ಗದಗದಲ್ಲಿ ಹಸೆಮಣೆ ಏರಬೇಕಿದ್ದ ದೈಹಿಕ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಮದುವೆಗೆ ಇನ್ನೇನು 18 ದಿನ ಬಾಕಿ ಇರುವಾಗಲೇ ಆಕೆಯ ಪ್ರಿಯತಮ ಟಾರ್ಚರ್ ಕೊಡ್ತಿದ್ದ ಆರೋಪ ಕೇಳಿಬಂದಿದೆ.ಇದರಿಂದ ಮನನೊಂದು 29 ವರ್ಷದ ಸೈರಾಬಾನು ನದಾಫ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ದೈಹಿಕ ಶಿಕ್ಷಕಿ ಯುವತಿ ಸೈರಾಬಾನು ಕಳೆದ 5 ವರ್ಷದಿಂದ ಮೈಲಾರಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದ್ರೆ ಕೆಲ ದಿನಗಳ ಹಿಂದೆ ಲವ್ ಬ್ರೇಕಪ್ ಆಗಿತ್ತು.. ಆ ಬಳಿಕ ಶಿಕ್ಷಕಿ ಬೇರೊಂದು ಮದುವೆಗೆ ಒಪ್ಪಿದ್ದಳು. ಆದ್ರೆ ಶಿಕ್ಷಕಿಯ ಮದುವೆ ತಯಾರಿ ನೋಡಿದ ಮಾಜಿ ಪ್ರಿಯಕರ ಟಾರ್ಚರ್ ಕೊಡ್ತಿದ್ದನಂತೆ. ಇಬ್ಬರ ಫೋಟೋ ವೈರಲ್ ಮಾಡೋದಾಗಿ ಮೈಲಾರಿ ಬೆದರಿಕೆ ಹಾಕಿದ್ದನಂತೆ. ಇದರಿಂದ ಹೆದರಿದ ಸೈರಾಬಾನು, ಪೋಷಕರು ಮನೆಯಿಂದ ಹೊರಗೆ ಹೋಗಿದ್ದಾಗ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಮದುವೆ ಸಂಭ್ರಮದಲ್ಲಿದ್ದ ಮನೆ ಮಂದಿ ಕಣ್ಣೀರಿನ ಮಡುವಿಗೆ ಬಿದ್ದಿದ್ದಾರೆ