Monday, June 23, 2025
26.3 C
Bengaluru
Google search engine
LIVE
ಮನೆಕ್ರೈಂ ಸ್ಟೋರಿಪವನ್ ಕಲ್ಯಾಣ ಮಗನಿಗೆ ಗಾಯ; ಸಿಂಗಾಪೂರ್​ಗೆ ಆಂಧ್ರ ಡಿಸಿಎಂ ದಿಢೀರ್ ಪ್ರಯಾಣ

ಪವನ್ ಕಲ್ಯಾಣ ಮಗನಿಗೆ ಗಾಯ; ಸಿಂಗಾಪೂರ್​ಗೆ ಆಂಧ್ರ ಡಿಸಿಎಂ ದಿಢೀರ್ ಪ್ರಯಾಣ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರನಿಗೆ ಗಾಯಗಳಾಗಿವೆ. ಸಿಂಗಾಪುರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ, ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಂಕರ್ ಅವರ ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ನುಗ್ಗಿದ್ದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರಂತೆ. ಪ್ರಸ್ತುತವಾಗಿ ಸಿಂಗಾಪುರದ ಆಸ್ಪತ್ರೆಯಲ್ಲಿ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಚಿಕಿತ್ಸೆ ನೀಡಲಾಗುತ್ತಿದೆಯಂತೆ.

ಸದ್ಯ ಡಿಸಿಎಂ ಪವನ್ ಕಲ್ಯಾಣ್ ಅವರು ವಿಶಾಖಪಟ್ಟಣಂನಲ್ಲಿ ಇದ್ದಾರೆ. ಕಾರ್ಯಕ್ರಮವನ್ನ ಮುಗಿಸಿ ಸಿಂಗಪೂರ್​ಗೆ ಪ್ರಯಾಣ ಬೆಳಸಲಿದ್ದಾರಂತೆ. ಮಾರ್ಕ್ ಶಂಕರ್ ಆನಾ ಲೆನೆವಾ ಮತ್ತು ಪವನ್ ಕಲ್ಯಾಣ್ ದಂಪತಿ ಪುತ್ರನಾಗಿದ್ದಾನೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments