ಬೆಂಗಳೂರು : ರಾಜಕೀಯ ವ್ಯಕ್ತಿಗಳನ್ನ ಸಿನಿಮಾರಂಗದವರು ಭೇಟಿ ಆಗೋದು ಸರ್ವೆಸಾಮಾನ್ಯವಾಗಿರುತ್ತೆ. ಅದರಂತೆ ಸ್ಯಾಂಡಲ್ವುಡ್ ಮಾಣಿಕ್ಯ, ರನ್ನ, ಕಿಚ್ಚ ಸುದೀಪ್ ಇಂದು ಮಧ್ಯಾಹ್ನ ಒಂದು ಗಂಟೆಗೆ ಡಿಸಿಎಂ ಡಿಕೆ ಶಿವಕುಮಾರ್ರನ್ನ ಭೇಟಿ ಮಾಡಲಿದ್ದಾರೆ.

ಭಾರೀ ಕುತೂಹಲ ಕೆರಳಿಸಿದ ಡಿಕೆಶಿ – ಕಿಚ್ಚ ಭೇಟಿ..!
ಕಳೆದ ಬಾರಿ ಡಿಕೆಶಿ ಒಡೆತನದ ಖಾಸಗಿ ಶಾಪಿಂಗ್ ಮಾಲ್ ಉದ್ಘಾಟನೆಯಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ಸ್ನೇಹ ಸಂಬಂಧ ಇನ್ನಷ್ಟು ಹೆಚ್ಚಾಗಿತ್ತು ಅನ್ನೋ ಮಾತುಗಳು ಕೇಳಿ ಬಂದಿದ್ದವು.
ವಿಷ್ಣು ಸ್ಮಾರಕ ನಿರ್ಮಾಣದ ಕುರಿತು ಚರ್ಚೆ ಸಾಧ್ಯತೆ..!
ಇಂದಿನ ಭೇಟಿ ಪ್ರಮುಖವಾಗಿ ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿ ನಿರ್ಮಾಣವಾಗಬೇಕು ಅನ್ನೋ ಚರ್ಚೆಗಳು ನಡೆಯುವ ಸಾಧ್ಯತೆಯಿದೆ. ಸಾಹಸಸಿಂಹ ವಿಷ್ಣುವರ್ಧನ್ ಅಗಲಿ 14 ವರ್ಷಗಳು ಕಳೆದಿವೆ, ಸಿನಿಮಾರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು. ಈ ಹಿಂದೆಯೂ ಕೂಡ ಹಲವು ಬಾರಿ ಈ ಹಿಂದೆ ಇದ್ದ ಸರ್ಕಾರಗಳಿಗೆ ಮನವಿ ಮಾಡಿದ್ದರು. ಆದ್ರೆ ಯಾರೂ ಕೂಡ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮುತುವರ್ಜಿ ವಹಿಸಿರಲಿಲ್ಲ ಈ ಬಾರಿಯಾದ್ರೂ ಡಿಸಿಎಂ ಡಿಕೆಶಿ ಗ್ರೀನ್ ಸಿಗ್ನಲ್ ಕೊಡ್ತಾರ ಅನ್ನೋದನ್ನ ಕಿಚ್ಚ ಭೇಟಿ ಬಳಿಕ ಗೊತ್ತಾಗಬೇಕಿದೆ.


