ಎಸ್ ಸಿ ಎಂಬ ಕಾರಣಕ್ಕೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷನಿಗೆ ಅಧಿಕಾರ ಚಲಾಯಿಸಲು ಬಿಡದೆ ಮೇಲ್ಜಾತಿಯ ಕೆಲ ಜನರು ಅಡ್ಡಿಪಡಿಸಿರುವ ಘಟನೆ ಕೊರಟಗೆರೆ ತಾಲೂಕಿನ ಶಕುನಿ ತಿಮ್ಮನಹಳ್ಳಿಯಲ್ಲಿ ನಡೆದಿದೆ. ಖುದ್ದು ತುಮಕೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಕ್ರಮ ಜರುಗಿಲ್ಲ. ಜೊತೆಗೆ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಗ್ರಾಮದ ಕೆಲ ಪುಂಡಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ವಿಜಯ್ ಶಂಕರ್ ಎಂಬುವವರು ಆರೋಪಿಸಿ ಸರ್ಕಾರಕ್ಕೆ ದೂರು ನೀಡಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಶಕುನಿತಿಮ್ಮನಹಳ್ಳಿ ಗ್ರಾಮದ ನಿವಾಸಿ ವಿಜಯ್ ಶಂಕರ್ ಕಳೆದ ಫೆಬ್ರವರಿ ತಿಂಗಳ 10 ನೇ ತಾರೀಕು ಶಕುನಿತಿಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಈ ಚುನಾವಣೆ ಯಲ್ಲಿ ಪರಿಶಿಷ್ಟ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ ವಿಜಯ್ ಶಂಕರ್ ಸದಸ್ಯನಾಗಿ ಆಯ್ಕೆಯಾಗಿದ್ರು. ನಂತರ ಅದೆ ಫೆಬ್ರವರಿ ತಿಂಗಳ 20 ರಂದು ಅಧ್ಯಕ್ಷರ ಚುನಾವಣೆ ಯಲ್ಲೂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಒಟ್ಟು 13 ಮಂದಿ ಸದಸ್ಯರ ಪೈಕಿ ಒಬ್ಬರು ಪರಿಶಿಷ್ಟ ಪಂಗಡ ಮತ್ತಿಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು. ಉಳಿದವರೆಲ್ಲರೂ ಮೇಲ್ವರ್ಗಕ್ಕೆ ಸೇರಿದವರಾಗಿದ್ದಾರೆ.
ಅಧ್ಯಕ್ಷ ಸ್ಥಾನ ಅಲಂಕರಿಸಿದ ವಿಜಯ್ ಶಂಕರ್ ನಡೆಸಿದ ಮೊದಲ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದು ಜಸ್ಟ್ ಆರು ಮಂದಿ ಸದಸ್ಯರು ಮಾತ್ರ. ಕೊರಂ ಇಲ್ಲದ ಕಾರಣ ಆ ಸಭೆಯನ್ನ ಮುಂದೂಡಲಾಯ್ತು. ಬಳಿಕ ಎರಡನೇ ಸಭೆ ಕರೆದ್ರೆ, ಅಲ್ಲೂ ಜನರಿಲ್ಲ. ಇದೆಲ್ಲವನ್ನ ನೋಡಿದ್ರೆ, ಅಧ್ಯಕ್ಷ ಸ್ಥಾನದಿಂದ ವಜಾ ಮಾಡೋ ಹುನ್ನಾರ ನಡೆದಿದೆ ಎಂದು ವಿಜಯ್ ಶಂಕರ್ ತುಮಕೂರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪರಿಶಿಷ್ಟ ಜಾತಿಯವನು ಅನ್ನೋ ಕಾರಣಕ್ಕೆ ನನ್ನ ವಿರುದ್ಧ ಮಸಲತ್ತು ಮಾಡ್ತಾ ಇದ್ದಾರೆ ಅಂತ ವಿಜಯ್ ಆರೋಪಿಸ್ತಾ ಇದ್ದಾರೆ. ಇನ್ನು ಇದೇನು ಕಥೆ ಅಂತ ಡಿಸಿ ಮೇಡಂ ಕೇಳೋಣ ಅಂದ್ರೆ, ಶುಭ ಕಲ್ಯಾಣ್ ಮೇಡಂ ಯಾರ ಫೋನನ್ನೂ ಸ್ವೀಕರಿಸುತ್ತಿಲ್ಲ. ಅವರು ಯಾವಾಗಲೂ ಫುಲ್ ಬ್ಯುಸಿ. ಪಿತೂರಿಗಳು ನಡೆಯುತ್ತಿವೆ ಎಂದು ದೂರಿದ್ದಾರೆ. ವಿಜಯ್ ಶಂಕರ್ ಅವರ ದೂರು ಸಮಾಜಕಲ್ಯಾಣ ಇಲಾಖೆ ಪ್ರಧಾನಕಾರ್ಯದರ್ಶಿಗಳಿಗೂ ತಲುಪಿದೆ.
ಊರಿನ ಹಾಲು ಉತ್ಪಾದಕರ ಸಹಕಾರ ಸಂಘವು 2013 ರಲ್ಲಿ ಪ್ರಾರಂಭವಾಯಿತು. ಇದುವರೆಗೂ ಈ ಡೈರಿ ಅದ್ಯಕ್ಷರ ಆಯ್ಕೆ ಮಾಡಿರುವುದು ಅನಕ್ಷರಸ್ಥರನ್ನು.. ಅವರಿಗೆ ತಿಳಿಯದ ಹಾಗೆ ಸುಮಾರು 10-15 ಲಕ್ಷ ಹಣ ಗೋಲ್ ಮಾಲ್ ನಡೆದಿರುವುದು ಸಾಬೀತಾಗಿದೆ. ಇದನ್ನು ನಾನು ಪ್ರಶ್ನೆ ಮಾಡಿದಕ್ಕೆ ಈ ತರಹ ರಾಜಕೀಯ ಮಾಡುತ್ತಿದ್ದಾರೆ .ಈ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಗನಾಥ್ ಗೆ ಕೊರಟಗೆರೆ ಸಿ ಡಿ ಓ ವೆಂಕಟೇಶ್ ಸಹ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಅಂತ ವಿಜಯ್ ಶಂಕರ್ ಆರೋಪಿಸುತ್ತಿದ್ದಾರೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನ್ಯಾಯ ಕೊಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಯದ್ದು..ಹಾಗೆಯೇ ಸಮಾಜಕಲ್ಯಾಣ ಇಲಾಖೆ ಕಮೀಷನರ್ ರಾಕೇಶ್ ಕುಮಾರ್ ಕೂಡ ಇತ್ತ ಗಮನಹರಿಸಬೇಕಿದೆ.
.