Wednesday, June 25, 2025
26.3 C
Bengaluru
Google search engine
LIVE
ಮನೆರಾಜ್ಯಹೊಸ ವಿವಾದ ಸೃಷ್ಟಿಸಿದ ನಟ ಚೇತನ್ ಹೇಳಿಕೆ, ಏನದು?

ಹೊಸ ವಿವಾದ ಸೃಷ್ಟಿಸಿದ ನಟ ಚೇತನ್ ಹೇಳಿಕೆ, ಏನದು?

ಬೀದರ್ : ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ನಟ ಚೇತನ್ ಇದೀಗ ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ರಾಜ್ಯಾದ್ಯಂತ ಪರ-ವಿರೋಧ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಶಾಲೆಗಳಲ್ಲಿ ದೇವರು ಪೂಜೆ ಬೇಡ ಎಂಬ ಹೇಳಿಕೆ ನೀಡಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.

ಬೀದರ್‌ನಲ್ಲಿ ಈ ಬಗ್ಗೆ ಮಾತನಾಡಿದ ನಟ ಚೇತನ್, ಶಾಲೆಗಳಲ್ಲಿ ದೇವರ ಪೂಜೆ ಬೇಕಾಗಿಲ್ಲ. ಪೂಜೆ, ಪುನಸ್ಕಾರವೆಂಬ ಮೌಢ್ಯ ನಿಮ್ಮ ನಿಮ್ಮ ಮನೆ ದೇಗುಲಗಳಲ್ಲಿ ಇಟ್ಟುಕೊಳ್ಳಿ. ಶಾಲೆಗಳಲ್ಲಿ ಮುಖ್ಯವಾಗಿ ವೈಜ್ಞಾನಿಕತೆ ಪಾಲಿಸಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ವೈಜ್ಞಾನಿಕತೆಯಿಂದಲೇ ಸತ್ಯ, ವೈಜ್ಞಾನಿಕ ನಡುವೆ ಸತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಲೆಗಳಲ್ಲಾಗಲಿ,, ಸರ್ಕಾರಿ ಕಚೇರಿಗಳಲ್ಲಾಗಲಿ ಯಾವುದೇ ದೇವರ ಪೂಜೆ ಎಂಬ ಮೌಢ್ಯ ಬೇಕಾಗಿಲ್ಲ. ಅವೆಲ್ಲ ನಿಮ್ಮ ಮನೆಗಳಲ್ಲಿ ಆಚರಿಸಲು ನಿಮಗೆ ಹಕ್ಕಿದೆ ನಿಮ್ಮ ನಂಬಿಕೆಗಳು ಮನೆ, ಗುಡಿ-ಗುಂಡಾರದಲ್ಲಿ ಇಟ್ಟುಕೊಳ್ಳಿ. ನಮಗೆ ವೈಜ್ಞಾನಿಕ ಬೇಕು, ವೈಜ್ಞಾನಿಕತೆಯಿಂದಲೇ ಸಂವಿಧಾನ ಅರ್ಥ ಮಾಡಿಕೊಳ್ಳಬಹುದು. ವೈಜ್ಞಾನಿಕ ಗೊತ್ತಿಲ್ಲದೇ ಮೌಢ್ಯ-ಕಂದಾಚಾರ, ಮೂಡನಂಬಿಕೆ ಇದ್ದರೆ ಸಂವಿಧಾನ ಪೀಠಿಕೆ ಕಾರ್ಯರೂಪಕ್ಕೆ ತರಲು ಆಗಲ್ಲ ಎಂದಿದ್ದಾರೆ.

ಇನ್ನು ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟ ಚೇತನ, ಇವೆಲ್ಲ ಸಣ್ಣಪುಟ್ಟ ವಿಷಯಗಳು ಮುಖ್ಯ ಆಗಲ್ಲ. ನಮ್ಮ ವಿದ್ಯಾಮಂದಿರದಲ್ಲಿ ಸಂವಿಧಾನದ ಪಾಠ ಬೇಕು. ಜಾತ್ಯಾತೀತ, ಸಮಾನತೆ, ನ್ಯಾಯ ಧರ್ಮನಿರಪೇಕ್ಷತೆ ಎನ್ನುವುದು ನಮಗೆ ಬೇಕಾಗಿದೆ. ಅದುಬಿಟ್ಟು ಸಣ್ಣಪುಟ್ಟ ಹೆಸರು ಬದಲಾವಣೆಯಿಂದ ನಮಗೆ ಏನೂ ವ್ಯತ್ಯಾಸವಾಗೊಲ್ಲ. ನಾವು ಕುವೆಂಪು ಅನುಯಾನಿಗಳು, ಅವರು ಏನಾದರೂ ಉದ್ದೇಶ ಇಟ್ಟುಕೊಂಡು ಬದಲಾಯಿಸಿರಬೇಕು ಎಂದು ವಸತಿ ಶಾಲೆಗಳ ಘೋಷವಾಕ್ಯ ಬದಲಾವಣೆಯನ್ನ ಪರೋಕ್ಷವಾಗಿ ಸಮರ್ಥಿಸಿಕೊಂಡರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments