Thursday, May 1, 2025
34.1 C
Bengaluru
LIVE
ಮನೆ#Exclusive NewsTop Newsಆಸ್ಪತ್ರೆಯಿಂದ ಹೆಚ್​ಡಿಕೆ ಡಿಸ್ಚಾರ್ಜ್ .. ರಂಗೇರಲಿದೆ ಲೋಕಕಣ..!

ಆಸ್ಪತ್ರೆಯಿಂದ ಹೆಚ್​ಡಿಕೆ ಡಿಸ್ಚಾರ್ಜ್ .. ರಂಗೇರಲಿದೆ ಲೋಕಕಣ..!

ನಾಲ್ಕು ದಿನಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಈಗ ಫಿಟ್ ಅಂಡ್ ಫೈನ್ ಆಗಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಇದೀಗ ಡಿಸ್ಚಾರ್ಜ್ ಆಗಿದ್ದಾರೆ.

ಚೆನ್ನೈನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಧಾವಿಸಲಿದ್ದಾರೆ. ಒಂದೆರಡು ದಿನ ಮನೆಯಲ್ಲಿ ವಿಶ್ರಾಂತಿ ಪಡೆದು ಲೋಕಸಮರಕ್ಕೆ ಧುಮುಕಲಿದ್ದಾರೆ. ಬಿಜೆಪಿ-ಜೆಡಿಎಸ್ ಪರವಾಗಿ ಭರ್ಜರಿ ಪ್ರಚಾರ ನಡೆಸಲು ಈಗಾಗಲೇ ಎಲ್ಲಾ ಸಿದ್ದತೆಗಳು ಮುಗಿದಿದ್ದು, ಕುಮಾರಸ್ವಾಮಿ ಪ್ರಚಾರ ಕಣಕ್ಕೆ ಧುಮುಕೋದು ಮಾತ್ರ ಬಾಕಿ ಉಳಿದಿದೆ.

ಮಂಡ್ಯ ಅಭ್ಯರ್ಥಿಯಾಗ್ತಾರಾ ಕುಮಾರಸ್ವಾಮಿ?

ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಕುಮಾರಸ್ವಾಮಿಯೇ ಕಣಕ್ಕೆ ಇಳಿಯಲಿದ್ದಾರೆ ಎಂದು ಈಗಾಗಲೇ ಮಾಜಿ ಮಂತ್ರಿ ಪುಟ್ಟರಾಜು ಘೋಷಿಸಿದ್ದರು. ಆದರೆ, ಇದಿನ್ನು ಅಧಿಕೃತವಾಗಿಲ್ಲ. ಒಂದು ಮೂಲದ ಪ್ರಕಾರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಮೂರು ದಿನದ ಹಿಂದಷ್ಟೇ ಚನ್ನಪಟ್ಟಣದ ಜೆಡಿಎಸ್ ಕಾರ್ಯಕರ್ತರು ನಿಖಿಲ್​ ಕುಮಾರಸ್ವಾಮಿಗೆ ಮುತ್ತಿಗೆ ಹಾಕಿದ್ದರು. ಕುಮಾರಸ್ವಾಮಿ ಮಂಡ್ಯಗೆ ಹೋಗಬಾರದು.. ಅವರಿಲ್ಲೇ ಉಳಿಯಬೇಕು ಎಂದು ಆಗ್ರಹಿಸಿದ್ದರು. ಬೇಕಿದ್ರೆ ನೀವೇ ಮಂಡ್ಯದಲ್ಲಿ ಸ್ಪರ್ಧೆ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿದ್ದರು.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments