ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಇಂದು ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ಗೆ ಆಗಮಿಸಿರುವ ಆರ್ಸಿಬಿ ಆಟಗಾರರನ್ನು ಅಭಿಮಾನಿಗಳು ಅತ್ಯುತ್ಸಾಹದಲ್ಲಿ ಸ್ವಾಗತಿಸಿದರು.
ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರ್ಸಿಬಿ ಆಟಗಾರರು ಬರುತ್ತಾರೆಂದು ಸಾವಿರಾರು ಅಭಿಮಾನಿಗಳು ಮೊದಲೇ ಸೇರಿದ್ದರು. ಆಟಗಾರರೆಲ್ಲಾ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳ ಉತ್ಸಾಹ ಹೇಳತೀರದಂತೆ ಆಗಿತ್ತು. ವಿಮಾನ ನಿಲ್ದಾಣದ ಟರ್ಮಿನಲ್- 1ಕ್ಕೆ ಆಗಮಿಸಿದ ರಜತ್ ಪಾಟಿದಾರ್ ಪಡೆಗೆ ಜೈಕಾರಗಳು ಮೊಳಗಿದವರು. ಆರ್ಸಿಬಿ. ಆರ್ಸಿಬಿ ಚಾಂಟ್ಸ್ ಎಲ್ಲರನ್ನು ಆಕರ್ಷಿಸಿತು. ಶಿಳ್ಳೆ, ಕೇಕೆ ವಿಮಾನ ನಿಲ್ದಾಣದಲ್ಲಿ ಕೇಳಿ ಬಂದವು
ಇನ್ನು ಆರ್ಸಿಬಿ ಅಭಿಮಾನಿಗಳ ಸಂತಸ ಕಂಡು ಬೆರಗಾದ ಎಲ್ಲ ಆಟಗಾರರು ಫ್ಯಾನ್ಸ್ ಕಡೆಗೆ ಕೈಬೀಸಿ ಚೀಯರ್ಸ್ ಮಾಡಿದರು. ನಗುವಿನಿಂದಲೇ ಎಲ್ಲರಿಗೂ ಪ್ಲೇಯರ್ಸ್ ಧನ್ಯವಾದ ಅರ್ಪಿಸಿದರು. ಇನ್ನು ಆರ್ಸಿಬಿಯ ಮುಂದಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2 ರಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿದೆ.


