ಬಳ್ಳಾರಿ: ಪಾಕಿಸ್ತಾನದ ಜೊತೆ ಯುದ್ಧ ಮಾಡಲು ನಾನ್ ರೆಡಿ ಅಂತ ಸಚಿವ ಜಮೀರ್ ಅಹ್ಮದ್ ಘೋಷಿಸಿದ್ದಾರೆ.. ಭಾರತಕ್ಕಾಗಿ ಪ್ರಾಣ ಕೊಡೋಕೂ ಸಿದ್ಧ.. ಪಾಕಿಸ್ತಾನಕ್ಕೆ ನಾನು ಬೇಕಾದ್ರೆ ಸೂಸೈಡ್ ಬಾಂಬ್ ಕಟ್ಟಿಕೊಂಡು ಹೋಗಿ ಪಾಕಿಸ್ತಾನದಲ್ಲಿ ಬ್ಲಾಸ್ಟ್ ಮಾಡೋಕೆ ರೆಡಿ ಅಂತ ಸಚಿವ ಜಮೀರ್ ಅಹಮದ್ ಹೇಳಿದ್ರು.
ಪಾಕಿಸ್ತಾನದ ಜೊತೆ ಯುದ್ಧ ಮಾಡಲು ಭಾರತ ರೆಡಿ ಇದೆ. ವಿ.ಆರ್ ಇಂಡಿಯನ್ಸ್. ವಿ ಆರ್ ಹಿಮದೂಸ್ತಾನಿ ಎಂದಿದ್ದಾರೆ. ನಮಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇಲ್ಲ.. ಮಂತ್ರಿಯಾಗಿ ನನ್ನನ್ನು ಕಳಿಸ್ತಾರೆ ಅಂದ್ರೆ ಯುದ್ಧಕ್ಕೆ ಹೋಗಲು ನಾನು ರೆಡಿಯಾಗಿದ್ದಾನೆ. ಆತ್ಮಾಹುತಿ ಬಾಂಬರ್ ಆಗ್ತೀನಿ, ಮೋದಿ ಅಮಿತ್ ಶಾ ನನಗೆ ಬಾಂಬ್ ಕೊಡಲಿ, ನಾನು ಹೋಗಿ ಯುದ್ಧ ಮಾಡ್ತೀನಿ. ಇದು ಅಲ್ಲಾ ಮೇಲೆ ಆಣೆ, ದೇವರ ಮೇಲೆ ಆಣೆ ಸತ್ಯ ಅಂತ ಸಚಿವ ಜಮೀರ್ ಅಹ್ಮದ್ ಹೇಳಿದ್ರು
ಜಮೀರ್ ಹೇಳಿದ ಸುದ್ದಿಗಾಗಿ ಈ ಕೆಳಗಿನ ವಿಡಿಯೋ ನೋಡಿ.