Monday, June 23, 2025
26.6 C
Bengaluru
Google search engine
LIVE
ಮನೆರಾಜ್ಯ`ಕಿಲ್ ಹಿಮ್...ಕಿಲ್ ಹಿಮ್...' ಪವಿತ್ರಾ ಗೌಡ ಉಚಿತ ಉಪದೇಶ !

`ಕಿಲ್ ಹಿಮ್…ಕಿಲ್ ಹಿಮ್…’ ಪವಿತ್ರಾ ಗೌಡ ಉಚಿತ ಉಪದೇಶ !

ಕೊನೆಗೂ ಘನಘೋರ ಸತ್ಯ ಹೊರ ಬಿದ್ದಿದೆ. ದರ್ಶನ್ ಹಾಗೂ ಪವಿತ್ರ ಇಬ್ಬರೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾವ ಪಾತ್ರ ವಹಿಸಿದ್ದರು ? ಹೇಗೆ ಕೊಂದರು ? ಅದರ ಇಂಚಿAಚು ಮಾಹಿತಿ ಚಾರ್ಜ್ಶೀಟ್‌ನಲ್ಲಿ ದಾಖಲಾಗಿದೆ. ಹಾಗಿದ್ದರೆ ಪೊಲೀಸರು ಸಲ್ಲಿಸಲಿರುವ ವರದಿಯಲ್ಲಿ ಏನೇನಿದೆ ಕರ್ಮಕಾಂಡ ? ದರ್ಶನ್ ಪವಿತ್ರ ಹಣೆಬರಹ ಏನಾಗಲಿದೆ ? ಆ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ…

`ಕಿಲ್ ಹಿಮ್…ಕಿಲ್ ಹಿಮ್…’ ಪವಿತ್ರಾ ಗೌಡ ಉಚಿತ ಉಪದೇಶ !
`ಇವನನ್ನು ಕೊಲ್ತೀನಿ ಚಿನ್ನು…’ ದರ್ಶನ್ ಸಕಲ ಸಂಜೆ ಸರ್ವನಾಶ !

`ನಮ್ಮ ದರ್ಶನ್ ಪಾಪದ ಕೂಸು…ಅದಕ್ಕೆ ಬಾಯಲ್ಲಿ ಬೆರಳಿಟ್ಟರೆ ಕಚ್ಚೋಕೇ ಬರಲ್ಲ…ಸೋ ಸ್ವೀಟ್ ಯು ನೌ…ಅಂಥ ಅಮಾಯಕನನ್ನು ಹಿಡಿದು ಜೈಲಿಗೆ ತಳ್ಳಿದ್ದೀರಾ ?’ ಹೀಗಂತ ಆ ವ್ಯಕ್ತಿಯ ಫ್ಯಾನ್ಸು…ಮತ್ತು ಬಣ್ಣದ ಲೋಕದ ಕೆಲವು ಬಕೀಟು ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು ನಾಲಿಗೆ ಅಲ್ಲಾಡಿಸಿದ್ದರು ಇಷ್ಟು ದಿನ. ಆದರೆ ಈಗ ಚಾರ್ಜ್ಶೀಟ್‌ನಲ್ಲಿ ಹೊರ ಬಿದ್ದಿರುವ ಘೋರ ಸತ್ಯ ಇದೆಯಲ್ಲ…ಅದನ್ನು ಕೇಳಿದ ಮೇಲೆ ಇವರೆಲ್ಲ ಕೆಂಗೇರಿ ನೀರಿನಲ್ಲಿ ಬಾಯಿ ತೊಳೆದುಕೊಳ್ಳಬೇಕು. ಮತ್ತು ಮೋರಿಯಲ್ಲಿ ಸ್ನಾನ ಮಾಡಬೇಕು. ಬಚ್ಚಲು ನೀರಿನಿಂದ ಅನ್ನ ಮಾಡಿ ಮುಕ್ಕಬೇಕು…

ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ಮುಕ್ತಾಯದ ಹಂತಕ್ಕೆ ಬಂದಿದೆ. ಅಂದರೆ ಚಾರ್ಜ್ಶೀಟ್ ಸಲ್ಲಿಸಲು ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ನೀವಿದನ್ನು ನೋಡುವ ಹೊತ್ತಿಗೆ ನ್ಯಾಯಾಲಯದ ಮುಂದೆ ವರದಿ ಹರಡಿಕೊಂಡಿರುವ ಸಾಧ್ಯತೆ ಇದೆ. ತೊಂಬತ್ತು ದಿನ ಇಡೀ ಖಾಕಿ ಪಡೆ ಹಗಲು ರಾತ್ರಿ ಬೆವರು ಸುರಿಸಿ ಮಾಹಿತಿ ಕೂಡಿ ಹಾಕಿದೆ. ಸಣ್ಣ ಸಣ್ಣ ಸಾಕ್ಷಿಗಳನ್ನು ಮಾತಾಡಿಸಿದ್ದಾರೆ. ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಿದ್ಧಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ದರ್ಶನ್ ಅಂಡ್ ಗ್ಯಾಂಗ್‌ಗೆ ಅಮರಿಕೊಂಡಿದ್ದಾರೆ. ದರ್ಶನ್ ಪಾರಾಗಲು ಸಾಧ್ಯವೇ ಇಲ್ಲ…

ಚಾರ್ಜ್ಶೀಟ್…ಇದಕ್ಕಾಗಿ ಖಾಕಿ ಪಡೆ ನಿದ್ದೆಯನ್ನು ಮರೆತು ಕೆಲಸ ಮಾಡಿದೆ. ಇಡೀ ದೇಶವೇ ಈ ಪ್ರಕರಣವನ್ನು ಕಣ್ಣು ಬಿಟ್ಟುಕೊಂಡು ನೋಡುತ್ತಿದೆ. ಕಾಸಿದ್ದೋನೇ ಬಾಸು…ಈ ಮಾತನ್ನು ಸುಳ್ಳು ಮಾಡಲು ಪಣ ತೊಟ್ಟಿದೆ ಖಾಕಿ. ಎಸಿಪಿ ಚಂದನ್ ನಿಷ್ಪಕ್ಷಪಾತವಾಗಿ ದುಡಿದಿದ್ದಾರೆ. ಅದರ ಫಲವೇ ಈ ಚಾರ್ಜ್ಶೀಟ್. ಇದುವರೆಗೆ ಆಡಿದ್ದು ಒಂದು ಆಟ….ಇನ್ನು ಮುಂದೆ ಇಡಲಿದೆ ಅಸಲಿ ಗೂಟ. `ಏಯ್ ಹೆಣ ಬಿಸಾಕ್ರೋ…ಯಾರ್ ಏನ್ ಮಾಡ್ತಾರೆ…ನೋಡೋಣ…’ ಜೂನ್ ಎಂಟರ ಸಂಜೆ ದರ್ಶನ್ ಹೀಗೆ ಗುಡುಗಿದ್ದರು. ಬಳ್ಳಾರಿ ಜೈಲಿನಲ್ಲಿ ಸೊಳ್ಳೆ ಜೊತೆ ಸಂಸಾರ ಮಾಡಲು ಮುನ್ನುಡಿ ಕೆತ್ತಿದರು…

ವಾ.ಓ: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಇದುವರೆಗೆ ಹೊರ ಬಿದ್ದ ಸತ್ಯಗಳು ಸತ್ಯವೇ. ಆದರೆ ಅಸಲಿಗೆ ಆ ದಿನ ಏನು ನಡೆಯಿತು ? ಕೊಲೆ ಮಾಡಲು ದರ್ಶನ್ ಗ್ಯಾಂಗ್‌ಗೆ ಆದೇಶ ನೀಡಿದ್ದು ಯಾರು ? ಹೇಗಿತ್ತು ಆ ರಕ್ತಪಾತದ ಕಥನ ? ಇದರಲ್ಲಿ ದರ್ಶನ್ ಪಾತ್ರ ಏನು ? ಆಗ ಪವಿತ್ರ ಗೌಡ ಏನೆಂದು ಹೇಳಿದರು ? ಅದಕ್ಕೆ ದಚ್ಚು ರೌಡಿ ಗ್ಯಾಂಗ್ ಹೇಗೆ ಪ್ರತಿಕ್ರಿಯೆ ನೀಡಿತ್ತು ? ಅದರ ಪ್ರತಿಯೊಂದು ಮಾಹಿತಿ ಚಾಜ್‌ಶೀಟ್‌ನಲ್ಲಿ ದಾಖಲಾಗಿದೆ. ರೇಣುಕಾ ಕೊಲೆಗೆ ಮೊದಲು ಆದೇಶ ನೀಡಿದ್ದೇ ಪವಿತ್ರ ಎನ್ನುವ ಕಠೋರ ವಾಸ್ತವ ಬಹಿರಂಗವಾಗಿದೆ…

ಪವಿತ್ರಾ ಗೌಡ…ಈಕೆ ದರ್ಶನ್ ಪ್ರೇಯಸಿ. ಮೊದಲ ಪತ್ನಿ ಇದ್ದರೂ ಇನ್ನೊಂದು ಹೆಣ್ಣಿನ ಸಂಗ ಮಾಡಿದ್ದಕ್ಕೆ ಈಕೆ ಪ್ರೇಯಸಿ ಎನ್ನುವ ಬಿರುದು ಪಡೆದಿದ್ದಾಳೆ. ಗೆಳತಿ ಅನ್ನೋರೂ ಇದ್ದಾರೆ. ಆದರೆ ಆಡು ಭಾಷೆಯಲ್ಲಿ ಇಂಥ ಕ್ಯಾರೆಕ್ಟರ್ ಹೆಣ್ಣನ್ನು ಜಗತ್ತು ಯಾವ ನಾಮಧೇಯದಿಂದ ಗುರುತಿಸುತ್ತದೆ ಅನ್ನೋದು ಸಕಲ ಜೀವಿಗಳಿಗೂ ಗೊತ್ತು. ಬಣ್ಣದ ಚಿಟ್ಟೆ ಎಂದಾದರೂ ಕರೆಯಿರಿ…ಅಥವಾ ಉತ್ತರ ಕರ್ನಾಟಕ ಭಾಷೆಯಲ್ಲಿ ಪಾತರಗಿತ್ತಿ ಎಂದರೂ ನೋ ಪ್ರಾಬ್ಲಂ…ಇದೇ ಪವಿತ್ರ ನೀಡಿದ ಎರಡು ಶಬ್ದಗಳ ಆದೇಶವೇ ಇಂದು ದರ್ಶನ್ ಗ್ಯಾಂಗ್ ಬಕ್ಕಬಾರಲು ಬೀಳಲು ಮೂಲ ಕಾರಣ. ದಟ್ ಈಸ್ ಟ್ರೂ…

ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ್ದು, ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಹೋಗಿದ್ದು, ನಂತರ `ನಿಂಗೊAದು ಸರ್‌ಪ್ರೆöÊಸ್ ಗಿಫ್ಟ್ ಇದೆ ಬಾ…’ ಹೀಗಂತ ಪವಿತ್ರಾಳನ್ನು ದರ್ಶನ್ ಕಾರಿನಲ್ಲಿ ಕೂಡಿಸಿಕೊಂಡು ಶೆಡ್‌ಗೆ ಎಂಟ್ರಿ ಕೊಟ್ಟಿದ್ದು…ನಂತರ ರೇಣುಕಾಸ್ವಾಮಿಗೆ ಹೊಡೆದಿದ್ದು…ಕೊಂದಿದ್ದು…ಮೋರಿಗೆ ಎಸೆದಿದ್ದು…ಇದೆಲ್ಲ ಎಲ್ಲರಿಗೂ ಗೊತ್ತಿದೆ. ಆದರೆ ರೇಣುಕಾಸ್ವಾಮಿಯನ್ನು ಬೆದರಿಸಲು ಕರೆದುಕೊಂಡು ಬಂದಿದ್ದ ಡಿ ಗ್ಯಾಂಗ್ ಏಕಾಏಕಿ ಆತನನ್ನು ಕೊಲೆ ಮಾಡಲು ಯಾರ ಚಿತಾವಣಿ ಕಾರಣ ? ಉತ್ತರ ಸಿಕ್ಕಿದೆ. ಅದೇ ಪವಿತ್ರಾ ಗೌಡ ಅಲಿಯಾಸ್ ದರ್ಶನ್ ಪಾಲಿನ ಹಳವಂಡ…

ರೇಣುಕಾಸ್ವಾಮಿ ಈಕೆಗೆ ಆಶ್ಲೀಲ ಸಂದೇಶ ಹಾಗೂ ಚಿತ್ರಗಳನ್ನು ಕಳಿಸಿದ್ದು ಸತ್ಯ. ಅದನ್ನು ಈಗಾಗಲೇ ಇನ್ಸಾಸ್ಟಾ ಸಾಬೀತು ಪಡಿಸಿದೆ. ಪೊಲೀಸ್ ಕೂಡ ಇದನ್ನು ಚಾರ್ಜ್ಶೀಟ್‌ನಲ್ಲಿ ದಾಖಲಿಸಿದೆ. ಅದುವರೆಗೆ ಒಂದೇ ಒಂದು ಬಾರಿ ರೇಣುಕಾ ಮುಖ ದರ್ಶನ ಮಾಡದ ಪವಿತ್ರಾ ಆತನನ್ನು ನೋಡುತ್ತಲೇ ಕೆಂಡಾಮAಡಲವಾಗಿದ್ದಾಳೆ. ಅದುವರೆಗೆ ಹಿಡಿದಿಟ್ಟುಕೊಂಡಿದ್ದ ಕೋಪ ನೆತ್ತಿಗೇರಿದೆ. ಆತನಿಂದ ಅನುಭವಿಸಿದ ಮಾನಸಿಕ ಯಾತನೆ ನೆನಪಾಗಿದೆ. ಚಪ್ಪಲಿ ಕೈಗೆ ಬಂದಿದೆ. ರೇಣುಕಾ ಮುಖ ಮೂತಿ ನೋಡದೆ ಹೊಡೆದಿದ್ದಾಳೆ. ಪಕ್ಕದಲ್ಲಿದ್ದ ದರ್ಶನ್ ಕೂಡ ಅದೇ ಚಪ್ಪಲಿಯಿಂದ ಬಾರಿಸಿದ್ದಾರೆ. ಅಷ್ಟಕ್ಕೇ ರಕ್ತಪಾತ ನಿಂತಿಲ್ಲ…ಅದೇ ಕುಣಿಕೆ ಬೀಗಿಯುತ್ತಿದೆ ಈಗ…

ಪವಿತ್ರಾ ಆತನಿಗೆ ಹೊಡೆವ ಮುಂಚೆಯೇ ಡಿ ಗ್ಯಾಂಗ್ ಹಣ್ಣು ಗಾಯಿ ನೀರುಗಾಯಿ ಮಾಡಿತ್ತು. ನಿಲ್ಲಲೂ ರೇಣುಕಾ ಒದ್ದಾಡುತ್ತಿದ್ದ. ಕೈ ಮುಗಿದು ಬಿಡ್ರಪ್ಪಾ ಎನ್ನುತ್ತಿದ್ದ. ಸಿಕ್ಕಸಿಕ್ಕಲ್ಲಿ ಸಿಕ್ಕಿದ್ದನ್ನು ತೊಗೊಂಡು ದೇಹವನ್ನು ಹಿಂಡಿ ಹಿಪ್ಪೆ ಮಾಡಿತ್ತು ಆ ಗ್ಯಾಂಗ್. ಪವಿತ್ರಾ ಚಪ್ಪಲಿಯಿಂದ ಹೊಡೆದು ಹೊರಟು ಹೋಗಿದ್ದರೆ ಹೆಣ ಬೀಳುತ್ತಿರಲಿಲ್ಲವೇನೊ…? ಆದರೆ ಆಕೆಯ ನಾಭಿಯಿಂದ ಎದ್ದು…ನಾಲಿಗೆ ಮೇಲೆ ಕುಣಿದ ಆ ಎರಡು ಶಬ್ದ…ಇಡೀ ಗ್ಯಾಂಗ್‌ಗೆ ಇಂದು ಸರ್ವನಾಶ ಮಾಡಿದೆ. ಆ ಶಬ್ದ ಏನು ಗೊತ್ತೆ ? `ಕಿಲ್ ಹಿಮ್ ಚಿನ್ನು…ಕಿಲ್ ಹಿಮ್…!’ ಪವಿತ್ರಾ ಪಾಲಿನ ಚಿನ್ನು ಬೇರಾರೂ ಅಲ್ಲ. ಅವರೇ ದರ್ಶನ್. ಚಿನ್ನು ಈಗ ಬಳ್ಳಾರಿಯ ಬನ್ನು ಮೇಯುತ್ತಿದೆ…

ವಾ.ಓ: ಪರಮ ಪವಿತ್ರ ಪ್ರೇಯಸಿಯೇ ಕಿಲ್ ಹಿಮ್ ಎಂದು ಹೇಳಿದ ಮೇಲೆ ಚಾಲೆಂಜಿAಗ್ ಸ್ಟಾರ್ ಅದನ್ನು ಚಾಲೆಂಜ್ ಆಗಿ ಸ್ವೀಕಾರ ಮಾಡದಿದ್ದರೆ ಚಾಮುಂಡವ್ವ ಮೆಚ್ಚುತ್ತಾಳಾ ? ಡಿ ಬಾಸ್ ಎಂದು ಕರೆಯುವ ಅಭಿಮಾನಿಗಳು `ಇದೇನಾ ನಿನ್ ಗಂಡಸ್ತನ’ ಎಂದು ಹೀಯಾಳಿಸುವುದಲ್ಲವಾ ? ಈ ಭೂಮಿಗೆ ಬಂದ ಮೇಲೆ ಏನಾದರೂ ಸಾಧನೆ ಮಾಡದಿದ್ದರೆ ನಾನ್ಯಾಕೆ ಹುಟ್ಟಬೇಕು ? ಇಂಥ ಪ್ರಶ್ನೆಗಳು ನಶೆ ಏರಿದ ದಾಸನದ ಮೆದುಳಲ್ಲಿ ಮೆರವಣಿಗೆ ಹೊರಟಿವೆ. ನಲವತ್ತು ಸಾವಿರ ರುಪಾಯಿಯ ದರ್ಶನ್ ಬೂಟು…ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಒದ್ದಿವೆ. ರೇಣುಕಾ ವಿಲವಿಲ…ಪವಿತ್ರಾ ಕಿಲಕಿಲ…ದರ್ಶನ್ ಕೊನೇ ತನಕ ಗಳಗಳ…

`ಕಿಲ್ ಹಿಮ್…ಕಿಲ್ ಹಿಮ್…’ ಪವಿತ್ರಾ ಹೇಳಿದ ಇದೊಂದು ಸಾಲು ಎಲ್ಲರನ್ನೂ ಎಲ್ಲವನ್ನೂ ಬರ್ಬಾದ್ ಮಾಡಿಬಿಟ್ಟಿತು. ಎರಡನೇ ಸಂಸಾರದ ಮಹಾರಾಣಿಯೇ ಹೀಗೆ ಹೇಳಿದ ಮೇಲೆ ದರ್ಶನ್ ಸುಮ್ಮನಿರಲು ಸಾಧ್ಯವೆ ? ಜೊತೆಗೆ ಡಿ ಬಾಸ್ ಎಂಜಲನ್ನು ತಿನ್ನುತ್ತಾ ದೇಹ ಬೆಳೆಸಿದ ಇತರ ದೇಹಗಳು ಕೈ ಕಟ್ಟಿ ನಿಲ್ಲಲು ಆಗುತ್ತಾ ? ಮುಂದೇನಾಗಲಿದೆ ಎನ್ನುವ ಜ್ಞಾನವೇ ಅಲ್ಲಿದ್ದವರಿಗೆ ಇರಲಿಲ್ಲ. ಹಾಗಿರಬಹುದಾಗಿದ್ದ ಪವಿತ್ರಾ ಮೈಮೇಲೆ ಮಾಲಾಶ್ರೀ ಬಂದAತೆ ಗುಡುಗುತ್ತಿದ್ದರು. ಫಲಿತಾಂಶ ಕಣ್ಣ ಮುಂದೆ ಹರಗ್ಯಾಡಲು ನಿಂತಿತು. ಡಿ ಗ್ಯಾಂಗ್ ಬುಡಕ್ಕೆ ಸುರಸುರಬತ್ತಿಯನ್ನು ಎಣಿಸಿ ಎಣಿಸಿ ಇಟ್ಟಿತು. ಖೇಲ್ ಖತಂ ನಾಟಕ್ ಬಂದ್…

ವಾ.ಒ: ಇದು ರೇಣುಕಾ ಸ್ವಾಮಿ ಹೆಣವಾಗಲು ಕಾರಣವಾದ ಕಥನ. ಇದರ ಜೊತೆಗೆ ಇನ್ನೊಂದು ದೃಶ್ಯವೂ ಹೊರಬಿದ್ದಿದೆ. ಅದೇ ರೇಣುಕಾ ಹೆಣವನ್ನು ಸಾಗಿಸಿದ್ದು, ಮೋರಿಯಲ್ಲಿ ಎಸೆದಿದ್ದು, ನಕಲಿ ಕೊಲೆ ಆರೋಪಿಗಳನ್ನು ಕರೆತಂದಿದ್ದು, ಅವರೇನು ಮಾಡುತ್ತಾರೆಂದು ಕಾದಿದ್ದು…ಎಲ್ಲವೂ ಇಂಚಿAಚಾಗಿ ಕಾಣಿಸಿವೆ. ಕೊಲೆ ಮಾಡಿದ್ದು ಡಿ ಗ್ಯಾಂಗ್. ಆದರೆ ನಂತರ ಈ ಆರೋಪವನ್ನು ಹೊತ್ತುಕೊಳ್ಳಲು ಪ್ರದೋಶ್ ಕರೆಸಿದ್ದು ಇನ್ನು ನಾಲ್ಕು ಮಂದಿಯನ್ನು. ಕೊಲೆ ಮಾಡಿದ್ದಕ್ಕೂ ಇವರಿಗೂ ಸಂಬAಧವೇ ಇಲ್ಲ. ಆದರೆ ಹಣದಾಸೆಗೆ ಬಿದ್ದು ಆರೋಪಿಗಳು ಕೊಲೆ ಆರೋಪ ಹೊರಲು ಸಜ್ಜಾದರು. ಅದೇನು ಹಾಗಿದ್ದರೆ ?

ಸಣ್ಣ ಪುಟ್ಟ ಕಳ್ಳತನ ಮಾಡುತ್ತಿದ್ದ ನಾಲ್ಕು ಮಂದಿಯನ್ನು ಪ್ರದೋಶ್ ಫೋನ್ ಮಾಡಿ ಕರೆಸಿದ್ದಾನೆ. ತಲಾ ಹತ್ತತ್ತು ಲಕ್ಷ ಕೊಡುವುದಾಗಿ ಹೇಳಿದ್ದಾನೆ. ಅಡ್ವಾನ್ಸ್ ಐದು ಲಕ್ಷ ಕೊಡುವುದಾಗಿ ನಂಬಿಸಿದ್ದಾನೆ. ಸ್ಕಾರ್ಪಿಯೋ ಜೀಪಿನಲ್ಲಿ ಅನುಕುಮಾರ್ ಹೆಣವನ್ನು ಸಾಗಿಸಿದ್ದಾನೆ. ಜೊತೆಗೆ ನಾಲ್ವರೂ ಇದ್ದರು. ಮೋರಿ ಬಳಿ ಹೆಣ ಎಸೆಯುವಾಗ ಅನುಕುಮಾರ್ ಭಯಬಿದ್ದಿದ್ದಾನೆ. ಆ ನಾಲ್ಕರನ್ನು ಅಲ್ಲೇ ಬಿಟ್ಟು ಸ್ಕಾರ್ಪಿಯೋ ಓಡಿಸಿದ್ದಾನೆ. ಆ ನಾಲ್ಕರು ಆಟೋ ಹತ್ತಿ ವಾಪಸ್ಸಾಗಿದ್ಧಾರೆ. ಅವರೆಲ್ಲ ಕಾಮಾಕ್ಷಿ ಪಾಳ್ಯ ಠಾಣೆಗೆ ಬಂದು ಕೊಲೆ ಒಪ್ಪಿಕೊಂಡಿದ್ದಾರೆ. ಇದನ್ನೆಲ್ಲ ಪ್ರದೋಶ್ ಗ್ಯಾಂಗ್ ಗಮನಿಸುತ್ತಾ ಕಾದಿದೆ.

ವಾ.ಓ: ಈ ನಾಲ್ಕು ಮಂದಿ ಠಾಣೆಗೆ ಹೋಗುತ್ತಾರೊ ಇಲ್ಲವೋ ? ಆರೋಪ ಒಪ್ಪಿಕೊಳ್ಳುತ್ತಾರಾ ಇಲ್ಲವೆ ಅಲ್ಲಿಂದ ಎಸ್ಕೇಪ್ ಆಗುತ್ತಾರಾ ? ಹೀಗೊಂದು ಅನುಮಾನ ಪ್ರದೋಶ್ ಅಂಡ್ ಗ್ಯಾಂಗ್‌ಗೆ ಕಾಡಿದೆ. ಅದಕ್ಕಾಗಿ ಕಾಮಾಕ್ಷಿ ಪೊಲೀಸ್ ಠಾಣೆ ಹೊರಗೆ ಆ ಹೊತ್ತಿನಲ್ಲಿ ಜೀಪಿನಲ್ಲಿ ಕುಂತು ಗಮನಿಸಿದ್ದಾರೆ. ಕೆಲವು ಗಂಟೆಯಾದರೂ ಯಾರೂ ಹೊರಗೆ ಬಂದಿಲ್ಲ. ಎಸ್ಕೇಪ್ ಕೂಡ ಆಗಿಲ್ಲ. ಅಲ್ಲಿಗೆ ನನ್ನ ಪ್ಲಾನ್ ಸಕ್ಸಸ್…ಹೀಗಂತ ಮತ್ತೊಮ್ಮೆ ಎಣ್ಣೆ ಹಾಕಲು ಸಜ್ಜಾಗಿದೆ ಡಿ ಗ್ಯಾಂಗ್. ಆದರೆ ಎಸಿಪಿ ಚಂದನ್ ಇಡೀ ರಾತ್ರಿ ಸಕಲ ಖಾಕಿ ಸೇವೆಯನ್ನು ಕೊಟ್ಟು…ಸತ್ಯ ಬಾಯಿ ಬಿಡಿಸಿದ್ದಾರೆ. ಮುಂದಾಗಿದ್ದು ಡಿ ಗ್ಯಾಂಗ್ ಬದುಕು ಸಾರ್ವಜನಿಕ ಶೌಚಾಲಯ…

ದರ್ಶನ್ ಫ್ಯಾನ್ಸ್ ಮತ್ತು ಕೆಲವು ಸಿನಿಮಾ ಮಂದಿ…ನಾಲಿಗೆಯನ್ನು ಅಲ್ಲಾಡಿಸುತ್ತಿದ್ದರು…ಈಗಲೂ ಅಲ್ಲಾಡಿಸುತ್ತಿದ್ದಾರೆ. `ದರ್ಶನ್ ಪುಣ್ಯಾತ್ಮ…ಭೂಮಿಗೆ ಬಂದ ಭಗವಂತ…ಮಗು ಬಿಟ್ಟಂತೆ ಹೂಸು ಬಿಡುವ ಬಾಸು…ನಿಲ್ಲಲ್ಲ ಈ ಕೇಸು…’ ಇಂಥ ಘೋಷ ವಾಕ್ಯಗಳನ್ನು ಆಡುತ್ತಿವೆ. ಇವರ ಮಾತನ್ನು ಕೇಳಿ…ಇಡೀ ಜಗತ್ತೆ ಕಣ್ಣೀರು ಹಾಕಿ, ನ್ಯಾಯಾಲಯ ಕೂಡ `ಅಯ್ಯೋ…ಯಜಮಾನ…ನೀನು ಮಾಡದ ತಪ್ಪಿಗೆ ನಾನ್ಯಾಕೆ ಶಿಕ್ಷೆ ಕೊಡಲಿ…’ ಎನ್ನಲಿದೆ…ಈ ರೀತಿ ದಚ್ಚು ಪಟಾಲಾಂ ಫಡಫಡಿಸಿತ್ತು. ಸೀನ್ ಫುಲ್ ಚೇಂಜ್ ಆಗಿದೆ. ಕಾರಣ ಕ್ಲೆö್ಯಮ್ಯಾಟ್ ಕೂಡ ಚೇಂಜ್ ಆಗಿದೆಯಲ್ಲವೆ ? ಇದು ಪವಿತ್ರಾ ನೀತಿ…ದರ್ಶನ್ ಗ್ಯಾಂಗ್‌ಗೆ ಸಿಕ್ಕ ಐತಿಹಾಸಿಕ ಆಸ್ತಿ…ಅಲಿಯಾಸ್ ಸಾಂಕೇತಿಕ ತಿಥಿ…
-ಮಹೇಶ್ ದೇವಶೆಟ್ಟಿ, ಫಿಲ್ಮ್ಬ್ಯೂರೊ, ಫ್ರೀಡಂಟಿವಿ

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments