Wednesday, April 30, 2025
34.5 C
Bengaluru
LIVE
ಮನೆರಾಜ್ಯಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿದ ವೀರಯೋಧನಿಗೆ ಅದ್ಧೂರಿ ಸ್ವಾಗತ

ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸಿದ ವೀರಯೋಧನಿಗೆ ಅದ್ಧೂರಿ ಸ್ವಾಗತ

ಮಂಡ್ಯ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸಾರ್ಥಕ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ವೀರಯೋಧ ಕುರ್ನೆನಹಳ್ಳಿ ಅನಂತ ಅವರು ಹುಟ್ಟೂರಿಗೆ ಆಗಮಿಸಿದಾಗ ಹರಿಹರಪುರ, ಕುರ್ನೆನಹಳ್ಳಿ ಹಾಗೂ ಮಾದ್ದಿಕ್ಯಾ ಚಮನಹಳ್ಳಿ ಗ್ರಾಮಗಳ ನೂರಾರು ಜನರು, ಗ್ರಾಮಗಳ ಯುವ ಜನರು ಹೃದಯಸ್ಪರ್ಶಿಯಾಗಿ ಸ್ವಾಗತಿಸಿ ಗ್ರಾಮಕ್ಕೆ ಬರಮಾಡಿಕೊಂಡರು.

ಅಲಂಕರಿಸಿದ ತೆರೆದ ವಾಹನದಲ್ಲಿ ವೀರಯೋಧ ಕೆ.ಆರ್.ಅನಂತು ಅವರನ್ನು ಗ್ರಾಮದ ರಸ್ತೆಯಲ್ಲಿ ಮೆರವಣಿಗೆ ಮಾಡಿ ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಪಟಾಕಿಗನ್ನು ಸಿಡಿಸಿ, ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

ಗ್ರಾಮದ ಮುಖಂಡರಾದ ನವೀನ್ ಬಲರಾಮೇಗೌಡ, ಶ್ರೀನಿವಾಸ್, ಮೋಹನ್ ಕುಮಾರ್, ಲಕ್ಷ್ಮೀ ಪ್ರಸನ್ನ, ಹರೀಶ್, ಕೃಷ್ಣೆಗೌಡ, ರಾಮೇಗೌಡ ಸೇರಿದಂತೆ ನೂರಾರು ಯುವಕರು ವೀರಯೋಧ ಅನಂತು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments