ದಾವಣಗೆರೆ : ಹುಬ್ಬಳ್ಳಿ ಯಲ್ಲಿ ಕರ ಸೇವಕರ ಬಂಧನ ಖಂಡಿಸಿ ಮಾಜಿ ಸಚಿವ ರೇಣುಕಾಚಾರ್ಯ ಇಂದು ಪ್ರತಿಭಟನೆ ನಡೆಸಿದರು.
ದಾವಣಗೆರೆ ನಗರದ ಶ್ರೀ ರಾಮ ಮಂದಿರದಿಂದ ಪಾದಯಾತ್ರೆ ಮಾಡುವ ಮೂಲಕ ಬಡಾವಣೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ನಾನೂ ಕರ ಸೇವಕ ನನ್ನನ್ನು ಬಂಧಿಸಿ ಅಂತಾ ಘೋಷಣೆ ಕೂಗಿದರು. ರೇಣುಕಾರ್ಯ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್ ಮಾಜಿ ಮೇಯರ್ ಅಜಯ್ ಕುಮಾರ ಸೇರಿದಂತೆ ಹತ್ತಾರು ಜನರನ್ನ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಪ್ರಭಟನೆ ಉದ್ದೇಶಿಸಿ ಮಾತನಾಡಿದ ರೇಣುಕಾಚಾರ್ಯ ಬರುವ ೨೨ ರಂದು ರಾಮ ಮಂಧಿರ ಪ್ರಾಣ ಪ್ರತಿಷ್ಟಾಪನೆ ದಿನವೇ ರಾಜ್ಯ ಸರ್ಕಾರ ಪಥನಗೊಳ್ಳುತ್ತೆ ಅಂತ ಭವಿಷ್ಯ ನುಡಿದರು.