ಭಾರತ ಪಾಕಿಸ್ತಾನ ನಡುವೆ ಯುದ್ಧ ನಡೀತಿದ್ರೆ, ಕಾಂಗ್ರೆಸ್ ಮತ್ತೊಂದು ಕಡೆ ವಿವಾದ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಯಡವಟ್ಟು ಮಾಡಿಕೊಂಡಿದೆ.
ಭಾರತ-ಪಾಕ್ ಉದ್ವಿಗ್ನ ಸಂದರ್ಭದಲ್ಲಿ ಕಾಂಗ್ರೆಸ್ ಶಾಂತಿ ಮಂತ್ರ ಜಪಿಸಿ ಟ್ವೀಟ್ ಮಾಡಿತ್ತು. ಗಾಂಧೀಜಿಯವರ ಫೋಟೋ ಹಾಕಿ ಶಾಂತಿಯಿಂದ ಇರಬೇಕು ಅಂತ ಹೇಳಿತ್ತು. ವಿವಾದ ಉದ್ಭವಿಸುತ್ತಲೇ ಕಾಂಗ್ರೆಸ್ ಆ ಟ್ವೀಟ್ ಡಿಲೀಟ್ ಮಾಡಿತ್ತು. ಈಗ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ ಕಾಶ್ಮೀರದ ಮ್ಯಾಪ್ ಅನ್ನೇ ಪಾಕಿಸ್ತಾನಕ್ಕೆ ಸೇರಿಸಿಬಿಟ್ಟಿದೆ. ಕಾಂಗ್ರೆಸ್ ಇಡೀ ಕಾಶ್ಮೀರವನ್ನೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದೆ.
ಪಾಕಿಸ್ತಾನಕ್ಕೆ ಐಎಂಎಫ್ (IMF) ಲೋನ್ ನೀಡಿದ್ದನ್ನ ಟೀಕಿಸಿ ಪೋಸ್ಟ್ ಮಾಡಿತ್ತು. ಅದರಲ್ಲಿ ಸ್ವಯಂಘೋಷಿತ ವಿಶ್ವಗುರುವನ್ನು ಐಎಂಎಫ್ ಕ್ಯಾರೇ ಎಂದಿಲ್ಲ ಎಂದು ಟೀಕಿಸಿತ್ತು. ಆದರೆ ಅದರಲ್ಲಿ ಪಾಕಿಸ್ತಾನ ಮ್ಯಾಪ್ಗೆ ಜಮ್ಮು ಕಾಶ್ಮೀರವನ್ನೂ ಸೇರಿಸಿಬಿಟ್ಟಿದೆ.
ಯಡವಟ್ಟು ಗೊತ್ತಾಗುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಅಷ್ಟರಲ್ಲಿ ಕರ್ನಾಟಕ ಕಾಂಗ್ರೆಸ್ನ ಎಡವಟ್ಟು ಡಿಸಿಎಂ ಡಿಕೆ ಶಿವಕುಮಾರ್ಗೆ ತಿಳಿದಿದ್ದು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಿಬ್ಬಂದಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ. ಎಐಸಿಸಿಗೂ ರಾಜ್ಯ ಕಾಂಗ್ರೆಸ್ ಎಡವಟ್ಟು ತಲುಪಿದೆ.