Monday, June 23, 2025
25.9 C
Bengaluru
Google search engine
LIVE
ಮನೆರಾಜ್ಯನಾಳೆ ಕರ್ನಾಟಕ ಬಂದ್​..! ಏನಿರುತ್ತೆ, ಏನಿರಲ್ಲ.. ಮಾಹಿತಿ ಇಲ್ಲಿದೆ

ನಾಳೆ ಕರ್ನಾಟಕ ಬಂದ್​..! ಏನಿರುತ್ತೆ, ಏನಿರಲ್ಲ.. ಮಾಹಿತಿ ಇಲ್ಲಿದೆ

ಬೆಂಗಳೂರು: ಬೆಳಗಾವಿಯಲ್ಲಿ ಬಸ್​ ಕಂಡಕ್ಟರ್ ಮೇಲೆ ಎಂಇಎಸ್​ ಪುಂಡರ ಹಲ್ಲೆ ಖಂಡಿಸಿ ನಾಳೆ(ಮಾರ್ಚ್ 22) ಅಖಂಡ ಕರ್ನಾಟಕ ಬಂದ್​ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಇನ್ನು ಕರ್ನಾಟಕ ಬಂದ್​ಗೆ ಬಹುತೇಕ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿದ್ದು ಬಂದ್ ಯಶಸ್ವಿಯಾಗುವ ಲಕ್ಷಣಗಳು ಗೋಚರವಾಗಿವೆ. ಹಾಗಿದ್ರೆ, ಬಂದ್​ಗೆ ಯಾವೆಲ್ಲಾ ಸಂಘಟನೆಗಳ ಬೆಂಬಲವಿದೆ, ನಾಳೆ ಏನಿರುತ್ತೆ, ಏನಿರಲ್ಲಾ ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಂದ್​​ಗೆ ಸಂಪೂರ್ಣ ಬೆಂಬಲ ನೀಡುವವರು:

  • ಓಲಾ- ಉಬರ್ ಚಾಲಕರ ಸಂಘ
  • ಶಿವರಾಮೇಗೌಡ ಬಣ
  • ಕರವೇ ಗಜಕೇಸರಿ ಸೇನೆ
  • ಡಾ.ರಾಜ್ ಕುಮಾರ್ ಅಭಿಮಾನಿ ಸಂಘ
  • ವೀರ ಕನ್ನಡಿಗರ ಸೇನೆ
  • ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು
  • ರೂಪೇಶ್ ರಾಜಣ್ಣ ಬಣ
  • ಬೆಂಗಳೂರು ಆಟೋ ಸೇನೆ
  • ಜಯಭಾರತ್ ಚಾಲಕರ ಸಂಘ
  • ಕರ್ನಾಟಕ ಜನಪರ ವೇದಿಕೆ
  • ಆದರ್ಶ ಆಟೋ ಯೂನಿಯನ್
  • ಗೂಡ್ಸ್ ಚಾಲಕರ ಸಂಘ

ನೈತಿಕ ಬೆಂಬಲ ನೀಡಿದವರು:

  • ಮದ್ಯ ಮಾರಾಟಗಾರರ ಸಂಘ
  • ಕೆಲ ಮಾಲ್ ಅಸೋಸಿಯೇಷನ್
  • ಹೋಲ್ ಸೆಲ್ ಬಟ್ಟೆ ವ್ಯಾಪಾರಸ್ಥರು
  • ಹೋಟೆಲ್ ಅಸೋಸಿಯೇಷನ್
  • ಬೆಂಗಳೂರು ಸಂಚಾರಿ ಆಟೋ ಸೇನೆ
  • APMC ಮಾರುಕಟ್ಟೆಗಳ ಒಕ್ಕೂಟ
  • ಸರ್ವ ಸಂಘಟನೆಗಳ ಒಕ್ಕೂಟ
  • ಖಾಸಗಿ ಸಾರಿಗೆ ಒಕ್ಕೂಟ
  • ಕರ್ನಾಟಕ ರಕ್ಷಣಾ ವೇದಿಕೆ ಅಭಿಮಾನಿ ಸಂಘ
  • ಕರ್ನಾಟಕ ರಕ್ಷಣಾ ವೇದಿಕೆ ಧ್ವನಿ
  • ಪೀಣ್ಯ ಕಾರ್ಮಿಕರ ಸಂಘ
  • ಬೀದಿ ಬದಿ ವ್ಯಾಪಾರಿಗಳ ಸಂಘಟನೆ
  • ಕರ್ನಾಟಕ ರಾಜ್ಯ ರೈತ ಸಂಘಟನೆ
  • ಖಾಸಗಿ ಶಾಲೆಗಳ ಒಕ್ಕೂಟ ಕ್ಯಾಮ್ಸ್
  • ಖಾಸಗಿ ಶಾಲೆಗಳ ಒಕ್ಕೂಟ ಕೃಪಾ
  • ಖಾಸಗಿ ಶಾಲೆಗಳ ಒಕ್ಕೂಟ ರುಪ್ಸ
  • ಪೋಷಕರ ಸಮನ್ವಯ ಸಮಿತಿ
  • ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ
  • ಪೀಸ್ ಆಟೋ ಸಂಘಟನೆ
  • ಕರುನಾಡು ಕಾರ್ಮಿಕ ಸೇನೆ
  • BMTC-KSRTC ನೌಕರರ ಸಂಘ
  • ನಮ್ಮ ಚಾಲಕರ ಪರಿಷತ್
  • ಏರ್ಪೋರ್ಟ್ ಟ್ಯಾಕ್ಸಿ
  • ಗಾರ್ಮೆಂಟ್ಸ್ ಅಸೋಸಿಯೇಷನ್ ನ
  • ಲಾರಿ ಚಾಲಕರ ಸಂಘ

ಬಂದ್​ ವೇಳೆ ಏನಿರುತ್ತೆ?

  • ಹಾಲು, ದಿನಪತ್ರಿಕೆ,ಮೆಡಿಕಲ್
  • ವೈದ್ಯಕೀಯ ಸೇವೆ ಎಂದಿನಂತೆ ಇರಲಿದೆ
  • ಮೆಟ್ರೋ ಸಂಚಾರ, BMTC,KSRTC,ರೈಲು
  • ಶಾಲಾ ವಾಹನದ ವ್ಯವಸ್ಥೆ,ಖಾಸಗಿ ಬಸ್
  • ಆ್ಯಂಬುಲೆನ್ಸ್ ,ಹೋಲ್ ಸೆಲ್ ಬಟ್ಟೆ ಅಂಗಡಿ
  • ತರಕಾರಿ,ಹೂ, ಹಣ್ಣುಗಳು, ಸೂಪರ್ ಮಾರ್ಕೆಟ್
  • ಹೋಟೆಲ್ ಗಳ ಎಂದಿನಂತೆ ಓಪನ್ ಇರಲಿದೆ
  • ಬಾರ್ ಗಳು ಓಪನ್,ಏರ್ ಪೋರ್ಟ್ ಟ್ಯಾಕ್ಸಿ ಸೇವೆ
  • 65% ಆಟೋಗಳ ಸೇವೆ ಬಂದ್ ದಿನ ಇರಲಿದೆ

ಏನಿರಲ್ಲ?

  • ಮಧ್ಯಾಹ್ನತನಕ ಥಿಯೇಟರ್ ಗಳು ಬಂದ್
  • ಓಲಾ-ಊಬರ್ ಸೇವೆಯಲ್ಲಿ ವ್ಯತ್ಯಯ
  • 35% ಆಟೋ ಸೇವೆಯಲ್ಲಿ ತುಸು ವ್ಯತ್ಯಯ
  • ಗೂಡ್ಸ್ ವಾಹನಗಳ ಸೇವೆಯಲ್ಲಿ ವ್ಯತ್ಯಯ

ಇನ್ನು ಶಾಲಾ ಕಾಲೇಜು ನಡೆಸುವ ಹಾಗೂ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿ ಸರ್ಕಾರದಿಂದ ಇನ್ನಷ್ಟೇ ಅಧಿಕೃತ ನಿರ್ಧಾರ ಪ್ರಕಟಗೊಳ್ಳಬೇಕಿದೆ. ಶಿಕ್ಷಣ ಸಚಿವರು ತಿಳಿಸಿರುವಂತೆ, ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶೆಡ್ಯೂಲ್‌ ಇಲ್ಲವಾದ್ದರಿಂದ ಆ ಕುರಿತು ಆತಂಕ ಬೇಕಿಲ್ಲ. ಬಂದ್‌ಗೆ ಸರ್ಕಾರದ ಬೆಂಬಲವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಖಚಿತಪಡಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments