ಧಾರವಾಡ : ಧಾರವಾಡದಲ್ಲಿ ಸಿಐಟಿಯು ವತಿಯಿಂದ ಗ್ರಾ.ಪಂಚಾಯತಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ನಗರದ ಡಿಸಿ ಕಚೇರಿ ಎದುರು ಗ್ರಾ.ಪಂಚಾಯತಿ ನೌಕರರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿದ್ರು. ಕನಿಷ್ಟ ವೇತನ 31 ಸಾವಿರ ನಿಗದಿ, ಕನಿಷ್ಟ ಪಿಂಚಣಿ ರೂ. 6 ಸಾವಿರ, ಅನಾರೋಗ್ಯಪೀಡಿತರಿಗೆ ಆಸ್ಪತ್ರೆ ವೆಚ್ಚ, ವಿವಿಧ ಇಲಾಖೆಗಳ ಖಾಸಗೀಕರಣ ಕೈಬಿಡುವುದು, ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.