Tuesday, June 24, 2025
25.9 C
Bengaluru
Google search engine
LIVE
ಮನೆರಾಜ್ಯಡಿಗ್ರಿಗೆ ಮುಕ್ತ ಪರೀಕ್ಷೆ : ರಾಜ್ಯ ಸರ್ಕಾರಕ್ಕೆ ಪ್ರೊ.ಜಯಕರ ಸಮಿತಿ ಸಲಹೆ 

ಡಿಗ್ರಿಗೆ ಮುಕ್ತ ಪರೀಕ್ಷೆ : ರಾಜ್ಯ ಸರ್ಕಾರಕ್ಕೆ ಪ್ರೊ.ಜಯಕರ ಸಮಿತಿ ಸಲಹೆ 

ಸ್ನಾತಕ ಪದವಿ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ನಿಯಂತ್ರಿಸಬೇಕಾದರೆ ಉನ್ನತ ಶಿಕ್ಷಣದಲ್ಲಿ ತೆರೆದ ಪುಸ್ತಕ ಓಪನ್​ ಬುಕ್​ ಪರೀಕ್ಷೆ ನಡೆಸಬೇಕು. ಜತೆಗೆ ಅಂಕಗಳ ಬದಲಾಗಿ ಗ್ರೇಡ್​​ ಪದ್ಧತಿ ಜಾರಿಗೆ ತರಬೇಕೆಂದು ತಜ್ಞರ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಖಾಸಗಿ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡಿದ ಭಯದ ಅಂಜಿಕೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆಗಾಗಿ ಉನ್ನತ ಶಿಕ್ಷಣ ಇಲಾಖೆಯು ಜುಲೈನಲ್ಲಿ ರಚಿಸಿದ್ದ ಸಮಿತಿಯು ಈ ಶಿಫಾರಸು ನೀಡಿದೆ.

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್​​.ಎಂ ಜಯಕರ ಅಧ್ಯಕ್ಷತೆಯ ಸಮಿತಿಯಲ್ಲಿ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಂ.ಶ್ರೀನಿವಾಸ್​​, ನಿಮ್ಹಾನ್ಸ್​ನ ಪ್ರೊಫೆಸರ್​ ​​ಡಾ. ವೀಣಾ ಸತ್ಯನಾರಾಯಣ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್​ನ ಸದಸ್ಯ ಕಾರ್ಯದರ್ಶಿ ಸದಸ್ಯರಾಗಿದ್ದರು. ಅದು ಅಧ್ಯಯನ ನಡೆಸಿ ವರದಿಯನ್ನು ಇತ್ತೀಚೆಗಷ್ಟೆ ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ ಹೋಗಲಾಡಿಸಬೇಕಾದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್​ಗಳ ಪರೀಕ್ಷೆಯಲ್ಲಿ ತೆರೆದ ಪುಸ್ತಕ ಪರೀಕ್ಷೆ ನಡೆಸಬೇಕೆಂದು ಶಿಫಾರಸು ಮಾಡಿದೆ.

ಶ್ರೇಣಿ ಪದ್ಧತಿ : ಹಾಲಿ ವಿಶ್ವವಿದ್ಯಾಲಯಗಳಲ್ಲಿರುವ ಅಂಕ ಮತ್ತು ಕ್ಯುಮಿಲೇಟಿವ್​ ಗ್ರೇಡ್​ ಸಂಪೂರ್ಣವಾಗಿ ಶ್ರೇಣಿ ಆಧಾರದಲ್ಲಿ ಅಂಕಗಳನ್ನು ನೀಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಅಂಕದ ತಾರತಮ್ಯ ಹೆಚ್ಚಾಗಿ ಕಾಣುವುದಿಲ್ಲ. ಶ್ರೇಣಿ ವ್ಯವಸ್ಥೆಯನ್ನು ಈಗಾಗಲೇ ವಿದೇಶಗಳಲ್ಲಿ ಅಳವಡಿಸಿಕೊಂಡಿದ್ದು, ನಮ್ಮ ರಾಜ್ಯದಲ್ಲೂ ಸಿಜಿಪಿಎ ಜತೆಗೆ ಅಂಕಗಳನ್ನು ಸಹ ನೀಡಲಾಗುತ್ತಿದೆ. ಇದು ತೆಗೆದು ಹಾಕಬೇಕೆಂದು ಶಿಫಾರಸು ಮಾಡಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments