ರಾಜ್ಯಸುದ್ದಿ

ಚಿಕ್ಕಬಳ್ಳಾಪುರ: ಸಚಿವ ಸುಧಾಕರ್​ ಆಪ್ತ, ಅಶ್ವತ್ಥನಾರಾಯಣ ಬಾಬು​ ಮನೆ ಮೇಲೂ ಇ.ಡಿ ದಾಳಿ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ನಿರ್ದೇಶಕ ಅಶ್ವತನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಉಲವಾಡಿ ಗ್ರಾಮದ ನಿವಾಸ ಹಾಗೂ ಚಿಂತಾಮಣಿ ನಗರದ ಪ್ರಭಾಕರ್ ಲೇಔಟ್​ನ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿಂತಾಮಣಿ ತಾಲೂಕಿನ ಅಶ್ವತ್​ ನಾರಾಯಣ ಬಾಬು ಕೋಚಿಮುಲ್​ ನಿದೇರ್ಶಕರಾಗಿದ್ದಾರೆ. ಎರಡು ಬಾರಿ ಪಕ್ಷೇತರವಾಗಿ ( ಡಾ.ಎಂ.ಸಿ. ಸುಧಾಕರ್​ ಬಣ) ಕೋಚಿಮುಲ್​ ನಿರ್ದೇಶಕರಾಗಿದ್ದಾರೆ.

Comments (0)

Your email address will not be published. Required fields are marked *

Back to top button