ಕಾಂಗ್ರೆಸ್ ಸರ್ಕಾರದ ಜಾತಿ ಜನ ಗಣತಿಗೆ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ನಾಯಕರಿಂದ ಭಾರೀ ವಿರೋಧ. ಜಾತಿ ಗಣತಿ ವಿರೋಧಿಸಿ ಕರ್ನಾಟಕ ಬಂದ್ಗೆ ಮುಂದಾಗಿರೋ ಪ್ರಬಲ ಸಮುದಾಯಗಳು.ಕರ್ನಾಟಕ ಬಂದ್ಗೆ ಕರೆ ಕೊಡುವುದಾಗಿ ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ವೀರಶೈವ ಹಾಗೂ ಒಕ್ಕಲಿಗರ ಸಂಘದಿಂದ ಸಭೆ ಮಾಡಿ ದಿನಾಂಕ ಘೋಷಣೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.
ಜಾತಿ ಜನಣತಿಯಲ್ಲಿ ಒಕ್ಕಲಿಗರನ್ನು 6ನೇ ಸ್ಥಾನಕ್ಕೆ ಸೇರಿಸಲಾಗಿದೆ.10 ವರ್ಷಗಳ ವರದಿಯನ್ನು ನಾವು ಒಪ್ಪಿಕೋಳ್ಳಬೇಕಾ..ಎಂದು ಕೆಂಚಪ್ಪಗೌಡ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿರು.ಈ ವರದಿಯಿಂದ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಆಗುತ್ತದೆ.ಇದು ಅವೈಜ್ಞಾನಿಕ ವರದಿ..ಇದಕ್ಕೆ ನಮ್ಮ ವಿರೋಧವಿದೆ ಎಂದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ ಹೇಳಿಕೆ…