Sunday, June 8, 2025
25.8 C
Bengaluru
Google search engine
LIVE
ಮನೆ#Exclusive NewsTop Newsನನ್ನ ಹೇಳಿಕೆಯಿಂದ ಶಿವಣ್ಣಗೆ ಮುಜುಗರ - ನಟ ಕಮಲ್ ಹಾಸನ್

ನನ್ನ ಹೇಳಿಕೆಯಿಂದ ಶಿವಣ್ಣಗೆ ಮುಜುಗರ – ನಟ ಕಮಲ್ ಹಾಸನ್

ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಯಾವುದಾದ್ರೂ ಒಂದು ಸುದ್ದಿ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿದೆ ಅಂದ್ರೆ ಅದು ಕಮಲ್‌ ಹಾಸನ್‌ ಕೊಟ್ಟ ಕನ್ನಡ ಭಾಷಾ ವಿರೋಧಿ ಹೇಳಿಕೆ.. ಅದೆಷ್ಟೋ ಕನ್ನಡಿಗರು ಕಮಲ್‌ ಹಾಸನ್‌ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ರು. ಕಮಲ್‌ಹಾಸನ್‌ ಕ್ಷಮೆ ಕೇಳಬೇಕು , ಕ್ಷಮೆ ಕೇಳಿದ್ರೆ ಮಾತ್ರ ಅವರ ಥಗ್‌ ಲೈಫ್‌ ಸಿನಿಮಾವನ್ನು ರಾಜ್ಯದಲ್ಲಿ ರಿಲೀಸ್‌ ಮಾಡೋದಕ್ಕೆ ಅವಕಾಶ ಮಾಡಿಕೊಡ್ತಿವಿ ಅಂತ ಫಿಲ್ಮ್ ಚೇಂಬರ್ ಸ್ಪಷ್ಟವಾಗಿ ಹೇಳಿತ್ತು. ಆದ್ರೆ, ಕ್ಷಮೆ ಕೇಳಲು ನಿರಾಕರಿಸಿ ಕಮಲ್ ಹಾಸನ್ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲುಗೆ ಪತ್ರ ಬರೆದಿದ್ದಾರೆ.

ಕಮಲ್ ಹಾಸನ್ ಪತ್ರದಲ್ಲಿ ಏನಿದೆ?
ಥಗ್ ಲೈಫ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ದಂತಕಥೆ ಡಾ.ರಾಜ್‌ಕುಮಾರ್ ಹಾಗು ಶಿವರಾಜ್‌ಕುಮಾರ್ ಅವರ ಬಗ್ಗೆ ಪ್ರೀತಿಯಿಂದ ಹೇಳಲಾದ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ನನಗೆ ನೋವುಂಟುಮಾಡಿದೆ. ನಾವೆಲ್ಲರೂ ಒಂದೇ ಕುಟುಂಬದವರು.. ಯಾವುದೇ ರೀತಿಯಲ್ಲೂ ಕನ್ನಡವನ್ನು ಕುಗ್ಗಿಸುವ ಹೇಳಿಕೆ ನೀಡಿಲ್ಲ. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ವಿವಾದ ಅಥವಾ ಚರ್ಚೆ ಇಲ್ಲ.

ತಮಿಳಿನಂತೆಯೇ, ಕನ್ನಡವೂ ನಾನು ಬಹಳ ಹಿಂದಿನಿಂದಲೂ ಮೆಚ್ಚುವ ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪ್ರದಾಯವನ್ನು ಹೊಂದಿದೆ. ನನ್ನ ವೃತ್ತಿಜೀವನದುದ್ದಕ್ಕೂ, ಕನ್ನಡ ಮಾತನಾಡುವ ಸಮುದಾಯವು ನನಗೆ ನೀಡಿದ ಪ್ರೀತಿ ವಾತ್ಸಲ್ಯವನ್ನು ನಾನು ಮರೆತಿಲ್ಲ. ನಾನು ಇದನ್ನು ಸ್ಪಷ್ಟ ಆತ್ಮಸಾಕ್ಷಿಯಾಗಿ ಮತ್ತು ದೃಢನಿಶ್ಚಯದಿಂದ ಹೇಳುತ್ತೇನೆ..

ಭಾಷೆಯ ಮೇಲಿನ ನನ್ನ ಪ್ರೀತಿ ನಿಜವಾದದ್ದು.. ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಗೆ ನನಗೆ ಅಪಾರ ಗೌರವವಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯ ಶಾಶ್ವತ.. ನಾನು ಯಾವಾಗಲೂ ಎಲ್ಲಾ ಭಾರತೀಯ ಭಾಷೆಗಳ ಸಮಾನ ಘನತೆಯ ಪರವಾಗಿ ನಿಲ್ಲುತ್ತೇನೆ. ಯಾವುದೇ ಒಂದು ಭಾಷೆಯ ಪ್ರಾಬಲ್ಯವನ್ನು ವಿರೋಧಿಸುತ್ತೇನೆ.. ಏಕೆಂದರೆ ಅಂತಹ ಅಸಮತೋಲನವು ಭಾರತದ ಒಕ್ಕೂಟದ ಭಾಷಾ ರಚನೆಯನ್ನು ಹಾಳು ಮಾಡುತ್ತದೆ.

ನನಗೆ ಸಿನಿಮಾ ಭಾಷೆ ಗೊತ್ತು ಮತ್ತು ಮಾತನಾಡುತ್ತೇನೆ. ಸಿನಿಮಾ ಪ್ರೀತಿ ಮತ್ತು ಬಾಂಧವ್ಯವನ್ನು ಮಾತ್ರ ತಿಳಿದಿರುವ ಸಾರ್ವತ್ರಿಕ ಭಾಷೆ. ನನ್ನ ಹೇಳಿಕೆಯು ನಮ್ಮೆಲ್ಲರ ನಡುವೆ ಆ ಬಂಧ ಮತ್ತು ಏಕತೆಯನ್ನು ಸ್ಥಾಪಿಸಲು ಮಾತ್ರ.. ನನ್ನ ಹಿರಿಯರು ನನಗೆ ಕಲಿಸಿದ ಈ ಪ್ರೀತಿ ಮತ್ತು ಬಾಂಧವ್ಯವನ್ನೇ ನಾನು ಹಂಚಿಕೊಳ್ಳಲು ಬಯಸಿದ್ದೆ.

ಶಿವಣ್ಣ ಬಗ್ಗೆ ಕಮಲ್‌ ಮಾತು

ಶಿವಣ್ಣ ಅವರು ನಮ್ಮ ಮೇಲಿರುವ ಪ್ರೀತಿ ಮತ್ತು ಬಾಂಧವ್ಯದಿಂದಲೇ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ರು.. ಆದ್ರೆ, ನನ್ನ ಹೇಳಿಕೆಯಿಂದ ಶಿವಣ್ಣ ಅವರು ಮುಜುಗರ ಅನುಭವಿಸಬೇಕಾಯಿತು.. ಈ ಬಗ್ಗೆ ನನಗೆ ನಿಜವಾಗಿಯೂ ವಿಷಾದವಿದೆ. ಸಿನಿಮಾ ಜನರ ನಡುವೆ ಸೇತುವೆಯಾಗಿ ಉಳಿಯಬೇಕು, ಅವರನ್ನು ವಿಭಜಿಸುವ ಗೋಡೆಯಾಗಿ ಉಳಿಯಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು.. ಈ ತಪ್ಪು ತಿಳುವಳಿಕೆ ತಾತ್ಕಾಲಿಕ ಮತ್ತು ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವವನ್ನು ಪುನರುಚ್ಚರಿಸಲು ಒಂದು ಅವಕಾಶ .. ಹೀಗೆಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments