Monday, June 23, 2025
26.3 C
Bengaluru
Google search engine
LIVE
ಮನೆರಾಜ್ಯಒಳಮೀಸಲಾತಿಗೆ 100 ಕೋಟಿ ಖರ್ಚಾಗಲಿದೆ : ಸಚಿವ ಹೆಚ್​.ಸಿ.ಮಹದೇವಪ್ಪ

ಒಳಮೀಸಲಾತಿಗೆ 100 ಕೋಟಿ ಖರ್ಚಾಗಲಿದೆ : ಸಚಿವ ಹೆಚ್​.ಸಿ.ಮಹದೇವಪ್ಪ

ಬೆಂಗಳೂರು : ಒಳಮೀಸಲಾತಿ ಕುರಿತಾದ ನಾಗಮೋಹನ್ ದಾಸ್ ಸಮೀಕ್ಷೆಗೆ ಸುಮಾರು ನೂರು ಕೋಟಿ ಖರ್ಚಾಗಲಿದೆ, ಪರಿಶಿಷ್ಠ ಜಾತಿಗಳಿಗೆ ಒಳಮೀಸಲಾತಿ ನೀಡುವ ಸಂಬಂಧ ಇಂದಿನಿಂದ ರಾಜ್ಯದಲ್ಲಿ ಮನೆ‌ಮನೆ ಗಣತಿ ಆರಂಭವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್​.ಸಿ.ಮಹದೇವಪ್ಪ ಹೇಳಿದರು.

ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದ ಜನ ಗಣತಿ ಆ್ಯಪ್ ಮೂಲಕ ಜನರ ವಿವರ ಸಂಗ್ರಹ ಕಾರ್ಯ ಆರಂಭವಾಗಿದೆ. ಕಾಂತರಾಜು ವರದಿಯಲ್ಲಿ ಮಾಹಿತಿ ಇಲ್ಲ. ಹೀಗಾಗಿ ಐತಿಹಾಸಿಕ ತೀರ್ಮಾನ ಮಾಡಲಾಗಿದೆ. ದುರುಪಯೋಗ ಆಗಬಾರದು, ಸುಳ್ಳು ಹೇಳಬಾರದು.

ಮೊಬೈಲ್ ಆ್ಯಪ್​..!

ಮೊಬೈಲ್ ಆಪ್ ಮೂಲಕವೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 6:30 ರಿಂದ ಸಂಜೆ 6:30ರವರೆಗೆ ಮೊಬೈಲ್ ಆಪ್ ಮೂಲಕ ದಾಖಲಾತಿ ಮಾಡಲಾಗುತ್ತದೆ. ಇದಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಯಾರೂ ತಪ್ಪಿಸಬಾರದು. ನಾವು ನಮ್ಮ ಚುನಾವಣಾ ಪ್ರಣಾಳಿಕೆಯಲ್ಲೂ ವರದಿ ಜಾರಿ ಬಗ್ಗೆ ಘೋಷಣೆ ಮಾಡಿದ್ದೆವು.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments