#Exclusive NewsTop News

‘ನಾನು ಹಾಡಿದ್ರೆ ಪಿಬಿ ಶ್ರೀನಿವಾಸ್​ಗೆ ಆಫರ್ ಸಿಗಲ್ಲ’ ಎಂದಿದ್ದ ರಾಜ್​ಕುಮಾರ್; ಅಣ್ಣಾವ್ರ ಒಳ್ಳೆ ಮನಸ್ಸಿನ ಬಗ್ಗೆ ಇಳಯರಾಜ ಅಪರೂಪದ ಮಾತು

ರಾಜ್​ಕುಮಾರ್ ಅವರು ‘ಯಾರೇ ಕೂಗಾಡಲಿ..’ ಹಾಡನ್ನು ಹಾಡಿದ್ದರು. ಈ ಹಾಡನ್ನು ರಾಜ್​ಕುಮಾರ್ ಅವರ ಬಳಿ ಹಾಡಿಸೋ ಆಲೋಚನೆ ಯಾರಿಗೂ ಇರಲಿಲ್ಲ. ಈ ಆಲೋಚನೆ ಮೊದಲು ಬಂದಿದ್ದು ಇಳಯರಾಜ ಹಾಗೂ ಜಿಕೆ ವೆಂಕಟೇಶ್ ಅವರಿಗೆ.

ರಾಜ್​ಕುಮಾರ್ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅವರು ಮೊದಲ ಹಾಡಿದ್ದು ಎಂದರೆ ಅದು ‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ..’ ಹಾಡನ್ನು. ರಾಜ್​ಕುಮಾರ್ ಅವರು ಗಾಯಕ ಆಗಲು ಕಾರಣವಾಗಿದ್ದು ಇಳಯರಾಜ ಅವರು ಅನ್ನೋದು ವಿಶೇಷ. ಈ ಬಗ್ಗೆ ಇಳಯರಾಜ ಇತ್ತೀಚೆಗೆ ಹೇಳಿಕೊಂಡಿದ್ದರು. ಮೈಸೂರು ದಸರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು.

‘ಸಂಪತ್ತಿಗೆ ಸವಾಲ್’ ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದರು. ನಾನು ಅವರಿಗೆ ಸಹಾಯಕನಾಗಿದ್ದೆ. ಆಗ ರಾಜ್​ಕುಮಾರ್ ಸಿನಿಮಾಗಳು ಎಂದಾಗ ಪಿಬಿ ಶ್ರೀನಿವಾಸ್ ಹಾಡುತ್ತಿದ್ದರು. ಈ ಸಿನಿಮಾದ ಹಾಡನ್ನು ಹೊಸ ಧ್ವನಿ ಬೇಕು ಎಂದು ನಾನು ಜಿಕೆ ವೆಂಟಕೇಶ್ ಹತ್ತಿರ ಹೇಳಿದೆ’ ಎಂದು ಅಂದಿನ ಘಟನೆ ವಿವರಿಸಿದರು ಇಳಯರಾಜ.

Comments (0)

Your email address will not be published. Required fields are marked *

Back to top button