Monday, June 23, 2025
25.9 C
Bengaluru
Google search engine
LIVE
ಮನೆಸುದ್ದಿಪವನ್​ ಕಲ್ಯಾಣ ಪುತ್ರನಿಗೆ ಸೀರಿಯಸ್​..!

ಪವನ್​ ಕಲ್ಯಾಣ ಪುತ್ರನಿಗೆ ಸೀರಿಯಸ್​..!

ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಕಿರಿಯ ಮಗ ಮಾರ್ಕ್ ಶಂಕರ್, ಸಿಂಗಾಪೂರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾರೆ. ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮಾರ್ಕ್ ಶಂಕರ್ ಬೆಂಕಿಯಲ್ಲಿ ಸಿಲುಕಿ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಶ್ವಾಸಕೋಶಕ್ಕೆ ಹೊಗೆ ಹೋದ ಹಿನ್ನೆಲೆ ತೀವ್ರ ಅನಾರೋಗ್ಯಕ್ಕಿಡಾಗಿದ್ದಾರೆ.

ಕುರಿಡಿ ಗ್ರಾಮದ ಬುಡಕಟ್ಟು ಜನಾಂಗದವರನ್ನು ಭೇಟಿ ಮಾಡಿ ಆ ನಂತರ ಅಲ್ಲಿರುವ ದೇವಸ್ಥಾನಕ್ಕೆ ತೆರಳಲಿರುವ ಪವನ್ ಕಲ್ಯಾಣ್ ಆ ನಂತರ ಸಿಂಗಾಪೂರಗೆ ತೆರಳಲಿದ್ದಾರೆ. ಇನ್ನು ಕುರಿಡಿ ಗ್ರಾಮದ ನಂತರ ಪವನ್ ಕಲ್ಯಾಣ್ ವಿಶಾಖಪಟ್ಟಣಂನಲ್ಲಿರುವ ಸ್ಟೀಲ್ ಪ್ಲಾಂಟ್‌ಗೆ ಭೇಟಿ ನೀಡಬೇಕಿತ್ತು. ಮುಂದಿನ ಮೂರು ದಿನಗಳ ಕಾಲ ವಿಶಾಖಪಟ್ಟಣಂನಲ್ಲಿ ಇರಬೇಕಿತ್ತು. ಆದರೆ ಈಗ ಪವನ್ ಕಲ್ಯಾಣ್ ತಮ್ಮ ಈ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments