವ ಪ್ರಯತ್ನ ನಡೆದಿದೆ..

ಅದೇ ರೀತಿ ಮೊಳಕಾಲ್ಮೂರಿನಲ್ಲಿ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಸ್ಪರ್ಧಿಸಿ  ಗೆದ್ದಿದ್ದ ಎನ್​.ವೈ.ಗೋಪಾಲಕೃಷ್ಣಗೂ ಮಂತ್ರಿ ಭಾಗ್ಯ ಸಿಗುವ ಸಾಧ್ಯತೆಗಳಿವೆ. ಎಸ್​​ಟಿ ಸಮುದಾಯದ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣಗೆ ಅದೃಷ್ಟ ಕೂಡಿಬರುವ ಸಾಧ್ಯತೆಯಿದೆ..

ಸಚಿವ ಸಂಪುಟ ಪುನಾರಚನೆಯಲ್ಲಿ ಸತೀಶ್ ಜಾರಕಿಹೊಳಿ ಮೇಲುಗೈ

ಎಸ್​​ಟಿ ಸಮುದಾಯದ ಹೆಚ್ಚು ಶಾಸಕರಿಗೆ ಈ ಬಾರಿ ಮಂತ್ರಿಗಿರಿ ಚಾನ್ಸ್ ಸಿಗುವ ಸಾಧ್ಯತೆ ಇದೆ. ಎಸ್​​ಟಿ ಸಮುದಾಯಕ್ಕೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ. ತನ್ನ ಸಮುದಾಯಕ್ಕೆ ಹೆಚ್ಚು ಮಂತ್ರಿಗಿರಿ ದಕ್ಕಿಸಿಕೊಳ್ಳೋಕೆ ಸಚಿವ ಸತೀಶ್ ಜಾರಕಿಹೊಳಿ ಅವರೇ ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ..

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments