Monday, June 23, 2025
25.9 C
Bengaluru
Google search engine
LIVE
ಮನೆ#Exclusive NewsTop NewsJDSಗೆ ಭೀಮಬಲ ತಂದ ಮೈಸೂರು ಚಲೋ ಪಾದಯಾತ್ರೆ.!

JDSಗೆ ಭೀಮಬಲ ತಂದ ಮೈಸೂರು ಚಲೋ ಪಾದಯಾತ್ರೆ.!

JDSಗೆ ಭೀಮಬಲ ತಂದ ಮೈಸೂರು ಚಲೋ ಪಾದಯಾತ್ರೆ.!

ಮೈಸೂರು : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಜೆಡಿಎಸ್​-ಬಿಜೆಪಿಯ ಮೈಸೂರು ಚಲೋ ಮೈತ್ರಿ ಪಾದಯಾತ್ರೆ. ಯಾರಿಗೆ ಲಾಭ ಯಾರಿಗೆ ನಷ್ಟ ಎಂಬ ಚರ್ಚೆಗಳು ರಾಜ್ಯ ರಾಜಕೀಯದ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್​ ಸರ್ಕಾರದ ವಿರುದ್ಧ ಮುಡಾ ಹಗರಣ ಸೇರದಂತೆ ಹಲವು ಹಗರಣಗಳನ್ನು ಪ್ರಸ್ಥಾಪಿಸಿದ ಮೈತ್ರಿ ಪಕ್ಷಗಳು, ಬೃಹತ್ ಪಾದಯಾತ್ರೆ ಹಾಗೂ ಮಾರೋಪ ಸಮಾರಂಭ ಅದ್ಧೂರಿಯಾಗಿ ಏರ್ಪಾಡು ಮಾಡಿದ್ದಾರೆ.

ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ವಿಜೆಯೇಂದ್ರರನ್ನು ಮುನ್ನಲೆ ನಾಯಕನನ್ನು ಮಾಡಲು ಬಿಜೆಪಿ ನಾಯಕರು ಚಿಂತನೆ ನಡೆಸುತ್ತಿದ್ರೆ. ಮತ್ತೊಂದುಕಡೆ ಹಳೆ ಮೈಸೂರು ಭಾಗದಲ್ಲಿ ತಮ್ಮದೇ ಆದ ಪ್ರಭಾವನ್ನು ಹೊಂದಿರುವ ದಳಪತಿಗಳು, ಪಕ್ಷದ ಮುಂದಿನ ತಲೆಮಾರಿನ ನಾಯಕನೆಂದೇ ಹೆಳಲಾಗುತ್ತಿರುವ ನಿಖೀಲ್ ಕುಮಾರ್ ಸ್ವಾಮಿಯ ನಾಯಕತ್ವವನ್ನು, ದಳಪತಿಗಳ ಕೋಟೆಯಲ್ಲಿ ಭದ್ರಪಡಿಸಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್​-ಬಿಜೆಪಿ ಮೈಸೂರು ಚಲೋ ಪಾದಯಾತ್ರೆ ಯಾರಿಗೆ ಲಾಭ ಯಾರಿಗೆ ನಷ್ಟ.?

ಕರ್ನಾಟಕದ ರಾಜಕಾರಣದಲ್ಲಿ ಚಾಣಕ್ಯನಂತೆ ಕಾಲಕಾಲಕ್ಕೆ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಂಡು ಅಳೆದು ತೂಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೆಂದ್ರ ಸಚಿವ ಕುಮಾರಸ್ವಾಮಿಯ ಶಕ್ತಿ ದುಪ್ಪಟ್ಟು ಆಗಿದೆ ಎಂದು ಎನ್ನಲಾಗುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಸಾಕಷ್ಟು ಹಿಡಿತ ಹೋಂದಿದ್ದರು ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ಕುಮಾರಸ್ವಾಮಿ ನೀರೀಕ್ಷೆಯಂತೆ ಬರಲಿಲ್ಲ. ಆಗಿದ್ದಾಗಲು ಮಂಡ್ಯದಲ್ಲಿ ಎಂಪಿಯಾಗಿ ಆಯ್ಕೆಯಾಗುವ ಮೂಲಕ ಕೆಂದ್ರದಲ್ಲಿ ಸಚಿವರಾಗಿಕೂಡ ಆಯ್ಕೆ ಆಗಿದ್ದಾರೆ.

ಮತ್ತೊಂದುಕಡೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗ ಮತಧಾರರಿದ್ದು, ಅವರ ಕ್ರೂಡಿಕರಣ ಹಾಗೂ ಒಲವುಪಡೆಯುವ ಮೂಲಕ ಪಕ್ಷದ ಬಲವರ್ಧನೆಗೆ ಕುಮಾರಸ್ವಾಮಿ ಪಾದಯಾತ್ರೆಯನ್ನು ಸಮರ್ಥವಾಗಿ ಬಳಸಿಕೊಳ್ಳೂವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎನ್ನುತ್ತಿದ್ದಾರೆ ರಾಜಕೀಯ ವಿಶ್ಲೇಷಕರು. ಅದಕ್ಕೆ ಸ್ಪಷ್ಟ ನಿದರ್ಶನವೆಂದರೆ ಪಾದಯಾತ್ರೆಗೂ ಮುನ್ನ ನಮ್ಮ ಸಹಮತ ಹಾಗೂ ಒಪ್ಪಿಗೆಯಿಲ್ಲದೆ ನಾವು ಪಾದಯಾತ್ರೆಯಲ್ಲಿ ಪಾಲ್ಗಲೋಳ್ಳುವುದಿಲ್ಲ ಎಂದು ಹೇಳುವ ಮೂಲಕ ಕಮಲಪಾಳಯಕ್ಕೆ ಟಾಂಗ್ ಕೊಟದ್ಟಿದ್ದ ಕುಮಾರಸ್ವಾಮಿ, ರಾಷ್ಟ್ರೀಯ ಬಿಜೆಪಿಯ ನಾಯಕರ ಜೊತೆ ಚರ್ಚೆ ಮಾಡಿದ ಬಳಿಕ ಮತ್ತೆ ಮೈತ್ರಿ ಪಾದಯಾತ್ರೆಯಲ್ಲಿ ಸಕ್ರೀಯರಾದ್ರು.

ಅಲ್ದೆ ತಮಗೆ ಆರೋಗ್ಯ ಸರಿಯಿಲ್ಲದಿದ್ದರು ನಡೆಯುಲು ಸಾಧ್ಯವಾಗದ ಪಕ್ಷಕ್ಕೆ ನಿಖಿಲ್ ನಿಮ್ಮ ಜೊತೆ ಪಾದಯಾತ್ರೆ ಮಾಡುತ್ತಾರೆ. ನಾನು ಪ್ರಮುಖ ಸಭೆಗಳಲ್ಲಿ ಭಾಗವಹಿಸುತ್ತೇನೆಂದು ಹೇಳುವ ಮೂಲಕ ಪರೋಕ್ಷವಾಗಿ ದಳಪತಿಗಳ ಮುಂದಿನ ತಲೆಮಾರಿನ ನಾಯಕ ನಿಖಿಲ್ ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿಯೇಬಿಟ್ಟಿದ್ದರು.

ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿಯದ್ದೇ ಲೀಡ್ ರೋಲ್

ಆಡಳಿತರೂಡ ಕಾಂಗ್ರೆಸ್ ಪಕ್ಷಕ್ಕೆ ನಡುಕ ಹುಟ್ಟಿಸಿದ ದಳಪತಿಗಳ ಮೈಸೂರ್ ಚಲೋ ಪಾದಯಾತ್ರಯಲ್ಲಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಒಳಗೊಳಗೆ ಭೀತಿ ಉಂಟುಮಾಡುವ ಮಟ್ಟಕ್ಕೆ ಹವಾ ಕ್ರಿಯೇಟ್ ಮಾಡಿರುವ ದಳಪತಿಗಳು. ಮತ್ತೆ ಹಳೆ ಮೈಸೂರು ಭಾಗ ಸೇರಿದಂತೆ ರಾಜ್ಯದಲ್ಲಿನ ದಳಪತಿಗಳ ಮುಂದಿನ ನಾಯಕ ಹಾಗೂ ಒಕ್ಕಲಿಗರ ಏಕಮೇವ ದ್ವಿತೀಯ ನಾಯಕರಾಗಿ ಹೊರಹೊಮ್ಮಿದ ಕುಮಾರಸ್ವಾಮಿ, ಹಳೆ ಮೈಸೂರು ಭಾಗದ ಒಕ್ಕಲಿಗರ ಮನಸ್ಸಿಂದ ಜೆಡಿಎಸ್ ಮೆಲಿನ ಒಲವನ್ನು ಕಿತ್ತೊಗಿಯಲಾಗುವುದಿಲ್ಲ.

 

ಅಷ್ಟು ಮಾತ್ರವಲ್ಲದೆ ಯಾವ ಕಾರಣಕ್ಕೂ ಜೆಡಿಎಸ್ ಪ್ರಾಬಲ್ಯವನ್ನು ಕುಗ್ಗಿಸಲಾಗುವುದಿಲ್ಲ ಅದ್ಕಕೆ ಅವಕಾಶವನ್ನು ಕೊಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರಾಜ್ಯ ರಾಜಕೀಯ ಚಾಣಕ್ಯ ಕೇಂದ್ರ ಸಚಿವ ಕುಮಾರಸ್ವಾಮಿ ಕಾಂಗ್ರೆಸ್ ಕಲಿಗಳಿಗೆ ಮುಟ್ಟಿಸುವಲ್ಲಿ ಮೈತ್ರಿ ಪಕ್ಷಗಳ ಪಾದಯಾತ್ರೆ ಮೂಲಕ ಸಕ್ಸಸ್ ಆಗಿದ್ದಾರೆ.

ತಾನು ತಾತನಿಗೆ ತಕ್ಕ ಮೊಮ್ಮಗ, ತಂದೆಗೆ ತಕ್ಕ ಮಗ ಎಂದ ನಿಖಿಲ್..

ಇನ್ನು ಪಾದಯಾತ್ರೆಯ ಉದ್ದಕ್ಕೂ ಕೇಂದ್ರ ಸಚಿವ ಎಚ್ .ಡಿ ಕುಮಾರಸ್ವಾಮಿ ಅಬ್ಬರದ ಭಾಷಣಗಳು ಒಂದು ಕಡೆಯಾದ್ರೆ, ನಿಖಿಲ್ ಕುಮಾರಸ್ವಾಮಿ ಜನರ ಸಂಪರ್ಕ ಬೆಳೆಸಿದ್ದು, ದಾರಿ ಉದ್ದಕ್ಕೂ ಸಾಮಾನ್ಯ ಜನರಲ್ಲಿ ಬೆರೆತು ಆ ಮೂಲಕ ಅವರ ಪ್ರೀತಿ ವಿಶ್ವಾಸಗಳಿಸಲು ಅವರೊಂದಿಗೆ ತಿಂಡಿತಿನಿಸು, ಎಳೆನೀರು ಸೇವಿಸುವ ಮೂಲಕ ತಾನೂ ದಳಪತಿಗಳಂತೆ ಜನರನಡುವೆ ಸಂಪರ್ಕ ಸಾಧಿಸಲು ಸಮರ್ಪಕನಿದ್ದೇನೇ ತಾನು ತಂದೆಗೆ ತಕ್ಕ ಮಗ ಎಂದು ಸಾಭೀತು ಪಡಿಸುವಲ್ಲಿ ನಿಖಲ್ ಕೂಡ ಸಕ್ಸಸ್ ಆಗಿದ್ದಾರೆ ಎಂದ ದಳಪತಿಗಳ ಅಭಿಮಾನಿಗಳು. ಇನ್ನು ಜೆಡಿಎಸ್ ಸಪೋರ್ಟ್ ನಿಂದ ಪಾದಯಾತ್ರೆಗೆ ಮತ್ತಷ್ಟು ಮೆರುಗು ಬಂದಿದ್ದು, ಎಚ್ ಡಿ ಕುಮಾರಸ್ವಾಮಿ ಅವರ ಅನುಭವ ಜೊತೆಗೆ ನಿಖಿಲ್ ಕುಮಾರಸ್ವಾಮಿ ಫುಲ್ ಶೈನಿಂಗ್ ಆಗಿದ್ದಂತು ಸುಳ್ಳಲ್ಲ ಎನ್ನುತ್ತಿದ್ದಾರೆ. ಮೈತ್ರಿ ಪಕ್ಷಗಳ ಪಾದಯಾತ್ರೆಯನ್ನು ಕುರಿತು ಮಾತನಾಡುತ್ತಿರುವ ರಾಜಕೀಯ ಚಿಂತಕರು..

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments