ಕಲಬುರಗಿ: ನಗರದ ಹೊರವಲಯದ ಕಲಬುರಗಿ ಸೆಂಟ್ರಲ್ ಜೈಲ್ನಲ್ಲಿ ಕೈದಿಗಳಿಗೆ ರಾಜಾತಿಥ್ಯ ಪ್ರಕರಣಕ್ಕೆ ಜೈಲರ್ಗಳನ್ನು ಶನಿವಾರ ಅಮಾನತು ಮಾಡಲಾಗಿದೆ. ರಾಜ್ಯಾತಿಥ್ಯ ಪ್ರಕರಣದ ಕುರಿತ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ವಿಚಾರಣೆ ತೀವ್ರಗೊಳಿಸಿರುವ ಕಾರಾಗೃಹ ಇಲಾಖೆ ಹಿರಿಯ ಅಧಿಕಾರಿಗಳು ಇದೀಗ ಹೈಫೈ ಪ್ರಕರಣದ ಹಿನ್ನೆಲೆಯಲ್ಲಿ ಜೈಲರ್ಗಳಾದ ಶಹನಾಜ್, ಪಾಂಡುರಂಗ ಹರವಾಳ ಅವರನ್ನು ಕಾರಾಗೃಹ ಇಲಾಖೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅಮಾನತು ಮಾಡಿದ್ದಾರೆ.