Tuesday, June 24, 2025
26.6 C
Bengaluru
Google search engine
LIVE
ಮನೆದೇಶ/ವಿದೇಶಮ್ಯಾನ್ಮಾರ್​, ಥಾಯ್ಲೆಂಡ್ ಭೀಕರ ಭೂಕಂಪ; ನೂರಾರು ಜನ ಕಣ್ಮರೆ

ಮ್ಯಾನ್ಮಾರ್​, ಥಾಯ್ಲೆಂಡ್ ಭೀಕರ ಭೂಕಂಪ; ನೂರಾರು ಜನ ಕಣ್ಮರೆ

ನವದೆಹಲಿ: ಇಂದು ಬೆಳಿಗ್ಗೆ 11:50 ಸುಮಾರಿಗೆ ಮ್ಯಾನ್ಮಾರ್​ನಲ್ಲಿ ಭೀಕರ ಭೂಕಂಪವಾಗಿದೆ. ಭೂಕಂಪನದ ತೀವ್ರತೆ 7.2ರಷ್ಟು ದಾಖಲಾಗಿದೆ. ಇನ್ನು ಬ್ಯಾಕಾಂಕ್​ನಲ್ಲಿಯೂ ಸಹ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಭೂಕಂಪನದ ತೀವ್ರತೆಗೆ ಮ್ಯಾನ್ಮಾರ್​ನ ಗಗನಚುಂಬಿ ಕಟ್ಟಡಗಳು ಧರೆಗುರುಳಿವೆ. ಅವಾ ಸೇತುವೆ ಸೇರಿ ಬೃಹತ್​ ಕಟ್ಟಡಗಳೆಲ್ಲ ಕುಸಿದುಬಿದ್ದಿವೆ.

ಭಾರೀ ಭೂಕಂಪನಕ್ಕೆ ಜನರು ಕಂಗಾಲಾಗಿದ್ದಾರೆ. ಇನ್ನೂ, ಭೂಕಂಪನಕ್ಕೆ ಬೃಹತ್​ ಕಟ್ಟಡಗಳು ಧರೆಗುರಳುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಆಕಾಶದೆತ್ತರದ ಕಟ್ಟಡ ನೆಲಕಚ್ಚಿದ ಪರಿಣಾಮ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆ ಕೂಡಲೇ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ.

ಭೂಕಂಪದ ಬಳಿಕ ಬ್ಯಾಂಕಾಂಕ್​ನಲ್ಲಿ 43 ಮಂದಿ ನಾಪತ್ತೆಯಾಗಿದ್ದಾರೆ. ನೂರಾರು ಕಾರ್ಮಿಕರು ಕಣ್ಮರೆಯಾಗಿದ್ದು, ಇನ್ನು ಸಹ ಪತ್ತೆಯಾಗಿಲ್ಲ. ಇನ್ನು ಮ್ಯಾನ್ಮಾರ್​​ ಭೂಕಂಪಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದು, ಮ್ಯಾನ್ಮಾರ್​ ಹಾಗೂ ಥಾಯ್ಲೆಂಡ್​ ನೆರವಿಗೆ ಭಾರತ ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments