ಬೇಸಿಗೆಕಾಲ ಆರಂಭವಾದದ್ದರಿಂದ ಬಿಸಿಲು ಜಾಸ್ತಿ ಉರಿಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಪಕ್ಷಿಗಳಿಗೆ ಹಾಗೂ ಪ್ರಾಣಿಗಳಿಗೆ ನೀರು ಆಹಾರ ಪೂರೈಸಲಾಯಿತು. ಕಾಡಿನಲ್ಲಿ ನೀರು ಹಾಗೂ ಆಹಾರ ಇಲ್ಲದ ಕಾರಣ ಪ್ರಾಣಿಗಳು, ಪಕ್ಷಿಗಳು ಬದುಕಲು ಸಾಧ್ಯವಿಲ್ಲ. ಆದ್ದರಿಂದ ಪಕ್ಷಿಗಳಿಗೆ ನೀರು ಕಾಳು ಬಾಳೆಹಣ್ಣು ಹಾಕುವ ಮೂಲಕ ಈ ನಾಡಿನ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ದಯವಿಟ್ಟು ಪಕ್ಷಿಗಳಿಗೆ ಹಾಗೂ ಪ್ರಾಣಿಗಳಿಗೆ ನೀರು ಮತ್ತು ಆಹಾರ ನೀಡಿ, ನಿಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ಮೂಲಕ ನಮ್ಮ ಮೈಸೂರು ಹೃದಯವಂತ ಕನ್ನಡಿಗರ ಬಳಗದಿಂದ ಯಶಸ್ವಿಗೊಳಿಸಲಾಯಿತು. ಇದೆ ಸಂದರ್ಭದಲ್ಲಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಡಿಪಿಕೆ ಪರಮೇಶ್ ರವಿ ಗಿರೀಶ್ ಬಸವಣ್ಣ ಕಾಮತ್ ರಾಜೇಂದ್ರ ಶಿವಣ್ಣ ರಾಚಪ್ಪ ಮಹದೇವಸ್ವಾಮಿ ಉಪಸ್ಥಿತರಿದ್ದರು.