Monday, June 23, 2025
25.9 C
Bengaluru
Google search engine
LIVE
ಮನೆರಾಜ್ಯಮಂಗಳೂರ್ ಬ್ಲಾಸ್ಟ್ಗೂ ಬೆಂಗಳೂರ್ ಬ್ಲಾಸ್ಟ್ಗೂ ಇದೆ ಸಾಮ್ಯತೆ

ಮಂಗಳೂರ್ ಬ್ಲಾಸ್ಟ್ಗೂ ಬೆಂಗಳೂರ್ ಬ್ಲಾಸ್ಟ್ಗೂ ಇದೆ ಸಾಮ್ಯತೆ

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣ ಸಂಬಂಧ ನಾನಾ ಆಯಾಮಗಳಲ್ಲಿ ಪೊಲೀಸ್ ಟೀಮ್, ಎನ್ ಐ ಟೀಮ್, ತನಿಖೆ ನಡೆಸುತ್ತಿದೆ. ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಸ್ಫೋಟಗಳಿಗೂ ಈಗ ನಡೆದಿರುವ ಬೆಂಗಳೂರು ಬ್ಲಾಸ್ಟ್ ಗೂ ಸಾಮ್ಯತೆ ಇದೆಯಾ ಎನ್ನುವ ಆಂಗಲ್ ನಲ್ಲಿ ತನಿಖೆ ಮುಂದುವರೆಸಲಾಗಿದೆ.

ಪೊಲೀಸ್ರು ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಸಿದ್ದ ಸ್ಪೋಟಕ ಸಾಮಾಗ್ರಿಗಳು, ರಾಮೇಶ್ವರಂ ಕೆಫೆಯ ಬ್ಲಾಸ್ಟ್ ನಲ್ಲಿ ಬಳಕೆ ಮಾಡಿರುವ ಸಾಮಾಗ್ರಿಗಳ ಕುರಿತು ಸಾಮ್ಯತೆ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ದಟ್ಟ ಹೊಗೆ ಬಂದ ರೀತಿಯಲ್ಲಿಯೇ ಬೆಂಗಳೂರು ಬ್ಲಾಸ್ಟ್ ನಡೆದ ಬಳಿಕ ಹೊಗೆ ಬಂದಿದೆ.

ಹೀಗಾಗಿ ಪರಿಶೀಲನೆ ನಡೆಸುತ್ತಿರುವ ತನಿಖಾ ತಂಡ ಕುಕ್ಕರ್ ಬ್ಲಾಸ್ಟ್ ಮತ್ತು ಕೆಫೆ ಬ್ಲಾಸ್ಟ್ ಗೂ ಸಾಮ್ಯತೆ ಇದೆ ಎಂಬ ಆಂಗಲ್ ನಲ್ಲಿ ತನಿಖೆ ನಡೆಸುತ್ತಿದೆ. ಇನ್ನು ಮಂಗಳೂರಿನ ಬ್ಲಾಸ್ಟ್ ನಲ್ಲೂ ಕೂಡ ಎರಡು ಬ್ಯಾಟರಿ, ಡಿಟೋನೇಟರ್ ಗಳು, ನಟ್ಟು, ಬೋಲ್ಟ್ ಬಳಕೆ ಮಾಡಲಾಗಿತ್ತು.

ಬೆಂಗಳೂರು ಬ್ಲಾಸ್ಟ್ ನಡೆದ ಸ್ಥಳದಲ್ಲಿಯೂ ಬ್ಯಾಟರಿ , ನಟ್ಟು ಬೋಲ್ಟ್ ದೊರಕಿವೆ. ಹೀಗಾಗಿ ಸಾಮ್ಯಾತೆ ಇರುವ ಕಾರಣ ಮಂಗಳೂರು ಸ್ಪೋಟದ ರೂವಾರಿ ಶಾರಿಕ್ ಹಾಗೂ ಟೀಮನ್ನ ವಿಚಾರಣೆಗೆ ಒಳಪಡಿಸೋಕೆ ಮುಂದಾಗಿದ್ದಾರೆ. ಸಧ್ಯ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments