ಬೆಂಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರು ಸದಾ ಯಾವುದಾದರೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿರುತ್ತೆ. ಇದೀಗ ಅವರ ಆಪ್ತ ಎನ್ನಲಾದ ವ್ಯಕ್ತಿಯೊಬ್ಬ ಗ್ಯಾಂಗ್ ಕಟ್ಟಿಕೊಂಡು ಯುವಕನೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಗ್ಯಾಂಗ್ ನ ಲೀಡರ್ ಅಂತ ಹೇಳಲಾಗ್ತಿರುವ ಅಬ್ಬಾಸ್ ಮತ್ತು ಆತನ ಸಹಚರರು ಯುವಕನಿಗೆ ಅಮಾನುಷವಾಗಿ ಥಳಿಸಿದ್ದಾರೆ.
ಅಬ್ಬಾಸ್ ನಲಪಾಡ್ ಆಪ್ತ ಎಂದು ಹೇಳಲಾಗ್ತಿದೆ. ಮನೆಯೊಂದರ ಕೆಳಗಡೆ ಕಾರು ಪಾರ್ಕಿಂಗ್ನಲ್ಲಿ ಈ ಹಲ್ಲೆ ನಡೆದಿದೆ. ಅಬ್ಬಾಸ್, ಸುಲ್ತಾನ್ ಸೇರಿ ನಾಲ್ವರು ಈ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕ ಕಾಲು ಹಿಡಿದು ಕ್ಷಮೆ ಕೇಳಿದರೂ ಹಲ್ಲೆ ಮಾತ್ರ ನಿಲ್ಲಲಿಲ್ಲ. ಯುವಕನ ಕೈ, ಕಾಲು, ತಲೆ ಎಂದು ಎಲ್ಲೆಂದರಲ್ಲಿ ಪೈಪ್ನಿಂದ ಹೊಡೆದಿದ್ದಾರೆ ಎನ್ನಲಾಗಿದೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಅಶೋಕ ನಗರ ಪೋಲಿಸರು ಅಬ್ಬಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.