
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮತ್ತೆ ಗರಿಗೆದರಿದ ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ನೇಮಕ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಖಂಡಿತಾ ಫೈನಲ್ ಮಾಡಿಕೊಂಡೆ ಬರ್ತೇವೆ. ಪಟ್ಟಿಯನ್ನ ಹೈಕಮಾಂಡ್ಗೆ ಕಳುಹಿಸಿಕೊಟ್ಟಿದ್ವಿ ಆದರೆ ಪಂಚರಾಜ್ಯಗಳ ಚುನಾವಣೆಯಿಂದ ತಡವಾಗಿತ್ತು ಎಂದರು.

ಇವತ್ತು ದೆಹಲಿಗೆ ಹೋಗಿ ಕೂತು ಚರ್ಚೆ ಮಾಡಿ ಫೈನಲ್ ಮಾಡ್ತೀವಿ ಎಂದರು. ಸಿಡಬ್ಲ್ಯೂಸಿ ಮೀಟಿಂಗ್ ಎರಡು ಕಡೆ ಇದೆ ಡೆಲ್ಲಿಲೂ ಇದೆ, ನಾಗಪೂರ್ನಲ್ಲೂ ಇದೆ ಎಂದು ಸದಾಶಿವನಗರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.




