ನವದೆಹಲಿ: ಇಂದು ಬೆಳಿಗ್ಗೆ 11:50 ಸುಮಾರಿಗೆ ಮ್ಯಾನ್ಮಾರ್ನಲ್ಲಿ ಭೀಕರ ಭೂಕಂಪವಾಗಿದೆ. ಭೂಕಂಪನದ ತೀವ್ರತೆ 7.2ರಷ್ಟು ದಾಖಲಾಗಿದೆ. ಇನ್ನು ಬ್ಯಾಕಾಂಕ್ನಲ್ಲಿಯೂ ಸಹ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪನದ ತೀವ್ರತೆಗೆ ಮ್ಯಾನ್ಮಾರ್ನ ಗಗನಚುಂಬಿ ಕಟ್ಟಡಗಳು ಧರೆಗುರುಳಿವೆ. ಅವಾ ಸೇತುವೆ ಸೇರಿ ಬೃಹತ್ ಕಟ್ಟಡಗಳೆಲ್ಲ ಕುಸಿದುಬಿದ್ದಿವೆ.
ಭಾರೀ ಭೂಕಂಪನಕ್ಕೆ ಜನರು ಕಂಗಾಲಾಗಿದ್ದಾರೆ. ಇನ್ನೂ, ಭೂಕಂಪನಕ್ಕೆ ಬೃಹತ್ ಕಟ್ಟಡಗಳು ಧರೆಗುರಳುವ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಆಕಾಶದೆತ್ತರದ ಕಟ್ಟಡ ನೆಲಕಚ್ಚಿದ ಪರಿಣಾಮ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆ ಕೂಡಲೇ ಘಟನಾ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ.
ಭೂಕಂಪದ ಬಳಿಕ ಬ್ಯಾಂಕಾಂಕ್ನಲ್ಲಿ 43 ಮಂದಿ ನಾಪತ್ತೆಯಾಗಿದ್ದಾರೆ. ನೂರಾರು ಕಾರ್ಮಿಕರು ಕಣ್ಮರೆಯಾಗಿದ್ದು, ಇನ್ನು ಸಹ ಪತ್ತೆಯಾಗಿಲ್ಲ. ಇನ್ನು ಮ್ಯಾನ್ಮಾರ್ ಭೂಕಂಪಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದು, ಮ್ಯಾನ್ಮಾರ್ ಹಾಗೂ ಥಾಯ್ಲೆಂಡ್ ನೆರವಿಗೆ ಭಾರತ ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.