ರಾಜ್ಯಸುದ್ದಿ

ಕೆಆರ್​​ಟಿಸಿಯಿಂದ ಹೊಸ ಬಸ್​ಗಳ ಪರಿಚಯ…!

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಶ್ವಮೇಧ ಕ್ಲಾಸಿಕಲ್​ ಎಂಬ 100 ಹೊಸ ಬಸ್​ಗಳನ್ನು ಪರಿಚಯಿಸಲಿದೆ. ನಾಳೆ ವಿಧಾನಸೌಧದ ಗ್ರ್ಯಾಂಡ್ ಸ್ಟೇಪ್ಸ್ ಮೇಲೆ ನೂರು ಹೊಸ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಲಿದ್ದಾರೆ. ಈ ಬಸ್​ಗಳು ಹೊಸ ವಿನ್ಯಾಸವನ್ನು ಹೊಂದಿದ್ದು, ವಿಶಾಲವಾದ ಲೆಗ್​​ರೂಮ್​ ಅನ್ನು ಹೊಂದಿದೆ. ಹಲವಾರು ವಿಶಿಷ್ಟ್ಯ ಗಳನ್ನು ಹೊಂದಿರುತ್ತವೆ.

ಬಸ್​ಗಳು ಪಾಯಿಂಟ್​​ -ಟು – ಪಾಯಿಂಟ್​​ ಎಕ್ಸ್​ಪ್ರೆಸ್​​ ವಾಹನಗಳಾಗಿ ಕಾರ್ಯನಿರ್ವಹಿಸುತ್ತವೆ. ಅಂದರೆ ಅವು ವಿವಿಧ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಚಲಿಸುತ್ತವೆ. ಕೆಲವು ವೈಶಿಷ್ಟ್ಯಗಳು ವಾಹನ ಸ್ಥಳ ಟ್ಯ್ರಾಕರ್​​, ಪ್ಯಾನಿಕ್ ಬಟನ್​ಗಳು ಮತ್ತು ಸಾರ್ವಜನಿಕ ವಿಳಾಸ ವ್ಯವಸ್ಥೆಗಳನ್ನು ಒಳಗೊಂಡಿವೆ.

 

Comments (0)

Your email address will not be published. Required fields are marked *

Back to top button