Tuesday, April 29, 2025
27.6 C
Bengaluru
LIVE
ಮನೆರಾಜ್ಯಸಿಎಂ ಭಾಷಣಕ್ಕೆ ಇರಲೇ ಇಲ್ಲ ಜನ - ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಖಾಲಿ

ಸಿಎಂ ಭಾಷಣಕ್ಕೆ ಇರಲೇ ಇಲ್ಲ ಜನ – ಕಾಂಗ್ರೆಸ್ ಸಮಾವೇಶದಲ್ಲಿ ಖಾಲಿ ಖಾಲಿ

ಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಭೈರದೇನಹಳ್ಳಿಯಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ನಡೀತು.. ಈ ಸಮಾವೇಶದಲ್ಲಿ ಜನರೇ ಇಲ್ಲದೆ ಕುರ್ಚಿಗಳು ಬಣಗುಡುತ್ತಿದ್ದವು

ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗಲೂ ಜನರೇ ಇರಲಿಲ್ಲ..  ಸಚಿವ ಕೆ.ಹೆಚ್.ಮುನಿಯಪ್ಪ ನೇತೃತ್ವದಲ್ಲಿ ನಡೆದ 2 ವರ್ಷದ ಸಾಧನೆ ಸಾಮಾವೇಶ ಸಭೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು.

ಸಚಿವ ಜಮೀರ್, ಸಚಿವ ಹೆಚ್.ಸಿ. ಮಹದೇವಪ್ಪ, ಬೋಸರಾಜು ಸೇರಿದಂತೆ  ಇಡೀ ಸರ್ಕಾರವೇ ಉಪಸ್ಥಿತಿ ಇದ್ದ ಕಾರ್ಯಕ್ರಮಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯ್ತು

ಸಚಿವ ಕೆ.ಹೆಚ್.ಮುನಿಯಪ್ಪ ಅವರು ಬರೋಬ್ಬರಿ ಒಂದು ವಾರಗಳ ಕಾಲ ಈ ಸಮಾವೇಶ ನಡೆಸಲು ಸಿದ್ದತೆ ನಡೆಸಿದ್ದರು.

ಈ ಮೊದಲು ಮೊದಲು ಸಿಎಂ ಭಾಷಣ ಕೇಳಲು ಜನ ಮುಗಿಬಿದ್ದು ಬರ್ತಿದ್ರು. ಆದ್ರೆ ದೇವನಹಳ್ಳಿ ಸಮಾವೇಶಕ್ಕೆ ಸಿದ್ದು ಭಾಷಣ ಕೇಳಲು ಜನ ನಿರುತ್ಸಾಹ ತೋರಿದ್ರು.  ಕೋಟ್ಯಾಂತರ ರೂಗಳು ಖರ್ಚು ಮಾಡಿದ್ದ  ಸಾಧನೆ ಸಮಾವೇಶ ಸಂಪೂರ್ಣ ವಿಫಲ ಆಯ್ತು

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments