Tuesday, June 24, 2025
25.1 C
Bengaluru
Google search engine
LIVE
ಮನೆರಾಜಕೀಯನಿಮಗೆ ನಾಚಿಕೆಯಾಗಲ್ವಾ..ದೇವೇಗೌಡ್ರೆ - ಸಿಎಂ ಸಿದ್ದರಾಮಯ್ಯ

ನಿಮಗೆ ನಾಚಿಕೆಯಾಗಲ್ವಾ..ದೇವೇಗೌಡ್ರೆ – ಸಿಎಂ ಸಿದ್ದರಾಮಯ್ಯ

ತುಮಕೂರು: ಈ ದೇಶದಲ್ಲಿ ಪ್ರಧಾನ ಮಂತ್ರಿಯಾಗಲು ಯಾರಿದ್ದಾರೆ ಅಂತಾ ಕೇಳ್ತಿರಲ್ಲಾ ನಿಮಗೆ ನಾಚಿಕೆಯಾಗಲ್ವಾ..ದೇವೇಗೌಡ್ರೆ. ನೀವು ಪ್ರಧಾನಿಯಾಗುವಾಗ, ಈ ದೇಶದಲ್ಲಿ ಯಾರು ಪ್ರಧಾನ ಮಂತ್ರಿಯಾಗ್ತಾರೆ ಅಂತಾ ಘೋಷಣೆ ಮಾಡಿದ್ರಾ..? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೇ ಮಲ್ಲಿಕಾರ್ಜನ್ ಖರ್ಗೆ ಪ್ರಧಾನ ಮಂತ್ರಿ ಯಾಗ್ತಾರಾ..? ಈ ದೇಶದ ಪ್ರಧಾನ ಮಂತ್ರಿಯಾಗಲು ಯಾರಿದ್ದಾರೆ ಎಂಬ ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ನಿಮಗೆ ಅದೃಷ್ಟ ಇತ್ತು, ಸಿಕ್ತು. ಪ್ರಧಾನ ಮಂತ್ರಿಯಾದ್ರಿ. ಮಲ್ಲಿಕಾರ್ಜುನ ಖರ್ಗೆ ಮೋದಿಯವರಿಗಿಂತ ಏನು ಕಡಿಮೆ ಇದ್ದಾರೆ ಎಂದರು.

ನಮ್ಮಲ್ಲಿ ಬಹಳ ಜನ ಪ್ರಧಾನ ಮಂತ್ರಿಯಾಗುವ ಯೋಗ್ಯತೆ ಹೊಂದಿದವರು ಇದ್ದಾರೆ. ಒಂದು ಕಾಲದಲ್ಲಿ ಹೇಳ್ತಾ ಇದ್ರು.  ನೆಹರು ಸತ್ತ ನಂತರ ಯಾರು ಪ್ರಧಾನ ಮಂತ್ರಿಯಾಗ್ತಾರೆ…? ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಇವರೆಲ್ಲಾ ಪ್ರಧಾನ ಮಂತ್ರಿಯಾಗಿ ಒಳ್ಳೆ ಕೆಲಸ ಮಾಡಲಿಲ್ಲವಾ..? ಈ ದೇಶದಲ್ಲಿ 140 ಕೋಟಿ ಜನರಿದ್ದಾರೆ, ಅವರಲ್ಲಿ ಪ್ರಧಾನ ಮಂತ್ರಿಯಾಗುವ ಯೋಗ್ಯತೆ ಇರುವವರು ಇದ್ದಾರೆ. ದೇವೇಗೌಡ್ರೆ ನರೇಂದ್ರ ಮೋದಿ ಬಿಟ್ರೆ ಬೇರೆ ಯಾರೂ ಪ್ರಧಾನ ಮಂತ್ರಿ ಆಗುವ ಯೋಗ್ಯತೆ ಇಲ್ಲಾ…ಎನ್ನುವ ನಿಮ್ಮ ತಿಳುವಳಿಕೆ ಇದೆಯಲ್ಲಾ.. ಇದು ಸ್ವಾರ್ಥಕ್ಕೋಸ್ಕರ ಹೇಳುವಂತಹ ಮಾತುಗಳು ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments