ಬೆಂಗಳೂರು: ಎಂಎಲ್ಸಿ ರಾಜೇಂದ್ರ ಅವರ ದೂರಿನ ಅನ್ವಯ ಕ್ಯಾತಸಂದ್ರ ಪೋಲಿಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಎಂಎಲ್ಸಿ ರಾಜೇಂದ್ರ ಅವರು ಆರೋಪ ಮಾಡಿದ ಹಾಗೆ 18 ನಿಮಿಷಗಳ ಆಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಡಿಯೋದಲ್ಲಿ ಇಬ್ಬರ ಮಾತಿನ ಸಂಭಾಷಣೆ ಇದ್ದು, ಆ ಸಂಭಾಷಣೆಯ ಬಗ್ಗೆ ಒಂದಿಷ್ಟು ಸ್ಪಷ್ಟನೆ ಸಿಗಬೇಕಿದೆ. ಈಗಾಗಲೇ ರಾಜೇಂದ್ರ ಅವರು ಆರೋಪ ಮಾಡಿದ ಹಾಗೇ ಸೋಮ ಮತ್ತು ಭರತ್ ಮಾತುಕತೆನಾ ಅಂತ ಪರಿಶೀಲನೆ ನಡೆಸ್ತಾ ಇದ್ದಾರೆ. ಇದರ ಜೊತೆಗೆ ಆಡಿಯೋವನ್ನ ಎಫ್ಎಸ್ಎಲ್ಗೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ
ಇತ್ತಿಚಿಗಷ್ಟೇ ರಾಜೇಂದ್ರ ಹನಿಟ್ರ್ಯಾಪ್ಗೆ ಬಂದವ್ರು, ನನ್ನ ಹತ್ಯಗೆ ಸಂಚು ರೂಪಿಸಿದ್ದರು. ಇದಕ್ಕಾಗಿ 70 ಲಕ್ಷ ಸುಪಾರಿ ನೀಡಲಾಗಿತ್ತೆಂದು ರಾಜೇಂದ್ರ ದೂರು ನೀಡಿದ್ರು.