ಚಾಮರಾಜನಗರ: ಮನೆಯಲ್ಲೇ ಅಕ್ರಮವಾಗಿ ವೈನ್ ತಯಾರಿಸಿ ಮಾರುತ್ತಿದ್ದ ಅಕ್ರಮ ಜಾಲದ ಜಾಡು ಹಿಡಿದು ಅಬಕಾರಿ ಜಂಟಿ ಆಯುಕ್ತ ಫಕೀರಪ್ಪ ಛಲವಾದಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು.ಸುಮಾರು 3 ಲಕ್ಷದ 4 ಸಾವಿರ ರೂಪಾಯಿ ಮೌಲ್ಯದ 380 ಬಾಟಲ್ ವೈನ್ ವಶಪಡಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತರನ್ನ ತೀವ್ರ ವಿಚಾರಣೆಗೆ ಒಳಪಡಿಸಿಯಲಾಗಿದೆ. ಆರೋಪಿ ಗುಂಡ್ಲುಪೇಟೆ ತಾಲೂಕಿನ ಬೇಗೂರು ನಿವಾಸಿ ದಿನೇಶ್ ನಾಯ್ಡು ಎಂದು ಗುರುತಿಸಲಾಗಿದ್ದು, ಬೇಗೂರಿನ ಇನ್ನು ಅನೇಕ ಮನೆಗಳಲ್ಲಿ ಈ ರೀತಿಯ ಅಕ್ರಮ ವೈನ್ ತಯಾರಿಸುವ ಗ್ಯಾಂಗ್ ಇರಬಹುದು ಎಂದು ಅಬಕಾರಿ ಅಧಿಕಾರಿಗಳು ಶಂಕಿಸಿದ್ದಾರೆ.