ಬೆಂಗಳೂರು :
ಅಬಕಾರಿ ಸಚಿವ ಆರ್. ಬಿ ತಿಮ್ಮಾಪುರ ಅವರ ಕಚೇರಿಯಲ್ಲಿ ಎಲೆಕ್ಷನ್ ವರ್ಗಾವಣೆ ನೆಪದಲ್ಲಿ 18 ಕೋಟಿ ಕಲೆಕ್ಷನ್ ನಡೆದಿದೆ. ಅಕ್ರಮ ಮನಿ ಲಾಂಡ್ರಿಂಗ್ ಚಟುವಟಿಕೆ ನಡೆದಿದೆ ಎಂದು ಆರೋಪಿಸಿ ಗವರ್ನರ್ ಕಚೇರಿಗೆ ಸಲ್ಲಿಕೆಯಾಗಿರುವ ದೂರಿನ ಮತ್ತಷ್ಟು ಸ್ಪೋಟಕ ಅಂಶಗಳು ಫ್ರೀಡಂ ಟಿವಿಗೆ ಲಭ್ಯವಾಗಿವೆ. ಇಡಿ ಪತ್ರದ ಸಂಪೂರ್ಣ ಸಾರಂಶ ಇಲ್ಲಿದೆ ನೋಡಿ.
ಗೌರವಾನ್ವಿತರೇ,
ಅಬಕಾರಿ ಸಚಿವರ ಕಛೇರಿಯಲ್ಲಿ ಭಾರಿ ಭ್ರಷ್ಟಾಚಾರ, ಮನಿ ಲಾಂಡ್ರಿಂಗ್ ನಡೆಯುತ್ತಿದ್ದು ಎಂಪಿ ಎಲೆಕ್ಷನ್ ಉದ್ದೇಶಕ್ಕಾಗಿ ಅಧಿಕಾರಿಗಳಿಂದ ನಡೆಯುತ್ತಿರುವ ಕಾನೂನು ಬಾಹಿರ ಹಣ ಸಂಗ್ರಹವನ್ನು ನಿಲ್ಲಿಸುವ ಬಗ್ಗೆ
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಮೂವರು ಡಿಸಿಗಳು, 9 ಸೂಪರಿಟೆಂಡೆಂಟ್, 13 ಡಿವೈಎಸ್ ಸಿ, 20 ಇನ್ಸೆಪೆಕ್ಟರ್ ಗಳ ಪಟ್ಟಿ ತಯಾರಿಸಿ ಅವರಿಂದ 16 ಕೋಟಿ ರೂ ಲಂಚದ ಹಣ ಸಂಗ್ರಹಿಸಲಾಗಿದೆ. ಬೆಂಗಳೂರು ಸುತ್ತಮುತ್ತ 2.5 ಯಿಂದ ಮೂರುವರೆ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇನ್ನೊಂದು ತಿಂಗಳಲ್ಲಿ ವರ್ಗಾವಣೆ ಅವಧಿ ಮುಗಿಯುವ ಇನ್ಸೆಪೆಕ್ಟರ್ ಗಳ ಜಾಗಕ್ಕೆ ಹೊಸಬರನ್ನು ಹಾಕಲು ಇನ್ಸೆಪೆಕ್ಟರ್ ಗಳಿಂದ 40 ರಿಂದ 50 ಲಕ್ಷ ವಸೂಲಿ ಮಾಡಲಾಗಿದೆ. ಡಿವೈಎಸ್ ಸಿಗಳಿಂದ 30 ರಿಂದ 40 ಲಕ್ಷ ವಸೂಲಿ ಮಾಡಲಾಗಿದೆ.
ಸೂಪರಿಟೆಂಡೆಂಟ್ ಗಳಿಂದ 25 ರಿಂದ 30 ಲಕ್ಷ ವಸೂಲಿ ಮಾಡಲಾಗಿದೆ. ಇನ್ನು ಬೆಂಗಳೂರಿನಲ್ಲಿ ಕೆಲಸ ಮಾಡುವ ಡಿಸಿಗಳಿಂದ 2.5 ರಿಂದ 3 ಕೋಟಿ ಸಂಗ್ರಹಿಸಲಾಗಿದೆ. ಹೀಗೆ ಒಟ್ಟು 18 ಕೋಟಿ ರೂಪಾಯಿ ಕ್ಯಾಶ್ ವಸೂಲಿ ಆಗಿದೆ. ಇದ್ರಲ್ಲಿ 13 ಕೋಟಿ ಹಣ ಸಚಿವ ಆರ್ ಬಿ ತಿಮ್ಮಾಪುರರಿಗೆ ತಲುಪಿದೆ. ಇನ್ನುಳಿದಂತೆ 50 ಲಕ್ಷದಿಂದ 1 ಕೋಟಿ ಹಣ ಸಚಿವರ ಪಿಎ, ಪಿಎಸ್ ಮತ್ತು ಸಿಬ್ಬಂದಿಗಳಿಗೆ ತಲುಪಿದೆ. 3 ಕೋಟಿ ಹಣವನ್ನು ಬಸವರಾಜ್ ಸಂದಿಗವಾಡ, ಕೋಲಾರದಲ್ಲಿ ಎಕ್ಸೈಸ್ ಸೂಪರಿಟೆಂಡೆಂಟ್ ಆಗಿರುವ ರಂಗಪ್ಪ, ಬೆಂಗಳೂರು ದಕ್ಷಿಣ ವಿಭಾಗ ಸೂಪರಿಟೆಂಡೆಂಟ್ ವಿವೇಕ್ ಪಡೆದಿದ್ದಾರೆ. ಈ ಮೂವರು ಸೇರಿ ಕೆಳಕಂಡ ಡಿಸಿಗಳಿಂದ ತಲಾ 2.5 ರಿಂದ 3 ಕೋಟಿ ಸಂಗ್ರಹಿಸಿದ್ದಾರೆ.
ಡಿಸಿಗಳ ಪಟ್ಟಿ
1. ಶಶಿಕಲಾ ಎಸ್ ಒಡೆಯರ್
2. ಭಾವಿ ಡಿಸಿ ರಂಗಪ್ಪ
3. ಬಸವರಾಜ್ ಸಂದಿಗವಾಡ
ಸೂಪರಿಟೆಂಡೆಂಟ್ ಗಳ ಪಟ್ಟಿ
1. ಬಾಹುಬಲಿ
6. ಶಿವಕುಮಾರ
2. ಬಸವರಾಜ್ ದವಳಿಕಟ್ಟೆ
7. ಸುರೇಶ್ ಪಿಎಸ್
3. ಉಮಾಶಂಕರ್
8. ವಿನೋದ್ ಡಾಂಘೆ
4. ಹರೀಶ್
9. ವಿವೇಕ್
5. ಪ್ರಕಾಶ್ ಪಾಟೀಲ್
ಡೆಪ್ಯೂಟಿ ಸೂಪರಿಟೆಂಡೆಂಟ್ ಗಳ ಪಟ್ಟಿ
1. ಬಸವರಾಜಪ್ಪ ಡಿಕೆ
8. ಗಂಗಾಧರ್ ಮುದೆಣ್ಣವರ್
2. ದೇವರಾಜ್ ಡಿ
9. ಶ್ರೀನಿವಾಸ್ ಕೆ
3. ಗಿರೀಶ್.ಎ.ವಿ
10. ಸುಮನಾ ಪಟೇಲ್
4. ಪರಮೇಶ್ವರಪ್ಪ
11. ಮೋಹನ್ ಕುಮಾರ್
5. ಪರಮೇಶ್
12. ಶಂಕರ್
7. ಶೇಖಪ್ಪ ಶಿಂಗಾರ್
13. ರಾಜಾ ಸಾಬ್
7. ನರಸಿಂಹ ಮೂರ್ತಿ
14. ನಾಗರಾಜ್ ಸಿ ಜೆ
6. ಉಮಾಶಂಕರ್
18. ಶೋಭಾ ಎಂ ಕೆ
9. ರೇಖಾ
19. ಶೋಭಾ
10. ಸೌಮ್ಯ
20 ವರದರಾಜ್
ಈ ಮೇಲಿನ ಎಲ್ಲಾ ಅಧಿಕಾರಿಗಳಿಂದ ಸುಮಾರು 18 ಕೋಟಿ ಹಣ ಸಂಗ್ರಹವಾದ ಬಳಿಕ ಒಂದೇ ದಿನದಲ್ಲಿ ಪಟ್ಟಿ ತಯಾರು ಮಾಡಲಾಗಿದೆ. ನಂತರ ಅನುಮೋದನೆಗಾಗಿ ಮುಖ್ಯಮಂತ್ರಿಗಳಿಗೆ ಪಟ್ಟಿ ರವಾನೆ ಮಾಡಲಾಗಿದೆ. ಎಲೆಕ್ಷನ್ ಕಮಿಷನ್ ಆದೇಶದಂತೆ ಕಳೆದ ಎಂಪಿ ಚುನಾವಣೆ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರೆ, ಇಲ್ಲವೇ ಮೂರು ವರ್ಷಗಳಿಂದ ಅದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಇಲ್ಲವೇ ಮೂರು ವರ್ಷಕ್ಕಿಂತಲೂ ಮೇಲ್ಪಟ್ಟು ಕೆಲಸ ಮಾಡುತ್ತಿದ್ದರೆ ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗ ಆದೇಶಿಸಿದೆ.
ಚುನಾವಣಾ ಆಯೋಗದ ನಿರ್ದೇಶನವನ್ನೇ ಮುಂದಿಟ್ಟುಕೊಂಡು ಬಸವರಾಜ ಸಂದಿಗವಾಡ ಅವರ ತಂಡ ಹಣ ಸಂಗ್ರಹಿಸಿದೆ. ಹಣ ಕೊಟ್ಟವರಿಗೆ ಮಾತ್ರ ಬೆಂಗಳೂರು ನಗರದಲ್ಲಿ ಪೋಸ್ಟಿಂಗ್ ನೀಡಲಾಗುತ್ತಿದೆ. ಬೆಂಗಳೂರಿನಿಂದ ಹೊರಗೆ ಕೆಲಸ ಮಾಡುತ್ತಿರುವವರು ಒಳ್ಳೆಯ ಹುದ್ದೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ಸರಿಯಾದ ಕ್ರಮ ಕೈಗೊಂಡು ಲಂಚ ವಹಿವಾಟು ಮತ್ತು ಮನಿ ಲಾಂಡ್ರಿಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಬಸವರಾಜ ಸಂದಿಗವಾಡ, ರಂಗಪ್ಪ ಮತ್ತು ವಿವೇಕ್ ಹಾಗೂ ಹಣ ಪಡೆದ ಇತರೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಸಚಿವ ಆರ್ ಬಿ ತಿಮ್ಮಾಪುರ ಆರ್ಥಿಕ ಇಲಾಖೆ ಎಸಿಎಸ್ ಅತಿಕ್ ಮತ್ತು ಪಿಸಿ ಜಾಫರ್ ಸಿಎಂ ಕಛೇರಿಯ ಕೆಲ ಅಧಿಕಾರಿಗಳು ವರ್ಗಾವಣೆ ಅವಧಿ ಮೀರಿದ್ದರು ಫೈಲ್ ಕ್ಲಿಯರ್ ಮಾಡಲು ಮುಂದಾಗಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು
ಇಂತಿ
ಅಜಿತ್