ರಾಜ್ಯಸುದ್ದಿ

ಶೆಟ್ಟರ್ ಬಿಜೆಪಿಗೆ : ತೆರವಾದ ಪರಿಷತ್ ಸ್ಥಾನಕ್ಕೆ ಸುಪ್ರೀಂಕೋರ್ಟ್​​ ಖ್ಯಾತ ವಕೀಲ ಸಂಕೇತ್​ ಏಣಗಿ..?

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಮರಳಿದ್ದಾರೆ. ಹೀಗಾಗಿ ಪರಿಷತ್ ಸ್ಥಾನಕ್ಕೆ ಶೆಟ್ಟರ್, ರಾಜೀನಾಮೆ ನೀಡಿದ್ದು, ವಿಧಾನ ಪರಿಷತ್ ಸದಸ್ಯತ್ವ ಖಾಲಿಯಾಗಿದೆ. ಈ ಹಿನ್ನೆಲೆಯಲ್ಲಿ ತೆರವಾಗಿರುವ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಖ್ಯಾತ ವಕೀಲ ಸಂಕೇತ್ ಏಣಗಿ ನೇಮಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ.


ಸಂಕೇತ್ ಏಣಕಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಮುಖರು. ರಾಷ್ಟ್ರೀಯ ಕಾಂಗ್ರೆಸ್ಸಿನ ಹಿರಿಯ ವಕ್ತಾರ ಜೊತೆಗೆ ಸುಪ್ರೀಂಕೋರ್ಟಿನ ಖ್ಯಾತ ವಕೀಲರು ಹೌದು. ಈ ಹಿನ್ನೆಲೆಯಲ್ಲಿ ಶೆಟ್ಟರ್ ಈಗ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರೋದ್ರಿಂದ, ಆ ಸ್ಥಾನಕ್ಕೆ ಸಂಕೇತ್ ಏಣಗಿ ನೇಮಿಸಿಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.

Comments (0)

Your email address will not be published. Required fields are marked *

Back to top button