ಹಿಂದೂಗಳ ಪವಿತ್ರ ಕ್ಷೇತ್ರ ಗುರುರಾಯರ ಶ್ರದ್ಧಾ ಕೇಂದ್ರ ಮಂತ್ರಾಲಯ.. ಇಲ್ಲಿರುವ ಪ್ರಸಿದ್ಧ ರಾಘವೇಂದ್ರ ಸ್ವಾಮಿ ಮಠಕ್ಕೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಇತ್ತೀಚೆಗೆ ಈ ಮಠಕ್ಕೆ ಒಂಟಿಯಾಗಿ ಬರುವ ಭಕ್ತರಿಗೆ ಫಜೀತಿ ಎದುರಾಗಿದೆ. ರಾಘವೇಂದ್ರ ಮಠ ಕೈಗೊಂಡಿರೋ ಹೊಸ ನಿಯಮಗಳೇ ಇದಕ್ಕೆ ಕಾರಣ.. ಯಾಕಂದ್ರೆ ರಾಘವೇಂದ್ರ ಮಠಕ್ಕೆ ಒಬ್ಬರೇ ಆಗಿ ಬರುವ ಭಕ್ತರಿಗೆ ಇನ್ಮುಂದೆ ಯಾವುದೇ ವಸತಿ ಸೌಲಭ್ಯವನ್ನು ನೀಡಲಾಗುವುದಿಲ್ಲ. ಈ ನಿಯಮವು ಮಠ ಅಷ್ಟೇ ಅಲ್ದೇ ಸುತ್ತಮುತ್ತಲಿನ ಖಾಸಗಿ ಲಾಡ್ಜ್ಗಳು ಕೂಡ ಅನುಸರಿಸುತ್ತಿದೆ. ಇಬ್ಬರು ಅಥವಾ ಕುಟುಂಬ ಸಮೇತ ಬಂದ್ರಷ್ಟೇ ರಾಯರ ಮಠದಲ್ಲಿ ವಸತಿ ಸಿಗುತ್ತೆ.. ಒಂಟಿಯಾಗಿ ಬಂದ್ರೆ ರೂಂ ಸಿಗಲ್ಲ.. ಇದಕ್ಕೆ ಕೆಲವು ಕಾರಣಗಳು ಕೂಡ ಇದೆ.
ಬೆಂಗಳೂರು ನಿವಾಸಿ ಸಚಿನ್ ರೈ ಅನ್ನೋರು ಇತ್ತೀಚೆಗೆ ಮಂತ್ರಾಲಯಕ್ಕೆ ಹೋಗಿದ್ರು.. ಆದ್ರೆ ಅವರು ಒಂಟಿಯಾಗಿ ಬಂದ ಕಾರಣ ಎಲ್ಲ ಲಾಡ್ಜ್ಗಳು ಹಾಗೂ ವಸತಿ ನಿಲಯದಲ್ಲಿ ಅವಕಾಶವನ್ನೇ ಕೊಟ್ಟಿಲ್ಲ ಅಂತ ಹೇಳಿಕೊಂಡಿದ್ದಾರೆ..
ಇದೇ ನಿಯಮವನ್ನು ಇತ್ತೀಚೆಗೇ ಸುತ್ತಮುತ್ತಲಿನ ಖಾಸಗಿ ಲಾಡ್ಜ್ಗಳೂ ಅನುಸರಿಸತೊಡಗಿವೆ. ಇದರಿಂದ ಭಕ್ತರು ಅನಾನುಕೂಲಕ್ಕೊಳಗಾಗಿದ್ದಾರೆ. ಖಾಸಗಿ ಲಾಡ್ಜ್ಗಳು ಕೂಡಾ ಒಬ್ಬರೇ ಆಗಿ ಬರುವ ಭಕ್ತರಿಗೆ ಕೊಠಡಿ ನೀಡಲು ನಿರಾಕರಿಸುತ್ತಿವೆ. ಆದ್ರೆ ಅಲ್ಲಿರೋ ಕೆಲ ಮಧ್ಯವರ್ತಿಗಳು ಈ ಪರಿಸ್ಥಿತಿಯನ್ನ ಲಾಭ ಮಾಡಿಕೊಳ್ತಿದ್ದಾರೆ.. ಕೊಠಡಿ ಸಿಗದ ಒಂಟಿ ಭಕ್ತರಿಗೆ ಅವರು ಹೆಚ್ಚುವರಿ ಹಣಕ್ಕೆ ರೂಂ ಕೊಡ್ತಿದ್ದಾರೆ.
ಆದ್ರೆ ಇದರ ಹಿಂದೆ ಅಸಲಿ ಕಾರಣವೊಂದು ಇದ್ಯಂತೆ.. ಇತ್ತೀಚೆಗೆ ಮಂತ್ರಾಲಯ ಸುತ್ತಮುತ್ತ ಹಾಗೇ ಹೋಟೆಲ್ ಲಾಡ್ಜ್ಗಳಲ್ಲಿ ಆತ್ಮಹತ್ಯೆ ಕೇಸ್ಗಳು ಹೆಚ್ಚುತ್ತಿವೆ. ಹೀಗಾಗಿ ಪೊಲೀಸರೇ ಮಠದ ಆಡಳಿತ ಮಂಡಳಿಗೆ ಒಂಟಿಯಾಗಿ ಬರುವವರಿಗೆ ರೂಂ ಕೊಡಬೇಡಿ ಎಂದು ಸೂಚಿಸಿದ್ದಾರಂತೆ.. ಈಗ ಮಠದಲ್ಲಿ 1,100ಕ್ಕಿಂತ ಹೆಚ್ಚಿನ ಕೊಠಡಿಗಳಿದ್ದು ಒಂದನ್ನೂ ಒಂಟಿ ಭಕ್ತರಿಗೆ ನೀಡಲಾಗುತ್ತಿಲ್ಲ. ಇದು ದರ್ಶನಕ್ಕಾಗಿ ದೂರದೂರಿಂದ ಬರುವ ಭಕ್ತರಿಗೆ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಆದರೆ ಈ ಬಗ್ಗೆ ಮಠದ ಆಡಳಿತ ಮಂಡಳಿ ಕೂಡ ಸ್ಪಷ್ಟನೆ ಕೊಟ್ಟಿದೆ.. ಈ ನಿಯಮ ಹೊಸದು ಏನಲ್ಲ.. ಬಹಳ ಕಾಲದಿಂದಲೂ ಒಂಟಿಯಾಗಿ ಬರುವ ಭಕ್ತರಿಗೆ ರೂಂ ಕೊಡ್ತಿಲ್ಲ ಎಂದಿದ್ದಾರೆ. ಅಲ್ಲದೇ ಮಠದ ಅಧಿಕೃತ ವೆಬ್ಸೈಟ್ನಲ್ಲೂ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.. ಒಂಟಿಯಾಗಿ ಬಂದವರ, ಮದುವೆ ಆಗದ ಜೋಡಿಗಳಿಗೆ ರೂಂ ಕೊಡುವುದಿಲ್ಲ ಎಂದಯ ತಿಳಿಸಿದ್ದಾರೆ.. ಅಲ್ಲದೇ
ಒಂಟಿಯಾಗಿ ಬರುವವರ ನಡವಳಿಕೆಗಳನ್ನು ಗಮನಿಸುವುದು ಕಷ್ಟ. ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ದಾಖಲೆ ಕೇಳಿದ್ರೂ ಕೊಡುವುದಿಲ್ಲ.. ಇದರ ಬದಲು ರೂಂ ಕೊಡದಿರುವುದೇ ಉತ್ತಮ ನಿರ್ಧಾರ ಅಂತ ಆಡಳಿತ ಮಂಡಳಿ ತಿಳಿಸಿದೆ.
ಆದರೆ ನಿಯಮ ಹಲವು ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಲವಾರು ಮಂದಿ ಮಠಕ್ಕೆ ಭೇಟಿ ಮಾಡುವ ಮೊದಲು ಈ ನಿಯಮದ ಬಗ್ಗೆ ತಿಳಿದಿರಲ್ಲ. ಅನೇಕ ಭಕ್ತರು ತಮ್ಮ ತಾತ್ಕಾಲಿಕ ಇತರ ಕೆಲಸಗಳಿಂದಾಗಿ ಅಥವಾ ಕಷ್ಟಪಟ್ಟು ಸಮಯ ಮಾಡಿಕೊಂಡು ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಆದ್ರೆ ಉಳಿದುಕೊಳ್ಳಲು ರೂಂ ಸಿಗದೆ ಪರದಾಡುತ್ತಿದ್ದಾರೆ.. ಒಂಟಿ ಮಹಿಳೆಯರು ಬಂದರೂ ಅವರಿಗೆ ವಸತಿ ಸಿಗದೆ ಪರದಾಡಬೇಕಾಗಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ..