ಅಸೆಂಬ್ಲಿ ಎಲೆಕ್ಷನ್ ಸೋಲಿನ ಬಳಿಕ ಮಾಜಿ ಶಾಸಕ ಕುಮಾರ್ ಬಂಗಾರಪ್ಪ, ಬಿಜೆಪಿಯಲ್ಲಿ ಅಷ್ಟೇನೂ ಆಕ್ಟೀವ್ ಆಗಿಲ್ಲ. ಆಗಾಗ ಕಾಂಗ್ರೆಸ್ ಸೇರ್ತಾರಂತೆ ಅನ್ನೋ ಗುಸುಗುಸು ಬರ್ತಿದ್ರೂ, ಇನ್ನೂ ನಿಗೂಢವಾಗಿಯೇ ಇದೆ. ಸದ್ಯ ಬಿಜೆಪಿಯಿಂದ ಅಂತರ ಕಾಯ್ದುಕೊಂಡಂತಿರೋ ಕುಮಾರ್ ಬಂಗಾರಪ್ಪರನ್ನ ಕಾಂಗ್ರೆಸ್ ಗೆ ಸೇರಿಸಿಕೊಳ್ಳೋಕೆ ಡಿಕೆಶಿ ಸೇರಿದಂತೆ ಘಟಾನುಘಟಿ ನಾಯಕರು ಟ್ರೈ ಮಾಡ್ತಿರೋದು ಸುಳ್ಳಲ್ಲ.

ಲೋಕಸಭಾ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಈ ತಂತ್ರಗಾರಿಕೆ ಮಾಡ್ತಿದೆ. ಆದ್ರೆ, ಕುಮಾರ್ ಕಾಂಗ್ರೆಸ್ ಸೇರ್ಪಡೆಗೆ ಸಹೋದರ ಮಧು ಒಪ್ಪಿಗೆ ಕೊಟ್ಟಂತೆ ಕಾಣ್ತಿಲ್ಲ ಅಂತ ಶಿವಮೊಗ್ಗ ಸೇರಿ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ಆಗ್ತಿದ ಬರೋರೆಲ್ಲ ಬರಲಿ. ನಂದೇನು ತಾಪತ್ರಯವಿಲ್ಲ ಅಂತ ಹಿಂದೊಮ್ಮೆ ಮಧು ಬಂಗಾರಪ್ಪ ಹೇಳಿದ್ರು. ಆದ್ರೆ, ಕೇವಲ ರಾಜಕೀಯ ವಿಚಾರ ಆಗಿದ್ದಿದ್ರೆ ಇಷ್ಟೊತ್ತಿಗಾಗ್ಲೇ ಕುಮಾರ್ ಕೈ ಹಿಡೀತಿದ್ರು. ಕುಮಾರ್ ಹಾಗೂ ಬಂಗಾರಪ್ಪ ನಡುವೆ ರಾಜಕೀಯ ಮೀರಿ ವೈಯುಕ್ತಿಕ ಭಿನ್ನಾಭಿಪ್ರಾಯಗಳಿವೆ. ಹೀಗಾಗಿಯೇ, ಕುಮಾರ್ ಕಾಂಗ್ರೆಸ್ ಸೇರ್ಪಡೆ ತಡವಾಗ್ತಿದೆ. ಕುಮಾರ್ ಬಂಗಾರಪ್ಪ ತಮ್ಮ ಸೋಶಿಯಲ್ ಮೀಡಿಯದಲ್ಲಿ ಬಳಸುವ ಪೋಸ್ಟ್ ಗಳಲ್ಲಿ ಬಿಜೆಪಿ ಚಿಹ್ನೆ ನಾಪತ್ತೆಯಾಗಿದೆ. ಕಮಲ ಪಾಳಯದಿಂದ ಅಂತರ ಕಾಯ್ದುಕೊಂಡಿರೋ ಕುಮಾರ್, ತೆರೆಮರೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನ ಮಾಡ್ತಿದ್ದಾರೆ ಎನ್ನಲಾಗ್ತಿದೆ.

ಕಾಂಗ್ರೆಸ್ ಗೆ ಕುಮಾರ್ ಬಂಗಾರಪ್ಪ ಯಾಕೆ ಬೇಕು.?
ಹೇಳಿ ಕೇಳಿ ಶಿವಮೊಗ್ಗ ಯಡಿಯೂರಪ್ಪ ಅಂಡ್ ಫ್ಯಾಮಿಲಿಯ ಭದ್ರಕೋಟೆಯಾಗಿದೆ. ಅದನ್ನ ಭೇದಿಸಬೇಕು ಅಂದ್ರೆ ಬಂಗಾರಪ್ಪ ಅಂಡ್ ಫ್ಯಾಮಿಲಿ ಸದ್ಯ ಕಾಂಗ್ರೆಸ್ ಗೆ ಅನಿವಾರ್ಯ ಆಗ್ತಿದೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿ ಇಲ್ಲ. ಹೀಗಾಗಿ ಸೂಕ್ತ ನಾಯಕನ ಹುಡುಕಾಟದಲ್ಲಿದೆ. ಈಡಿಗ ಸಮುದಾಯದ ನಾಯಕ, ಶಿವಮೊಗ್ಗದಲ್ಲಿ ಪ್ರಭಾವ ಹೊಂದಿರುವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಗೆ ಬಂದ್ರೆ ಕಾಂಗ್ರೆಸ್ ಗೆ ಬಹುದೊಡ್ಡ ಲಾಭ ಆಗೋದ್ರಲ್ಲಿ ಡೌಟೇ ಇಲ್ಲ. ಇದ್ರಿಂದಾಗಿಯೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಮೂಲಕ ಕುಮಾರ್ ಬಂಗಾರಪ್ಪ ಮನವೊಲಿಕೆಗೆ ಯತ್ನಿಸಿದ್ರಂತೆ.
ಒಂದು ಹಂತಕ್ಕೆ ಕಾಂಗ್ರೆಸ್ ಗೆ ಬರೋಕೆ ಕುಮಾರ್ ಬಂಗಾರಪ್ಪ ಒಪ್ಪಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ, ಮಧು ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ವಂತೆ.. ಮಧು ಮನವೊಲಿಸಿ, ಕುಮಾರ್ ರನ್ನ ಕಾಂಗ್ರೆಸ್ ಗೆ ಕರೆತರುವಲ್ಲಿ ಸಕ್ಸಸ್ ಆಗ್ತಾರಾ ಬಂಗಾರಪ್ಪ ಶಿಷ್ಯ ಡಿಕೆಶಿ ಅನ್ನೋದನ್ನ ಕಾದು ನೋಡಬೇಕಿದೆ.